ಕರ್ನಾಟಕ ವೀಲ್ ಚೇರ್ ಕ್ರಿಕೆಟ್ ತಂಡಕ್ಕೆ ಶುಭಕೋರಿದ ದರ್ಶನ್
ಚಾಲೆಂಜಿಂಗ್ ದರ್ಶನ್ ಸಿನಿಮಾ ಬಿಟ್ಟರೇ ಪ್ರಾಣಿ-ಪಕ್ಷಿಗಳು ಬಗ್ಗೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ತಮ್ಮ ಫಾರ್ಮ್ ಹೌಸ್ ನಲ್ಲಿ ಎಲ್ಲ ರೀತಿಯ ಸಾಕು ಪ್ರಾಣಿ ಹಾಗೂ ಪಕ್ಷಿಗಳು ಸಾಕುತ್ತಿದ್ದಾರೆ.
ಅದನ್ನ ಬಿಟ್ಟರೇ ಕ್ರೀಡೆಯಲ್ಲಿ ಕ್ರಿಕೆಟ್ ಅಂದ್ರೆ ದರ್ಶನ್ ಅವರಿಗೆ ಇಷ್ಟ. ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಆಡಿದ್ದರು. ದರ್ಶನ್ ಅಭಿಮಾನಿ ಸಂಘದವರು ನಡೆಸುವ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗ್ತಾರೆ.

ಹೀಗೆ, ಕ್ರಿಕೆಟ್ ಆಟದ ಬಗ್ಗೆ ಆಸಕ್ತಿ ಹೊಂದಿರುವ ಸ್ಟಾರ್ ನಟ ಈಗ ಕರ್ನಾಟಕ ವೀಲ್ ಚೇರ್ ಕ್ರಿಕೆಟ್ ತಂಡಕ್ಕೆ ವಿಶ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಕರ್ನಾಟಕ ವೀಲ್ ಚೇರ್ ಕ್ರಿಕೆಟ್ ತಂಡದ ಸದಸ್ಯರು ದರ್ಶನ್ ಅವರ ಭೇಟಿ ಮಾಡಿದ್ದರು. ಈ ವೇಳೆ ಅವರೊಂದಿಗೆ ಮಾತನಾಡಿದ ದರ್ಶನ್ ಮುಂಬರುವ ರಾಷ್ಟ್ರೀಯ ಮಟ್ಟದ ಟೂರ್ನಿಗೆ ವಿಶ್ ಮಾಡಿದ್ದಾರೆ.
ವೀಲ್ ಚೇರ್ ನಲ್ಲೇ ಕೂತು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮಾಡುವುದು ಈ ಆಟದ ವಿಶೇಷ. ಕರ್ನಾಟಕದ ತಂಡ ಸದ್ಯದಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಟೂರ್ನಿ ಆಡಲಿದೆ.
More from Filmibeat
English summary
Kannada superstar Darshan wishing Karnataka wheelchair cricket team for the upcoming national tournament.


Click it and Unblock the Notifications











