Don't Miss!
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- News ‘ಮೋದಿಯನ್ನು ಬಾಯಿಗೆ ಬಂದ ಹಾಗೆ ಬೈದ ದೇವೇಗೌಡ್ರು ಈಗ ಅಪ್ಪಿಕೊಳ್ಳುವುದು ಎಂದರೆ ಏನರ್ಥ?’
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂತೋಷ್ ಚಿತ್ರಮಂದಿರದಲ್ಲಿ ದರ್ಶನ್ ಅಭಿಮಾನಿಗಳ ಗದ್ದಲ-ಗಲಾಟೆ.!
ಚೂರು ಮಿಸ್ ಆಗಿದಿದ್ರೆ, ಒಬ್ಬರ ತಲೆ ಮೇಲೆ ಗಾಜಿನ ಬಾಟಲಿ ಬೀಳ್ತಿತ್ತು. ಪ್ರೊಜೆಕ್ಟರ್ ರೂಮ್ ಒಳಗೆ ಚಪ್ಪಲಿಗಳ ಸುರಿಮಳೆ ಆಗುತ್ತಿತ್ತು. ಎಚ್ಚರ ತಪ್ಪಿದ್ರೆ, ಸಂತೋಷ್ ಚಿತ್ರಮಂದಿರಕ್ಕೆ ಇವತ್ತು ಒಂದು ಗತಿ ಆಗ್ತಿತ್ತು.! ಯಾಕೆ ಅಂತ ಡೀಟೇಲ್ ಆಗಿ ಹೇಳ್ತೀವಿ ಓದಿ....
ಆಗಷ್ಟೇ ದರ್ಶನ್ ಅಭಿನಯದ 'ಜಗ್ಗುದಾದಾ' ಚಿತ್ರದ ಇಂಟರ್ ವೆಲ್ ಮುಗಿದಿತ್ತು. ಬ್ರೇಕ್ ನ ನಂತರ ಕಾಮಿಡಿ ಸೀನ್ ಪ್ರದರ್ಶನವಾಗ್ತಿತ್ತು. ಅಷ್ಟರಲ್ಲಿ, ಪ್ರೊಜೆಕ್ಟರ್ ಕೈ ಕೊಡ್ತು. ಬೆಳ್ಳಿಪರದೆ ಮಂಕಾಯ್ತು. ಸ್ಕ್ರೀನ್ ಡಲ್ ಆಯ್ತು ಎಂಬ ಕಾರಣಕ್ಕೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ರೊಚ್ಚಿಗೆದ್ರು.
ಹೇಳಿ ಕೇಳಿ, 'ಜಗ್ಗುದಾದಾ' ಚಿತ್ರದ ಮೇನ್ ಥಿಯೇಟರ್ ಈ ಸಂತೋಷ್. ದರ್ಶನ್ ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಲು ಎಲ್ಲೆಲ್ಲಿಂದಲೋ ಬಂದಿದ್ದ ಅಭಿಮಾನಿಗಳಿಗೆ ಹೀಗೆ ತಾಂತ್ರಿಕ ಕಿರಿಕಿರಿ ಆದ್ರೆ, ಸುಮ್ನೆ ಬಿಡ್ತಾರಾ? ಖಂಡಿತ ಇಲ್ಲ. ದರ್ಶನ್ ಅಭಿಮಾನಿಗಳು ಕೂಗಾಡಲು ಆರಂಭಿಸಿದ್ರು. ಪ್ರೊಜೆಕ್ಟರ್ ಕಿಂಡಿಗೆ ಗಾಜಿನ ಬಾಟಲಿ ಎಸೆಯಲು ಶುರು ಮಾಡಿದರು. [ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ]
ಅಭಿಮಾನಿಗಳ ಆಕ್ರೋಶ ಕಂಡು ಧಂಗಾದ ಸಂತೋಷ್ ಚಿತ್ರಮಂದಿರದ ತಂತ್ರಜ್ಞರು ಕೂಡಲೆ ಎಚ್ಚೆತ್ತರು. ಆದ ಅಡಚಣೆಯನ್ನ ಸರಿಪಡಿಸಿದರು. ನಂತರ ಕೂಲ್ ಆದ ದರ್ಶನ್ ಫ್ಯಾನ್ಸ್, ಆರಾಮಾಗಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ರು. ಘಟನೆಯ ವಿಡಿಯೋ ಇಲ್ಲಿದೆ ನೋಡಿ....