'ಹೀರೋ' ಎಂಬ ಟ್ರೆಂಡ್ಗೆ ಬ್ರೇಕ್ ಹಾಕಿದ ದಾಸ ದರ್ಶನ್
ಒಂದು ಸಿನಿಮಾಗೆ ಹೀರೋ ಬಹಳ ಮುಖ್ಯ. ಹೀರೋ ನೋಡಿ ಜನ ಥಿಯೇಟರ್ಗೆ ಬರುವ ಕಾಲ ಇದು. ಹೀರೋ ಕಾಲ್ಶೀಟ್ ಪಡೆದು ವರ್ಷಗಟ್ಟಲೇ ಕಾದು ಸಿನಿಮಾ ಮಾಡುವ ಟ್ರೆಂಡ್ ಇದು. ಹೀರೋಗಾಗಿ ಕಥೆ ಬರೆಯುವ ಸಂಪ್ರದಾಯ ಇದು. ಹೀಗೆ, ಪ್ರತಿಯೊಂದು ಸಂದರ್ಭದಲ್ಲಿ ಹೀರೋ ಮೇಲೆ ಅವಲಂಬಿತವಾಗುವ ಸಮಯ ಇದಾಗಿದೆ.
Recommended Video
ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ಪ್ರೆಸ್ಮೀಟ್, ಆಡಿಯೋ ಕಾರ್ಯಕ್ರಮ, ಪ್ರಿ-ರಿಲೀಸ್ ಕಾರ್ಯಕ್ರಮ, ಪ್ರಚಾರದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಹೀರೋ ಮುಂದೆ ನಿಲ್ಲಬೇಕು. ಇದು ಎಲ್ಲ ಸಿನಿ ಇಂಡಸ್ಟ್ರಿಯಲ್ಲೂ ಇರುವ ಟ್ರೆಂಡ್. ಈ ಟ್ರೆಂಡ್ನ ದಾಸ ದರ್ಶನ್ ಬ್ರೇಕ್ ಮಾಡಿದ್ದಾರೆ. ಮುಂದೆ ಓದಿ....

ಹೀರೋ ನಾನಲ್ಲ ಎನ್ನುವ ದರ್ಶನ್
ದರ್ಶನ್ ಪ್ರತಿ ಸಿನಿಮಾದಲ್ಲೂ ನಾನು ಈ ಚಿತ್ರದ ಹೀರೋ ಅಲ್ಲ ಅಂತಾನೇ ಹೇಳ್ತಾರೆ. ಈ ಚಿತ್ರಕ್ಕೆ ನಿಜವಾದ ಹೀರೋ ನಿರ್ಮಾಪಕ, ಆಮೇಲೆ ನಿರ್ದೇಶಕ ನಂತರ ನಾನು ಕೊನೆಯಲ್ಲಿ ಅಂತಾರೆ. ರಾಬರ್ಟ್ ವಿಚಾರದಲ್ಲೂ ಡಿ ಬಾಸ್ ಅದೇ ಮಾತುಗಳನ್ನು ಮುಂದುವರಿಸಿದ್ದಾರೆ. ಆಂಧ್ರದಲ್ಲಿ ನಡೆದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಜಗಪತಿ ಬಾಬು ನಿಜವಾದ ಹೀರೋ. ಅವರ ಪಾತ್ರದಿಂದಲೇ ನಮ್ಮ ಸಿನಿಮಾ ಇದೆ ಎಂದರು. ಉಮಾಪತಿ ಮೊದಲನೇ ಹೀರೋ ಎಂದರು.

ವೇದಿಕೆಗಳಲ್ಲಿ ಹಿಂದೆ ನಿಲ್ಲುವ ಡಿ ಬಾಸ್
ಸಿನಿಮಾಗೆ ಸಂಬಂಧಪಟ್ಟ ಯಾವುದೇ ವೇದಿಕೆಗಳಾಗಲಿ ದರ್ಶನ್ ಹಿಂದೆ ನಿಲ್ಲುವುದನ್ನು ಕಾಣಬಹುದು. ಗ್ರೂಪ್ ಫೋಟೋಗಳ ಸಂದರ್ಭದಲ್ಲಿ ಗಮನಿಸಿದರೆ ದರ್ಶನ್ ಯಾವಾಗಲೂ ಹಿಂದೆ ಹೆಜ್ಜೆಯಿಟ್ಟು ಉಳಿದವರಿಗೆ ಮುಂದೆ ಜಾಗ ಮಾಡಿಕೊಡ್ತಾರೆ. ಈ ಹಿಂದೆ ಕುರುಕ್ಷೇತ್ರ ಸಿನಿಮಾದ ವೇಳಯೂ ಅಷ್ಟೇ, ಯಜಮಾನ ಸಿನಿಮಾದ ವೇಳೆಯೂ ಇದನ್ನು ಗಮನಿಸಬಹುದು.

ಹುಬ್ಬಳ್ಳಿಯಲ್ಲಿ ಹಿಂದಿನ ಸಾಲಿನಲ್ಲಿ ಕುಳಿತು ದಾಸ
ಹುಬ್ಬಳ್ಳಿಯಲ್ಲಿ ನಡೆದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ನಟ ದರ್ಶನ್ ಮೊದಲ ಸಾಲಿನಲ್ಲಿ ಕುಳಿತುಕೊಂಡಿಲ್ಲ. ಎರಡು, ಮೂರು ಸಾಲು ಬಿಟ್ಟು ಮಧ್ಯದಲ್ಲಿ ಹೋಗಿ ಕುಳಿತುಕೊಂಡರು. ಸಹಜವಾಗಿ ಹೀರೋಗಳು ಮೊದಲ ಸಾಲಿನಲ್ಲಿ ಇರ್ತಾರೆ ಹಾಗೂ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ, ರಾಬರ್ಟ್ ಕಾರ್ಯಕ್ರಮದಲ್ಲಿ ದರ್ಶನ್ ಎಲ್ಲೋ ಮಧ್ಯದಲ್ಲಿ ಕುಳಿತಿದ್ದು ಕಂಡು ಬಂತು.

ವೇದಿಕೆಗಳಲ್ಲಿ ಹೊಸ ಕಲಾವಿದರಿಗೆ ಅವಕಾಶ
ದರ್ಶನ್ ನಟನೆಯ ಎಲ್ಲ ಸಿನಿಮಾ ಕಾರ್ಯಕ್ರಮಗಳಲ್ಲಿ ಎಲ್ಲ ಕಲಾವಿದರಿಗೂ ವೇದಿಕೆ ಮೇಲೆ ಬರುವ ಅವಕಾಶ ಮಾಡಿಕೊಡಲಾಗುತ್ತದೆ. ಸಣ್ಣ-ಪುಟ್ಟ ಪಾತ್ರ, ಪೋಷಕ ಪಾತ್ರ, ಗಾಯಕರು, ತಾಂತ್ರಿಕ ವರ್ಗಕ್ಕೆ ಮೊದಲು ಆದ್ಯತೆ ನೀಡಲಾಗುತ್ತದೆ. ರಾಬರ್ಟ್ ಕಾರ್ಯಕ್ರಮದಲ್ಲೂ ಇದು ಕಂಡು ಬಂತು. ಧರ್ಮಣ್ಣ, ದಿಲೀಪ್, ತೇಜಸ್ವಿನಿ ಪ್ರಕಾಶ್, ಐಶ್ವರ್ಯ ಪ್ರಸಾದ್, ಸೋನಾಲ್, ಶಿವರಾಜ್ ಕೆ ಆರ್ ಪೇಟೆ, ಚಿಕ್ಕಣ್ಣ ಹಾಗೂ ಸಿನಿಮಾದಲ್ಲಿ ನಟಿಸಿಲ್ಲ ಅಂದ್ರು ಅಭಿಷೇಕ್ ಅಂಬರೀಶ್, ಜಮೀರ್ ಅಹ್ಮದ್ ಖಾನ್ ಪುತ್ರ, ಯುವ ನಟ ಧ್ರುವನ್ ಅವರಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.


Click it and Unblock the Notifications











