Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಧರಣಿ'ಗೆ ಕೂತು 'ಕ್ರಾಂತಿ' ಮಾಡಲು ಮುಂದಾದ ಚಾಲೆಂಜಿಂಗ್ ಸ್ಟಾರ್ ದರ್ಶನ್: ಡಿಸೆಂಬರ್ 10ಕ್ಕೆ ಮುಹೂರ್ತ!
'ರಾಬರ್ಟ್' ಬಳಿಕ ದರ್ಶನ್ ಸಿನಿಮಾ ಯಾವುದೂ ಥಿಯೇಟರ್ಗೆ ಲಗ್ಗೆ ಇಟ್ಟಿಲ್ಲ. ಈಗ ಮಾಸ್ ಹೀರೊ ಚಾಲೆಂಜಿಂಗ್ ಸ್ಟಾರ್ ದರ್ಶನ್ ಥಿಯೇಟರ್ನಲ್ಲಿ 'ಕ್ರಾಂತಿ' ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಸುಮಾರು ಎರಡು ತಿಂಗಳು ಮುನ್ನವೇ ಸಿನಿಮಾ ಪ್ರಚಾರಕ್ಕೆ ಇಳಿದಿದ್ದಾರೆ.
ಇತ್ತೀಚೆಗಷ್ಟೇ ಡಿಜಿಟಲ್ ಮಾಧ್ಯಮಗಳೊಂದಿಗೆ 'ಕ್ರಾಂತಿ' ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಬಿಟ್ಟರೆ, ಟ್ರೈಲರ್, ಟೀಸರ್, ಹಾಡುಗಳ ಬಗ್ಗೆ ಮಾಹಿತಿ ಇರಲಿಲ್ಲ. ಆದ್ರೀಗ ದಾಸನ ಅಭಿಮಾನಿಗಳಿಗೆ ಖುಷಿ ಪಡುವಂತಹ ಮಾಹಿತಿಯನ್ನು ನಿರ್ಮಾಪಕಿ ಶೈಲಜಾನಾಗ್ ರವಾನಿಸಿದ್ದಾರೆ.
'ದಾಸ' ದರ್ಶನ್ 10ನೇ ಕ್ಲಾಸ್ನಲ್ಲಿ ಪಡೆದ ಅಂಕ ಎಷ್ಟು? ಎಲ್ಲಾ ವಿಷಯದಲ್ಲೂ ಒಂದೇ ಮಾರ್ಕ್ಸ್!
ಇದೂವರೆಗೂ ಚಿತ್ರತಂಡ ಕೇವಲ 'ಕ್ರಾಂತಿ' ಸಿನಿಮಾದ ಪೋಸ್ಟರ್ಗಳನ್ನು ಮಾತ್ರ ರಿಲೀಸ್ ಮಾಡಿತ್ತು. ಆದ್ರೀಗ ಮೊದಲ ಹಾಡನ್ನು ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದೆ. ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.
ಧರಣಿ ಹಾಡಿಗೆ ಮೂಹೂರ್ತ ಫಿಕ್ಸ್
ಹೌದು, 'ಕ್ರಾಂತಿ' ಸಿನಿಮಾ ಮೊದಲ ಹಾಡುಗಳು ಅಭಿಮಾನಿಗಳನ್ನು ಸೇರುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ವಿ ಹರಿಕೃಷ್ಣ ನಿರ್ದೇಶನದ ಜೊತೆಗೆ ಸಂಗೀತ ಕೂಡ ನೀಡಿದ್ದಾರೆ. ಹೀಗಾಗಿ ಹಾಡುಗಳ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಇದೇ ತಿಂಗಳು 10ರಂದು ಸಿನಿಮಾದ ಮೊದಲ ಹಾಡು 'ಧರಣಿ' ಬಿಡುಗಡೆಯಾಗುತ್ತಿದೆ. ಮೊದಲ ಹಾಡನ್ನು ರಿಲೀಸ್ ಮಾಡುವ ಮೂಲಕ ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ನೀಡಿದಂತಾಗುತ್ತೆ.
ಮೈಸೂರಿನಲ್ಲಿ 'ಕ್ರಾಂತಿ' ಸಾಂಗ್ ರಿಲೀಸ್
ಬೆಂಗಳೂರು ಬಿಟ್ಟರೆ ದರ್ಶನ್ ಕಾಣಸಿಗೋದು ಮೈಸೂರಿನಲ್ಲೇ ಹೆಚ್ಚು. ಹುಟ್ಟೂರು ಮೈಸೂರು ಅಂದರೆ, ದರ್ಶನ್ಗೆ ಪಂಚ ಪ್ರಾಣ. ಈ ಕಾರಣಕ್ಕೆ 'ಕ್ರಾಂತಿ'ಯ ಮೊದಲ ಹಾಡನ್ನು ಅರಮನೆ ನಗರಿ ಮೈಸೂರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅದ್ದೂರಿಯಾಗಿ ಧರಣಿ ಸಾಂಗ್ ಅನ್ನು ಬಿಡುಗಡೆ ಮಾಡುವುದಕ್ಕೆ ವೇದಿಕೆ ರೆಡಿಯಾಗುತ್ತಿದೆ. ಡಿಸೆಂಬರ್ 10ನೇ ತಾರೀಕು ದರ್ಶನ್ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿದೆ. "ಕ್ರಾಂತಿ ಸಿನಿಮಾದ ಧರಣಿ ಥೀಮ್ ಸಾಂಗ್ ಡಿಸೆಂಬರ್ 10ನೇ ತಾರೀಕು ಮೈಸೂರಿನಲ್ಲಿ ಬಿಡುಗಡೆ ಆಗಲಿದೆ" ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
ಅಕ್ಷರ 'ಕ್ರಾಂತಿ' ಮಾಡಲು ಸಜ್ಜಾಗದ ದರ್ಶನ್
ನಿರ್ದೇಶಕ ವಿ. ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಷನ್ನಲ್ಲಿ ಈಗಾಗಲೇ 'ಯಜಮಾನ' ಸಿನಿಮಾ ಬಂದಿದೆ. ಅಲ್ಲೂ ಕೂಡ ಕ್ರಾಂತಿ ಮಾಡಲಾಗಿತ್ತು. ಅಡುಗೆ ಎಣ್ಣಿ ಕ್ರಾಂತಿಯನ್ನು ತೆರೆಮೇಲೆ ತರಲಾಗಿತ್ತು. ಈ ಬಾರಿ ಇದೇ ಜೋಡಿ ಅಕ್ಷರ 'ಕ್ರಾಂತಿ' ಮಾಡಲು ಹೊರಟಿದೆ. ಹೀಗಾಗಿ ಸ್ಯಾಂಡಲ್ವುಡ್ನಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಹಲವು ವರ್ಷಗಳ ಬಳಿಕ ದರ್ಶನ್ ಹಾಗೂ ರಚಿತಾ ರಾಮ್ ಇಬ್ಬರೂ ಮತ್ತೆ ಒಟ್ಟಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಮತ್ತೆ 'ಬುಲ್ ಬುಲ್' ಜೋಡಿ ಬಾಕ್ಸಾಫೀಸ್ನಲ್ಲಿ ಬೇಜಾನ್ ಸದ್ದು ಮಾಡುವ ನಿರೀಕ್ಷೆಯಿದೆ.
'ಕ್ರಾಂತಿ' 2023ರ ಮೊದಲ ಸೂಪರ್ಸ್ಟಾರ್ ಸಿನಿಮಾ
2022 ಕನ್ನಡ ಚಿತ್ರರಂಗದ ಪಾಲಿಗೆ ಸುವರ್ಣ ವರ್ಷ ಅಂತ ಸಾಬೀತಾಗಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದಷ್ಟೇ ಅಲ್ಲ. ಬಾಕ್ಸಾಫೀಸ್ನಲ್ಲೂ ಧೂಳೆಬ್ಬಿಸಿ ಬಂದಿವೆ. ಈಗ 2023 ಸ್ಯಾಂಡಲ್ವುಡ್ ಪಾಲಿಗೆ ಹೇಗಿರುತ್ತೋ ಅನ್ನೋ ಕುತೂಹಲವಂತೂ ಇದ್ದೇ ಇದೆ. ಇದೇ ನಿರೀಕ್ಷೆಯೊಂದಿಗೆ 2023ರಲ್ಲಿ 'ಕ್ರಾಂತಿ' ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಬಾಕ್ಸಾಫೀಸ್ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡೋ ಎಲ್ಲಾ ಲಕ್ಷಣಗಳೂ ಇವೆ.