Don't Miss!
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಬ್ಬಿಂಗ್ ಮಾಡಲು ಸಜ್ಜಾದ ದರ್ಶನ್ 'ಕುರುಕ್ಷೇತ್ರ' ತಂಡ
ಮುನಿರತ್ನ ನಿರ್ಮಾಣದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಚಿತ್ರೀಕರಣದ ಕೊನೆಯ ಹಂತ ತಲುಪಿದೆ. ಗದಾಯುದ್ಧ ಸೀನ್ ಚಿತ್ರೀಕರಿಸೋದಕ್ಕೆ ಸಖಲ ತಯಾರಿ ಆಗುತ್ತಿರುವ ಬೆನ್ನಲೇ ಸಿನಿಮಾ ತಂಡ 'ಡಬ್ಬಿಂಗ್' ಮಾಡಲು ರೆಡಿಯಾಗಿದೆ. ನಾವ್ ಹೇಳ್ತಿರೋದು ಸಿನಿಮಾಗೆ ವಾಯ್ಸ್ ಡಬ್ಬಿಂಗ್ ಕೆಲಸದ ಬಗ್ಗೆ. ಹೌದು, ಚುನಾವಣೆ ಮುಂಚೆ ಸಿನಿಮಾವನ್ನ ತೆರೆಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಸಿನಿಮಾತಂಡ ಸಖತ್ ಚುರುಕಾಗಿ ಕೆಲಸ ಮಾಡ್ತಿದೆ.
ಹೈದರಾಬಾದ್ ನಲ್ಲಿ 'ಗದಾಯುದ್ಧ'ಕ್ಕಾಗಿ ತಂತ್ರಜ್ಞರೆಲ್ಲಾ ತಯಾರಿ ನಡೆಸಿದ್ದಾರೆ ಇತ್ತ ಸಿನಿಮಾದ ಸಂಕಲನಕಾರ 'ಜೋನಿ ಹರ್ಷ' ಡಬ್ಬಿಂಗ್ ಕೆಲಸ ಪ್ರಾರಂಭ ಮಾಡಿದ್ದಾರೆ. 'ಚಾಲೆಂಜಿಂಗ್ ಸ್ಟಾರ್' ಕೂಡ ಬೆಂಗಳೂರಿನಲ್ಲಿದ್ದು ನಾಳೆ ಮುಂಜಾನೆಯಿಂದ ದರ್ಶನ್ 'ಕುರುಕ್ಷೇತ್ರ' ಸಿನಿಮಾಗೆ ಡಬ್ಬಿಂಗ್ ಮಾಡಲಿದ್ದಾರೆ.
ಚುನಾವಣೆ ಬರುವ ಮುಂಚೆಯೇ ಜನರಿಗೆ 'ಕುರುಕ್ಷೇತ್ರ' ಸಿನಿಮಾವನ್ನ ತೋರಿಸಬೇಕಾಗಿ ಪಣ ತೊಟ್ಟಿರೋ ನಿರ್ಮಾಪಕ 'ಮುನಿರತ್ನ' ಹೆಚ್ಚುವರಿ ತಂತ್ರಜ್ಞರನ್ನ ಬಳಸಿಕೊಂಡು ಸಿನಿಮಾವನ್ನ ಆದಷ್ಟು ಬೇಗ ಮುಗಿಸುವ ಪ್ಲಾನ್ ಮಾಡಿದ್ದಾರೆ. 'ಬಾಹುಬಲಿ' ಸಿನಿಮಾಗೆ ಗ್ರಾಫಿಕ್ಸ್ ಮಾಡಿದ ತಂಡ ಈಗಾಗಲೇ ಚಿತ್ರದ ಫೋಸ್ಟ್ ಪ್ರೊಡಕ್ಷನ್ಸ್ ಕೆಲಸಕ್ಕೆ ಚಾಲನೆ ನೀಡಿದೆ. ನಾಳೆಯಿಂದ ಎರಡು ದಿನಗಳ ಕಾಲ ಡಬ್ಬಿಂಗ್ ಮುಗಿಸಿ ನಂತ್ರ ದರ್ಶನ್ ಗದಾಯುದ್ಧ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.