ಹಳೆ ಗಾಯದ ನೋವಿನಲ್ಲಿ ದರ್ಶನ್ : ಯಜಮಾನ' ಚಿತ್ರೀಕರಣಕ್ಕೆ ಬ್ರೇಕ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಯಜಮಾನ ಸಿನಿಮಾದ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಶೂಟಿಂಗ್ ನಿಂದ ಬಿಡುವು ಮಾಡಿಕೊಂಡು ದರ್ಶನ್ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರಂತೆ. ವಿಶ್ರಾಂತಿ ಪಡೆಯುವಂತದ್ದು ಏನಾಯ್ತು ಅಂತೀರಾ ? ಯಜಮಾನ ಸಿನಿಮಾ ಚಿತ್ರೀಕರಣ ಇತ್ತೀಚಿಗಷ್ಟೇ ಚಿಕ್ಕಮಂಗಳೂರಿನಲ್ಲಿ ನಡೆಯುವ ಸಂದರ್ಭದಲ್ಲಿ ದರ್ಶನ್ ಅವರಿಗೆ ಕೈ ನೋವು ಕಾಣಿಸಿಕೊಂಡಿದೆ.
ಹಾಗಂತ ದರ್ಶನ್ ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಕೈ ಗಾಯ ಮಾಡಿಕೊಂಡಿಲ್ಲ. ಈ ಹಿಂದೆ ಚಿತ್ರೀಕರಣದ ಸಮಯದಲ್ಲಿ ದರ್ಶನ್ ಅವರ ಕೈಗೆ ಗಾಯವಾಗಿತ್ತಂತೆ ಅದರ ನೋವು ಈಗ ಕಾಣಿಸಿಕೊಂಡಿದೆ.

ಅದಷ್ಟೇ ಅಷ್ಟೇ ಅಲ್ಲದೆ ಚಿಕ್ಕಮಂಗಳೂರಿನಲ್ಲಿ ಸಾಹಸ ದೃಶ್ಯಗಳನ್ನ ಚಿತ್ರೀಕರಿಸಲಾಗಿದ ಆ ವೇಳೆಯಲ್ಲಿ ಹಳೆ ಗಾಯದ ನೋವು ಕಾಣಿಸಿಕೊಂಡಿದೆ ಅದರ ಜೊತೆಯಲ್ಲಿ ಕಾಲು ಟ್ವಿಸ್ಟ್ ಆಗಿದೆ. ಆದ್ದರಿಂದ ಸಿನಿಮಾತಂಡ ಮೇ 2 ರಿಂದ ಬ್ರೇಕ್ ತೆಗೆದುಕೊಂಡಿದೆ.

ಇದೇ ಸಮಯದಲ್ಲಿ ದರ್ಶನ್ ತನ್ನ ಆಪ್ತರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಿದ್ದರು. ಇಂದು ನಡೆದ ವಿನೋದ್ ಪ್ರಭಾಕರ್ ಅವರ ಹೊಸ ಸಿನಿಮಾ ಮಹೂರ್ತದಲ್ಲಿಯೂ ದರ್ಶನ್ ಅವರ ಕೈಗೆ ಪೆಟ್ಟಾಗಿರುವುದು ಗೊತ್ತಾಗುತ್ತಿತ್ತು. ಸದ್ಯ ಚೇತರಿಸಿಕೊಳ್ಳುತ್ತಿರುವ ಚಾಲೆಂಜಿಂಗ್ ಸ್ಟಾರ್ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆ ಆಗುವ ಹೊತ್ತಿಗೆ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ.


Click it and Unblock the Notifications











