Don't Miss!
- News Lok Sabha Election: ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು: ಅಖಾಡದಲ್ಲಿ ನಕಲಿ ರಾಹುಲ್ ಗಾಂಧಿ, ಪಿಎಸ್ ಯಡಿಯೂರಪ್ಪ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪತ್ತೆದಾರ ಸಾಹಸಸಿಂಹ ಇನ್ನೊಂದು ರಹಸ್ಯ ಭೇದಿಸಬೇಕಾಗಿದೆ!
ಪತ್ತೆದಾರಿ ಕಥೆಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರನ್ನೂ ಆದಿಯಿಂದ ಅಂತ್ಯದವರೆಗೂ ಓದಿಸಿಕೊಂಡು ಹೋಗುವ ಶಕ್ತಿ ಆ ಪುಸ್ತಕಗಳಿಗಿದೆ. ಅದರಲ್ಲೂ ನಮ್ಮ ನೆಚ್ಚಿನ ನಾಯಕನಟರ ಪತ್ತೆದಾರಿ ಕಥೆಗಳು ಕಾಮಿಕ್ ರೂಪದಲ್ಲಿ ಬಂದರೆ ಹೇಗೆ? ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ಸಂಗತಿ ಇನ್ನೇನು ಇರಲಿಕ್ಕೆ ಸಾಧ್ಯ.
ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಕಾಮಿಕ್ ಸರಣಿಯ ಎರಡನೇ ಪುಸ್ತಕ ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಡಾ.ವಿಷ್ಣುವರ್ಧನ್ ಅವರ ಈ ಬಾರಿಯ ವಾರ್ಷಿಕ ಪುಣ್ಯ ಸ್ಮರಣೆಯಲ್ಲಿ (ಡಿಸೆಂಬರ್ 30) 'ಪತ್ತೇದಾರ ಸಾಹಸಸಿಂಹ - ಅರಣ್ಯದಲ್ಲಿ ಸಾಹಸ' ಕಾಮಿಕ್ ಸರಣಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. [ಕಾಮಿಕ್ ಸ್ಟ್ರಿಪ್ ನಲ್ಲಿ ಮತ್ತೆ ಹುಟ್ಟಿಬಂದ ವಿಷ್ಣುವರ್ಧನ್]
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹೊರತಂದಿರುವ 'ಪತ್ತೆದಾರ ಸಾಹಸಸಿಂಹ - ಅರಣ್ಯದಲ್ಲಿ ಸಾಹಸ' (Detective Sahasasimha - The Jungle Adventure) ಕಾಮಿಕ್ ಸರಣಿಯ ಎರಡನೇ ಭಾಗಕ್ಕೂ ನಾಡಿನಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ನಟ ಅನಿರುದ್ಧ್.
ಈ ಕಾಮಿಕ್ ಸರಣಿಯ ಬಹುತೇಕ ಕಂತುಗಳು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ಆಗಿದೆ. ಈ ಮೂಲಕ ಮಕ್ಕಳಿಗೆ ಮನರಂಜನೆ ಜೊತೆಗೆ ಶಿಕ್ಷಣ ನೀಡುವುದೇ ಆಗಿದೆ ಎನ್ನುತ್ತಾರೆ ಅನಿರುದ್ಧ್. ಇನ್ನೇಕೆ ತಡ ನಡುರಾತ್ರಿಯ ದರೋಡೆಗಳು ಮತ್ತು ಕಾಣೆಯಾದ ನಾಯಿಗಳ ನಿಗೂಢವನ್ನು ಬಯಲು ಮಾಡಲು ಸಾಹಸಸಿಂಹ ಅವರು ಅರಣ್ಯದ ಮಧ್ಯೆ ನಡೆಸುವ ಶೋಧದಲ್ಲಿ ನೀವೂ ಭಾಗಿಯಾಗಿ. (ಫಿಲ್ಮಿಬೀಟ್ ಕನ್ನಡ)