ದರ್ಶನ್ ಅಪಘಾತದ ಬಗ್ಗೆ ಪತ್ನಿ ವಿಜಯಲಕ್ಷ್ಮಿ ನೀಡಿದ ಪ್ರತಿಕ್ರಿಯೆ

Recommended Video

ದರ್ಶನ್ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು..? | Filmibeat Kannada

ನಟ ದರ್ಶನ್ ತಮ್ಮ ಆರೋಗ್ಯ ಸ್ಥಿತಿಯ ಹೇಗಿದೆ ಎಂಬುದನ್ನು ಅವರೇ ಆಡಿಯೋ ಮೂಲಕ ಕೆಲ ನಿಮಿಷಗಳ ಹಿಂದೆ ತಿಳಿಸಿದ್ದಾರೆ. ಈಗ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ಅಪಘಾತದ ವಿಷಯ ತಿಳಿದ ತಕ್ಷಣ ಗಾಬರಿಯಿಂದ ಮೈಸೂರಿನ ಆಸ್ಪತ್ರೆಗೆ ಪತ್ನಿ ವಿಜಯಲಕ್ಷ್ಮಿ ಬಂದರು. ಬಳಿಕ ಅವರ ಆರೋಗ್ಯ ವಿಚಾರಿಸಿ ಕೆಲ ಸಮಯ ಅವರ ಜೊತೆಗೆ ಮಾತನಾಡಿದರು. ಈ ವೇಳೆ ನಟ ದರ್ಶನ್ ಪುತ್ರ ವಿನೀಶ್ ಸಹ ಅಮ್ಮನ ಜೊತೆ ಇದ್ದರು.

ಸದ್ಯ ದರ್ಶನ್ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿರುವ ವಿಜಯಲಕ್ಷ್ಮಿ ''ಅಭಿಮಾನಿಗಳು ಆತಂಕ ಪಡಬೇಡಿ ಅವರಿಗೆ ಏನು ಆಗಿಲ್ಲ. ಕೈ ಮೂಳೆ ಫ್ರಾಕ್ಚರ್ ಆಗಿತ್ತು ಅಷ್ಟೇ'' ಎಂದು ಹೇಳಿದ್ದಾರೆ. ಮುಂದೆ ಓದಿ...

ವಿಜಯಲಕ್ಷ್ಮಿ ದರ್ಶನ್ ಪ್ರತಿಕ್ರಿಯೆ

ವಿಜಯಲಕ್ಷ್ಮಿ ದರ್ಶನ್ ಪ್ರತಿಕ್ರಿಯೆ

''ಇನ್ನು ಕೆಲವು ಗಂಟೆಗಳಲ್ಲಿ ವಾರ್ಡ್ ಗೆ ಶಿಫ್ಟ್ ಮಾಡುತ್ತಾರೆ. ಅವರ ಬಲಗೈಗೆ ಸಣ್ಣ ಪುಟ್ಟ ಗಾಯಗಳು ಆಗಿವೆ. ಈಗ ಆರಾಮಾಗಿದ್ದು, ನಮ್ಮ ಜೊತೆಗೆ ಮಾತನಾಡಿದ್ದಾರೆ. ಡಾಕ್ಟರ್ ಎಲ್ಲ ಚಿಕಿತ್ಸೆ ನೀಡಿದ್ದಾರೆ. ಇನ್ನು ಎರಡು ವಾರಗಳಲ್ಲಿ ಅವರು ಶೂಟಿಂಗ್ ಗೆ ಮರಳಬಹುದು.'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

ಗಾಬರಿ ಪಡುವ ಅಗತ್ಯವಿಲ್ಲ

ಗಾಬರಿ ಪಡುವ ಅಗತ್ಯವಿಲ್ಲ

''ಅಭಿಮಾನಿಗಳು ಆತಂಕ ಪಡಬೇಡಿ ಅವರಿಗೆ ಏನು ಆಗಿಲ್ಲ. ಕೈ ಮೂಳೆ ಫ್ರಾಕ್ಚರ್ ಆಗಿತ್ತು. ಆ ಕಾರಣ ಕೆಲವು ದಿನ ವಿಶ್ರಾಂತಿ ಬೇಕಾಗಿದೆ. ಅದು ಬಿಟ್ಟರೆ ಗಾಬರಿ ಪಡುವ ಅಗತ್ಯ ಏನು ಇಲ್ಲ. ಸದ್ಯಕ್ಕೆ ಐ ಸಿ ಯು ನಲ್ಲಿ ಇದ್ದಾರೆ. ಒಂದು ಗಂಟೆಯ ಬಳಿಕ ವಾರ್ಡ್ ಗೆ ಶಿಫ್ಟ್ ಮಾಡಲಾಗುವುದು ಎಂದು ಡಾಕ್ಟರ್ ತಿಳಿಸಿದ್ದಾರೆ.'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

ಅಮ್ಮ, ನಾನು, ವಿನೀಶ್ ಎಲ್ಲ ಇದ್ದೇವೆ

ಅಮ್ಮ, ನಾನು, ವಿನೀಶ್ ಎಲ್ಲ ಇದ್ದೇವೆ

''ದರ್ಶನ್ ಜೊತೆಗೆ ಅಮ್ಮ, ನಾನು, ವಿನೀಶ್ ಎಲ್ಲ ಇದ್ದೇವೆ. ಅವರ ತಮ್ಮ ಕೂಡ ಬರುತ್ತಿದ್ದಾರೆ. ದೇವರಾಜ್, ಪ್ರಜ್ವಲ್ ದೇವರಾಜ್ ಅವರು ಕೂಡ ತುಂಬ ಚೆನ್ನಾಗಿ ಇದ್ದಾರೆ. ಅವರನ್ನು ಸಹ ಈಗ ಮಾತನಾಡಿಕೊಂಡು ಬಂದೆವು. ಅವರ ಕುಟುಂಬದವರು ಆಸ್ಪತ್ರೆಗೆ ಬಂದಿದ್ದಾರೆ. ಎಲ್ಲರೂ ಹುಷಾರಾಗಿ ಇದ್ದಾರೆ.'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

ಅಭಿಮಾನಿಗಳಿಗೆ ದರ್ಶನ್ ಮನವಿ

ಅಭಿಮಾನಿಗಳಿಗೆ ದರ್ಶನ್ ಮನವಿ

''ಎಲ್ಲರಿಗೂ ನಮಸ್ಕಾರ. ಅಭಿಮಾನಿಗಳನ್ನು ನಾನು ಅನ್ನದಾತರು ಎಂದು ಕರೆಯಲು ಇಷ್ಟ ಪಡುತ್ತಾನೆ. ನಿಮ್ಮ ದಯೆಯಿಂದ ನಾನು ಆರಾಮಾಗಿದ್ದೇನೆ. ನನಗೆ ಏನು ಆಗಿಲ್ಲ.'' ಎಂದು ಹೇಳುವ ಮೂಲಕ ಎಲ್ಲರಲ್ಲಿ ಇದ್ದ ಆತಂಕದ ವಾತವರಣವನ್ನು ಮರೆಯಾಗುವಂತೆ ಮಾಡಿದ್ದಾರೆ.

ಆಸ್ಪತ್ರೆಗೆ ಯಾರು ಬರಬೇಡಿ

ಆಸ್ಪತ್ರೆಗೆ ಯಾರು ಬರಬೇಡಿ

''ದಯವಿಟ್ಟು ಆಸ್ಪತ್ರೆಗೆ ಯಾರು ಬರಬೇಡಿ. ಇದು ನನ್ನ ಮನವಿ ಅಂತ ತಿಳಿದುಕೊಳ್ಳಿ. ಆಸ್ಪತ್ರೆಯಲ್ಲಿ ಇರುವ ಬೇರೆಯರಿಗೆ ನಮ್ಮಿಂದ ತೊಂದರೆ ಆಗಬಾರದು. ಇಂದು ಸಂಜೆ ಅಥವಾ ನಾಳೆ ನಿಮ್ಮ ಮುಂದೆ ನಾನೇ ಬರುತ್ತೇನೆ'' ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ನಾಲ್ಕು ಜನರು ಪ್ರಯಾಣ ಮಾಡುತ್ತಿದ್ದರು

ನಾಲ್ಕು ಜನರು ಪ್ರಯಾಣ ಮಾಡುತ್ತಿದ್ದರು

ಅಪಘಾತವಾದ ಆಡಿ ಕ್ಯೂ 7 ಕಾರು ದರ್ಶನ್ ಅವರದಾಗಿತ್ತು. ಕಾರಿನಲ್ಲಿ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ದರ್ಶನ್ ಸ್ನೇಹಿತ ಈ ನಾಲ್ಕು ಜನರು ಪ್ರಯಾಣ ಮಾಡುತ್ತಿದ್ದರು. ದರ್ಶನ್ ಫ್ರೆಂಡ್ ಕಾರ್ ಡೈವಿಂಗ್ ಮಾಡುತ್ತಿದ್ದು, ದರ್ಶನ್ ಮುಂದಿನ ಸೀಟ್ ನಲ್ಲಿ ಕುಳಿತಿದ್ದರು.

More from Filmibeat

English summary
Kannada actor Darshan's wife Vijayalakshmi spoke about Darshan health condition. Darshan along with actors Devraj and Prajwal Devraj met with an accident near Mysuru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X