Don't Miss!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- News ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿರಡಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬರ್ತ್ ಡೇ
ಈ ಬಗ್ಗೆ ಮಾತನಾಡಿರುವ ರವಿಚಂದ್ರನ್, "ಈ ಬಾರಿಯ ನನ್ನ ಹುಟ್ಟುಹಬ್ಬ ಶಿರಡಿಯಲ್ಲಿ ಆಚರಿಸಿಕೊಳ್ಳಬೇಕೆಂದಿದ್ದೇನೆ. ಕುಟುಂಬ ಸಮೇತ ನಾನು ಶಿರಡಿಗೆ ಹೋಗುತ್ತಿದ್ದೇನೆ. ಬೆಂಗಳೂರಿಗೆ ಬರುವುದು ಎರಡು ಮೂರು ದಿನ ಆಗಬಹುದು...
ಹಾಗಾಗಿ ನನ್ನ ಅಭಿಮಾನಿಗಳು ಯಾರೂ ಮೇ 30ರಂದು ರಾಜಾಜಿನಗರದ ಮನೆಗೆ ಬರುರುವುದು ಬೇಡ" ಎಂದು ವಿನಂತಿಸಿಕೊಂಡಿದ್ದಾರೆ. ಆದರೆ ಈ ಬಾರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಒಂದು ಉಡುಗೊರೆಯನ್ನೂ ನೀಡುತ್ತಿದ್ದಾರೆ.
ಅದೇನೆಂದರೆ ತಮ್ಮ ಇಬ್ಬರು ಪುತ್ರರನ್ನೂ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ತಮ್ಮ ಇಬ್ಬರು ಪುತ್ರರಾದ ಮನೋರಂಜನ್ ಮತ್ತು ವಿಕ್ರಂ ಅವರ ಸ್ಕ್ರೀನ್ ನೇಮ್ ಸಹ ಬದಲಾಯಿಸುತ್ತಿದ್ದಾರೆ. ದೊಡ್ಡ ಮಗನಿಗೆ ಆರ್ ಆರ್ಯನ್ ಎಂದೂ ಚಿಕ್ಕವನಿಗೆ ಆರ್ ಸೂರ್ಯನ್ ಎಂದು ನಾಮಕರಣ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ.
ಇತ್ತೀಚೆಗೆ ರವಿಚಂದ್ರನ್ ಸಹ ತಮ್ಮ ಸ್ಕ್ರೀನ್ ನೇಮ್ ಬದಲಾಯಿಸಿಕೊಂಡಿದ್ದರು. ಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿ ತಮ್ಮ ಹೆಸರನ್ನು ರವಿಚಂದರನ್ (Ravichandaran) ಎಂದು ಬದಲಾಯಿಸಿಕೊಂಡಿದ್ದರು.
ಇದರ ಜೊತೆಗೆ ರವಿಚಂದ್ರನ್ ಅವರು ತಮ್ಮ ಹಿರಿಯ ಪುತ್ರನಿಗಾಗಿ ಮೂರು ಕಥೆಗಳನ್ನು ರೆಡಿ ಮಾಡಿಕೊಂಡಿದ್ದಾರೆ. ಈ ಚಿತ್ರಗಳ ಶೀರ್ಷಿಕೆಯನ್ನೂ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಅವಳು ಆವರಿಸಿದಳು, ಅಂದು ಹಾಗೂ ಅಪೂರ್ವ ಎಂಬ ಚಿತ್ರಗಳು ಅವರ ಬರ್ತ್ ಡೇ ದಿನವೇ ಅನೌನ್ಸ್ ಆಗಲಿವೆ. (ಒನ್ಇಂಡಿಯಾ ಕನ್ನಡ)