Don't Miss!
- Finance ಬೆಂಗಳೂರಿನಲ್ಲಿ ಈ ಜಾಗದಲ್ಲಿ ಸೈಟು ಖರೀದಿಸಬೇಡಿ: BDAಯಿಂದ 279 ಅಕ್ರಮ ಬಡಾವಣೆ ಪತ್ತೆ
- News ಕರಗ ಮಹೋತ್ಸವ: ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ- ಇಲ್ಲಿದೆ ಸಂಪೂರ್ಣ ವಿವರ
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Automobiles ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ 'ರಾಜವೀರ ಮದಕರಿ ನಾಯಕ' ಸೆಟ್ನಿಂದ ಹೊರಬಿದ್ದ ಲೇಟೆಸ್ಟ್ ಸುದ್ದಿ
ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ನಿನ್ನೆಯಷ್ಟೆ ಬಿಡುಗಡೆ ಆಗಿರುವ ''ಡಿ..ಡಿ..ಡಿ..ಬಾಸ್'' ಹಾಡು ಸಖತ್ ಹಿಟ್ ಆಗಿದ್ದು, ಅಭಿಮಾನಿಗಳ ಬಾಯಲ್ಲಿ ನಲಿದಾಡುತ್ತಿದೆ.
ಹಾಡು ಬಿಡುಗಡೆ ಆದ ಖುಷಿಯಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಯನ್ನು ದರ್ಶನ್ ಅಭಿನಯದ 'ರಾಜವೀರ ಮದಕರಿ ನಾಯಕ' ಚಿತ್ರತಂಡ ನೀಡಿದೆ.
ಡಿ ಡಿ ಡಿ... 'ಡಿ ಬಾಸ್' ಅಭಿಮಾನಿಗಳು ಫಿದಾ: 'ರಾಬರ್ಟ್' ಹಾಡು ಹೇಗಿದೆ?
ದರ್ಶನ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಚಿತ್ರ ಎನಿಸಿಕೊಂಡಿರುವ 'ರಾಜವೀರ ಮದಕರಿ ನಾಯಕ' ಚಿತ್ರತಂಡದ ಸೆಟ್ನಿಂದ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಚಿತ್ರತಂಡವು ಶರವೇಗದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿ ಎರಡನೇ ಹಂತದತ್ತ ಸಾಗಿದೆ.
ಮತ್ತೊಂದು ಬ್ಲಾಕ್ ಬಸ್ಟರ್ ಗೆ ದರ್ಶನ್ ಸಜ್ಜು
ಐತಿಹಾಸಿಕ ಕತೆ ಆಧರಿತ ಚಿತ್ರದಲ್ಲಿ ದರ್ಶನ್ ಮದಕರಿ ನಾಯಕರಾಗಿ ಮಿಂಚಲಿದ್ದಾರೆ. ಈ ಹಿಂದೆ ಸಂಗೊಳ್ಳಿ ರಾಯಣ್ಣನಾಗಿ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದ ದರ್ಶನ್, 'ರಾಜವೀರ ಮದಕರಿ ನಾಯಕ' ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಅನ್ನು ಖಾತೆಗೆ ಹಾಕಿಕೊಳ್ಳಲು ಸಜ್ಜಾಗಿದ್ದಾರೆ.
ಸಂಸದೆ ಸುಮಲತಾ ಬಣ್ಣ ಹಚ್ಚಿದ್ದಾರೆ
ಚಿತ್ರದಲ್ಲಿ ಮಂಡ್ಯ ಸಂಸದೆ ಸುಮಲತಾ ಅವರು ರಾಜಮಾತೆ ಪಾತ್ರ ನಿರ್ವಹಿಸಿದ್ದು, ಅವರೂ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಂಸದೆ ಆದ ಬಳಿಕ ಸುಮಲತಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ದರ್ಶನ್-ಸುಮಲತಾ ಬಹು ದಿನಗಳ ಬಳಿಗೆ ಒಟ್ಟಿಗೆ ನಟಿಸುತ್ತಿದ್ದಾರೆ.
ವಿದೇಶದಲ್ಲಿ ನಡೆಯಬೇಕಿದ್ದ ಸ್ಟಾರ್ ನಟರ ಶೂಟಿಂಗ್ ರದ್ದು
ಚಿತ್ರದ ಕುರಿತು ವಿವಾದಗಳೂ ಎದ್ದಿದ್ದವು
ಈ ಚಿತ್ರದ ಕುರಿತು ವಿವಾದಗಳೂ ಎದ್ದಿದ್ದವು. ಮದಕರಿ ನಾಯಕ ಪಾತ್ರವನ್ನು ಸುದೀಪ್ ಮಾಡಬೇಕು ಎಂದು ಕೆಲವು ಸ್ವಾಮೀಜಿಗಳು, ಸಂಘಟನೆಗಳು ಒತ್ತಾಯ ಮಾಡಿದ್ದವು. ಆದರೆ ಕೊನೆಗೆ ದರ್ಶನ್ ಅವರೇ ಮದಕರಿ ನಾಯಕರಾಗಿ ಬಣ್ಣ ಹಚ್ಚಿದ್ದಾರೆ.
ಎಲ್ಲೆಲ್ಲಿ ಚಿತ್ರೀಕರಣ?
ಚಿತ್ರವು ವೇಣು ಅವರ ಕಾದಂಬರಿ ಆಧರಿತ ಎಂದು ಹೇಳಲಾಗುತ್ತಿದೆ. ಚಿತ್ರೀಕರಣವು ಕೇರಳದ, ಚಿತ್ರದುರ್ಗ, ಮುಂಬೈ ಗಳಲ್ಲಿ ನಡೆಯಲಿದೆ. ಕೇರಳದಲ್ಲಿ ಚಿತ್ರೀಕರಣ ಈಗಷ್ಟೆ ಮುಗಿದಿದೆ. ದೊಡ್ಡ-ದೊಡ್ಡ ಸೆಟ್ಗಳನ್ನು ಚಿತ್ರೀಕರಣಕ್ಕಾಗಿ ಚಿತ್ರತಂಡ ನಿರ್ಮಿಸಿದೆ. ಗ್ರಾಫಿಕ್ಸ್ ಭಾಗವೂ ಹೆಚ್ಚಿಗೆ ಇರಲಿದೆ.