Don't Miss!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ದರ್ಶನ್ ಆಡಿದ ಅದ್ಬುತ ಮಾತುಗಳಿವು
ನಟ ಸಾಹಸ ಸಿಂಹ ವಿಷ್ಣುವರ್ಧನ್ ಅಂದರೆ ಕನ್ನಡ ಚಿತ್ರರಂಗದ ಎಲ್ಲ ನಟರಿಗೂ ಅದೇನೋ ಪ್ರೀತಿ.. ಗೌರವ. ವಿಷ್ಣು ಅವರ ಸಿನಿಮಾಗಳು, ಅವರು ನಡೆದು ಬಂದ ದಾರಿ ಅದೆಷ್ಟೋ ನಟರಿಗೆ ಸ್ಪೂರ್ತಿ ನೀಡುವಂತದ್ದು. ಸದ್ಯ ಇಂತಹ ಮಹಾನ್ ನಟನ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುಣಗಾನ ಮಾಡಿದ್ದಾರೆ.
'ವಿಷ್ಣು ರಾಷ್ಟ್ರೀಯ ಉತ್ಸವ'ದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಗುಣಗಾನ
'ಡಾ.ವಿಷ್ಣುವರ್ಧನ್ ರಾಷ್ಟೀಯ ಉತ್ಸವ' ಇಂದು(ಆಗಸ್ಟ್ 27) ದೆಹಲಿಯಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಇದೀಗ ನಟ ದರ್ಶನ್ ಕೂಡ ಶುಭಾಶಯವನ್ನು ಕೋರಿದ್ದಾರೆ. ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟೀಯ ಉತ್ಸವ'ಕ್ಕೆ ವಿಶ್ ಮಾಡಿದ್ದು, ಜೊತೆಗೆ ವಿಷ್ಣುವರ್ಧನ್ ಅವರ ಬಗ್ಗೆ ಅದ್ಬುತವಾಗಿ ಬರೆದುಕೊಂಡಿದ್ದಾರೆ. ಮುಂದೆ ಓದಿ...
ದರ್ಶನ್ ಟ್ವೀಟ್
''ನಿಜವಾದ ಕಲಾರಾಧಕನಿಗೆ ಎಂದಿಗೂ ಸಾವಿಲ್ಲ. ವಿಷ್ಣು ಸರ್ ಹೆಸರಲ್ಲಿ ರಾಷ್ಟ್ರೀಯ ಉತ್ಸವ ಮಾಡುತ್ತಾ ಇರುವ ಅಭಿಮಾನಿಗಳೆಲ್ಲರಿಗೂ ನನ್ನ ಅಭಿನಂದನೆಗಳು.'' ಎಂದು ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಶುಭ ಕೋರಿದ್ದಾರೆ.
ನಾನು ಕೂಡ ಅವರ ಅಭಿಮಾನಿ
''ನಾನು ಕೂಡ ಅವರ ಅಭಿಮಾನಿಗಳಲ್ಲೊಬ್ಬ. ಅಭಿಮಾನಿಗಳನ್ನು ವಿಷ್ಣು ಸರ್ ಎಷ್ಟು ಪ್ರೀತಿಸುತ್ತಿದ್ದರು ಅನ್ನೋದು ಎಲ್ಲರಿಗೂ ಗೊತ್ತು.'' - ದರ್ಶನ್, ನಟ
'ಡಾ.ವಿಷ್ಣುವರ್ಧನ ರಾಷ್ಟೀಯ ಉತ್ಸವ'ದ ಹತ್ತು ಹಲವು ವಿಶೇಷಗಳು
ಬೆಲೆಕಟ್ಟಲಾಗದ ಪ್ರೀತಿ
''ಅವರು ದೈಹಿಕವಾಗಿ ನಮ್ಮನ್ನು ಆಗಲಿ ಇಷ್ಟು ವರ್ಷಗಳು ಕಳೆದರೂ ಸಹ ಅವರ ಮೇಲೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಬೆಲೆಕಟ್ಟಲಾಗದ್ದು.'' - ದರ್ಶನ್, ನಟ
ಎಲ್ಲರಿಗೂ ಧನ್ಯವಾದಗಳು
''ಡಾ.ವಿಷ್ಣುವರ್ಧನ್ ರಾಷ್ಟೀಯ ಉತ್ಸವ'ಕ್ಕೆ ಕಾರಣರಾಗಿರುವ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ಒನ್ ಅಂಡ್ ಓನ್ಲಿ ಸಿಂಹ, ಸಾಹಸ ಸಿಂಹ. - ದರ್ಶನ್, ನಟ
'ಈ ಬಂಧನ'
2007ರಲ್ಲಿ ರಿಲೀಸ್ ಆಗಿದ್ದ 'ಈ ಬಂಧನ' ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆಗೆ ನಟ ದರ್ಶನ್ ಅಭಿನಯಿಸಿದ್ದರು.