Just In
- 4 hrs ago
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- 5 hrs ago
'ಮತ್ತೆ ಮನ್ವಂತರ' ತರುತ್ತಿದ್ದಾರೆ ಟಿ.ಎನ್.ಸೀತಾರಾಮ್
- 5 hrs ago
ಚೈತ್ರಾ ಕೊಟೂರು ಪತಿ ಹಾಗೂ ಕುಟುಂಬದವರು ನಾಪತ್ತೆ
- 6 hrs ago
ಪವನ್ ಕಲ್ಯಾಣ್ ಮಗಳ ಕುರಿತು ಸಹನಟಿ ಅನನ್ಯಾ ಮಾತು
Don't Miss!
- Sports
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
- News
ಕರ್ಫ್ಯೂ ನಡುವೆಯೂ ಮೋಜು ಮಸ್ತಿ! ಪಾರ್ಟಿ ಮಾಡುತ್ತಿದ್ದ ಗ್ಯಾಂಗ್ ಕಂಬಿ ಹಿಂದೆ..!
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Automobiles
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೃಷಿ ರಾಯಭಾರಿಯಾಗಿ ತಾವು ಮಾಡಲಿರುವ ಕಾರ್ಯದ ಬಗ್ಗೆ ದರ್ಶನ್ ಮಾತು
ನಟ ದರ್ಶನ್ ಅವರು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದು. ಕೃಷಿ ಇಲಾಖೆಯ ರಾಯಭಾರಿಯಾಗಿ ಪದಗ್ರಹಣ ಕಾರ್ಯಕ್ರಮವನ್ನು ಇಂದು ವಿಕಾಸ ಸೌಧದಲ್ಲಿ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಮಾತನಾಡಿದ ದರ್ಶನ್, 'ನಾನು ಬಹಳ ದೊಡ್ಡದೇನು ಮಾಡುತ್ತಿಲ್ಲ, ಸರ್ಕಾರದಿಂದ ರೈತರಿಗೆ ಏನೇನು ಸವಲತ್ತುಗಳಿರುತ್ತವೆಯೋ ಅದನ್ನು ಜಾಹೀರಾತು ಮೂಲಕ ರೈತರಿಗೆ ತಲುಪಿಸುವ ಕಾರ್ಯ ಅಷ್ಟನ್ನೇ ಮಾಡುತ್ತಿದ್ದೇವೆ' ಎಂದರು.
ದರ್ಶನ್ ಶ್ರಮವನ್ನು ಕೊಂಡಾಡಿದ ಸಿಎಂ ಯಡಿಯೂರಪ್ಪ
'ರೈತ ಎಂಬುದು ಎಮೋಷನ್ (ಭಾವನಾತ್ಮಕ ವಿಷಯ) ಎಂದು ಎಲ್ಲರು ಹೇಳುತ್ತಾರೆ, ಆದರೆ ಅದು ಹಾಗಲ್ಲ, ಅದು ಬ್ಲಡ್ ರಿಲೇಶನ್, (ರಕ್ತ ಸಂಬಂಧ) ಅವರು ಕೃಷಿ ಮಾಡಿ ನಮಗೆ ಅನ್ನ ಕೊಟ್ಟರಷ್ಟೆ ನಮ್ಮ ದೇಹದಲ್ಲಿ ರಕ್ತಪರಿಚಲನೆ ಸಾಧ್ಯ. ನನ್ನ ಕೈಯಿಂದ ರೈತರಿಗೆ ಏನೇನು ಒಳ್ಳೆಯದು ಮಾಡಲು ಸಾಧ್ಯವೋ ಅಷ್ಟು ಒಳ್ಳೆಯ ಕಾರ್ಯಕ್ರಗಳನ್ನು ನಾನು ಮಾಡುತ್ತೇನೆ' ಎಂದು ಭರವಸೆ ನೀಡಿದರು ದರ್ಶನ್.
ಭಾಷಣದ ಆರಂಭದಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಅವರನ್ನು ಹೊಗಳಿದ ನಟ ದರ್ಶನ್, 'ಬಿಸಿ ಪಾಟೀಲ್ ಅವರು ಮೊದಲಿಗೆ ಪೊಲೀಸ್ ನೌಕರರಾಗಿದ್ದರು. ಆ ನಂತರ ನಟರಾದರು, ಈಗ ಸಚಿವರಾಗಿದ್ದಾರೆ. ಅಲ್ಲಿಗೆ ಅವರು ಜೀವನವೆಲ್ಲಾ ಜನರ ಸೇವೆಯ ದಾರಿಯನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿದ್ದಾರೆ' ಎಂದರು ದರ್ಶನ್.
ಸಮಾರಂಭದಲ್ಲಿ ಹಾಜರಿದ್ದ ಎಲ್ಲರಿಗೂ ಗೌರವ ಪೂರ್ವಕವಾಗಿ ವಂದಿಸಿದರು ದರ್ಶನ್. ಸಿಎಂ ಯಡಿಯೂರಪ್ಪ ಅವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸಿದರು. ಸಂದೇಶ್ ನಾಗರಾಜ್ ಅವರೂ ಸಹ ಸಮಾರಂಭದಲ್ಲಿ ಹಾಜರಿದ್ದರು.
ನಟ ದರ್ಶನ್ ಅವರು ಕರ್ನಾಟಕ ಕೃಷಿ ಇಲಾಖೆಯ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ರಾಯಭಾರಿ ಆಗಲು ಯಾವುದೇ ಸಂಭಾವನೆಯನ್ನು ದರ್ಶನ್ ಅವರು ಸರ್ಕಾರದಿಂದ ಪಡೆದಿಲ್ಲ.