Just In
- 5 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 6 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 6 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 9 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಶನ್ ಅವರಿಗೆ ಚೇತನ್ ಚಂದ್ರ 'ಥ್ಯಾಂಕ್ಸ್' ಅಂದಿದ್ದೇಕೆ
ಇತ್ತೀಚೆಗೆ ಚಂದನವನ ಕ್ಷೇತ್ರದಲ್ಲಿ ಕೊಂಚ ಜಾಸ್ತೀನೆ ದೆವ್ವದ ಕಾಟ ಶುರುವಾದಂತಿದೆ. ಮೊನ್ನೆ ಮೊನ್ನೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 'ಶಿವಲಿಂಗ' ಚಿತ್ರದಲ್ಲಿ ದೆವ್ವವಾದ 'ರಹೀಂ'ನ ಕಾಟಕ್ಕೆ ಒಳಗಾಗಿದ್ದರು.
ಇದೀಗ ಹೊಸದಾಗಿ ನಟ ಚೇತನ್ ಚಂದ್ರ ಅವರ ಸರದಿ. ಹೌದು ಹೊಸ ಚಿತ್ರ 'ಸಂಯುಕ್ತ 2' ಎಂಬ ಹಾರರ್ ಸಿನಿಮಾದಲ್ಲಿ ಚೇತನ್ ಚಂದ್ರ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರದ ಮೂಹೂರ್ತ ಇಂದು (ಫೆಬ್ರವರಿ 27) ಮಹಾಲಕ್ಷ್ಮಿ ಲೇಔಟ್ ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈಗಾಗಲೇ ನೆರವೇರಿದೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡಿ ಕಂಪೆನಿ' ಶುರು ಮಾಡ್ತಾರಂತೆ]
ಇನ್ನು ಇಂದಿನ ಈ ಮೂಹೂರ್ತ ಕಾರ್ಯಕ್ರಮದ ವಿಶೇಷ ಏನಪ್ಪಾ ಅಂದ್ರೆ. ಚೇತನ್ ಚಂದ್ರ ಅವರ ಚಿತ್ರಕ್ಕೆ ಕ್ಲಾಪ್ ಮಾಡಲು ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು.
ನಟ ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕೆ ನಟ ಚೇತನ್ ಚಂದ್ರ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ನಟ ದರ್ಶನ್ ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.[ದರ್ಶನ್ ಅವರ ಈ ಭಾನುವಾರ ಹೇಗಿತ್ತು ಗೊತ್ತಾ?]
My new movie muhurtha is on February 27 th Saturday at 9 am. Venkateshwara temple , Mahalalshmi layout.I thank challenging star Darshan Anna for his support.
Posted by Chethan Chandra on Thursday, February 25, 2016
ಕ್ಯಾಮರಾ ಚಾಲನೆಯನ್ನು ಜೇಡ್ರಳ್ಳಿ ಕೃಷ್ಣಪ್ಪ ಅವರು ನೆರವೇರಿಸಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾರಾ ಗೋವಿಂದು ಅವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ನಿರ್ದೇಶಕ ಅಭಿರಾಮ್ ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಚಿಕ್ಕೋಡಿಯ ಸಂಜಯ್ ಅವರು ಬಂಡವಾಳ ಹೂಡುತ್ತಿದ್ದಾರೆ. ಸಂಗೀತ ನಿರ್ದೇಶಕ ಕೆ.ವಿ ರವಿಚಂದ್ರ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.
ನಟ ಚೇತನ್ ಚಂದ್ರ ಅವರು ನಟಿಸಿದ್ದ ಹಲವಾರು ಸಿನಿಮಾಗಳು ಬಾಕ್ಸಾಫೀಸ್ ಮಕಾಡೆ ಮಲಗಿದ್ದು, ಸದ್ಯಕ್ಕೆ ಒಂದು ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗ 'ಸಂಯುಕ್ತ 2' ಎಂಬ ಹಾರರ್ ಸಿನಿಮಾ ಸೆಟ್ಟೇರಿದ್ದು, ಅಟ್ ಲಿಸ್ಟ್ ದೆವ್ವವಾದರೂ ಕೈ ಹಿಡಿದು ನಡೆಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.