Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪರೂಪದ ಅಭಿಮಾನಿಯನ್ನ ಭೇಟಿ ಮಾಡಿದ ಚಾಲೆಂಜಿಂಗ್ ಸ್ಟಾರ್
Recommended Video
ಸಿನಿಮಾರಂಗದಲ್ಲಿ ಚಾಲ್ತಿಯಲ್ಲಿರುವ ಸ್ಟಾರ್ ಗಳ ಹೆಸರುಗಳನ್ನ ಅಭಿಮಾನಿಗಳು ಕೈಗಳ ಮೇಲೆ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ, ಇನ್ನು ಕೆಲವು ಅಭಿಮಾನಿಗಳು ಕೈಗಳ ಮೇಲೆ ಸ್ಟಾರ್ ಗಳಿಂದ ಆಟೋಗ್ರಾಫ್ ಪಡೆದುಕೊಂಡು ನಂತರ ಅದರ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳು ನೋಡುವುದಕ್ಕೆ ಸಿಗುತ್ತೆ.
ಕಳೆದ ತಿಂಗಳು ಇದೇ ಫಿಲ್ಮೀಬೀಟ್ ನಲ್ಲಿ ದಿವಂಗತ ನಟ ತೂಗುದೀಪ ಶ್ರೀನಿವಾಸ್ ಅವರ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿಯ ಸ್ಟೋರಿಯನ್ನ ಓದಿದ್ರಿ . ಆ ಅಭಿಮಾನಿ ಈಗ ಸಖತ್ ಫೇಮಸ್ ಆಗಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿ ಹಾಕಿಸಿಕೊಂಡಿರುವ ಹಚ್ಚೆ ಕೂಡ ಟ್ರೇಂಡ್ ಸೆಟ್ ಮಾಡುತ್ತಿದೆ.
ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ 'ತೂಗುದೀಪ ಶ್ರೀನಿವಾಸ್'
ಹಾಗಾದ್ರೆ ತೂಗುದೀಪ ಶ್ರೀನಿವಾಸ್ ಅವರ ಹಚ್ಚೆ ಹಾಕಿಸಿಕೊಂಡ ಅಭಿಮಾನಿ ಯಾರು? ಅವರದ್ದೇ ಹಚ್ಚೆ ಹಾಕಿಸಿಕೊಳ್ಳಲು ಕಾರಣವೇನು? ಟ್ಯಾಟೂ ಹಾಕಿಸಿಕೊಂಡವರು ಚಾಲೆಂಜಿಂಗ್ ಸ್ಟಾರ್ ಅವರನ್ನ ಭೇಟಿ ಮಾಡಿದ್ದು ಹೇಗೆ? ಟ್ರೇಂಡ್ ಸೆಟ್ ಮಾಡುತ್ತಿರುವ ಹಚ್ಚೆ ಹೇಗೆ ಫೇಮಸ್ ಆಗಿದೆ? ಇವೆಲ್ಲವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ
ಅಪರೂಪದ ಅಭಿಮಾನಿ ಶ್ಯಾಮ್
ಶ್ಯಾಮ್ ಮೂಲತಃ ಬೆಂಗಳೂರಿನವರು. ಸಾಕಷ್ಟು ವರ್ಷಗಳಿಂದ ದರ್ಶನ್ ಹಾಗೂ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರ ಅಭಿಮಾನಿ. ಚಾಲೆಂಜಿಂಗ್ ಸ್ಟಾರ್ ಅಭಿನಯದ ಪ್ರತಿ ಸಿನಿಮಾವನ್ನ ನೋಡುವುದರ ಜೊತೆಗೆ ಚಿತ್ರ ಬಿಡುಗಡೆಯ ದಿನವನ್ನ ಹಬ್ಬದಂತೆ ಆಚರಣೆ ಮಾಡುತ್ತಾರೆ.
ಹೆಸರು ಬದಲಿಸಿಕೊಂಡ ಅಭಿಮಾನಿ
ದರ್ಶನ್ ಅವರ ಮೇಲಿನ ಅಭಿಮಾನಕ್ಕಾಗಿ ಶ್ಯಾಮ್ ತಮ್ಮ ಹೆಸರಿನ ಜೊತೆಗೆ ಗಜ ತೂಗುದೀಪ ಎಂದು ಸೇರಿಸಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳ ಸಮೂಹದಲ್ಲಿ ಶ್ಯಾಮ್ ಗಜ ತೂಗುದೀಪ ಎಂದೇ ಗುರುತಿಸಿಕೊಂಡಿದ್ದಾರೆ.
ಅಪ್ಪನ ಹಚ್ಚೆಯನ್ನ ಮೆಚ್ಚಿದ ಮಗ
ಹಚ್ಚೆ ಹಾಕಿಸಿಕೊಂಡ ಕೆಲವೇ ದಿನಗಳಲ್ಲಿ ಶ್ಯಾಮ್ ದರ್ಶನ್ ಅವರನ್ನ ಭೇಟಿ ಮಾಡಿದ್ದಾರೆ. ತಾವು ಹಾಕಿಸಿಕೊಂಡಿರುವ ಹಚ್ಚೆಯನ್ನ ದರ್ಶನ್ ಅವರಿಗೆ ತೋರಿಸಿ ಮೆಚ್ಚುಗೆಯನ್ನ ಪಡೆದಿದ್ದಾರೆ.
ಟ್ರೇಂಡ್ ಸೆಟ್ ಮಾಡುತ್ತಿದೆ ಹಚ್ಚೆ
ತೂಗುದೀಪ ಶ್ರೀನಿವಾಸ್ ಅವರ ಹಚ್ಚೆ ಅಭಿಮಾನಿಗಳ ಮಧ್ಯೆ ಟ್ರೇಂಡ್ ಸೆಟ್ ಮಾಡುತ್ತಿದೆ. ಸಾಕಷ್ಟು ಜನರು ಇದೇ ರೀತಿಯ ಟ್ಯಾಟೂ ಹಾಕಿಸಿಕೊಳ್ಳಲು ಮನಸ್ಸು ಮಾಡಿದ್ದಾರೆ. ಸದ್ಯ ಹಚ್ಚೆ ಹಾಕಿಸಿಕೊಂಡಿರುವ ಶ್ಯಾಮ್ ಅವರ ಜೊತೆ ನಿಂತು ಟ್ಯಾಟೂ ತೋರಿಸಿಕೊಂಡು ಫೋಟೋಗಳನ್ನ ತೆಗಿಸಿಕೊಳ್ಳುತ್ತಿದ್ದಾರೆ.