Don't Miss!
- News ಬಿಜೆಪಿ ಯುವಕರಿಗೆ ಪಕೋಡಾ ಮಾರಿ ಎಂದು ಹೇಳಿ ಅವಮಾನ ಮಾಡಿದೆ- ಡಿ ಕೆ ಶಿವಕುಮಾರ್ ಕಿಡಿ
- Finance ಐತಿಹಾಸಿಕ ಹರಾಜು: ಭಾರತ ಮೂಲದ ನೆಲ್ಲೂರು ಹಸು ಬ್ರೆಜಿಲ್ ನಲ್ಲಿ 40 ಕೋಟಿ ರೂ.ಗೆ ಮಾರಾಟ!
- Sports IPL 2023: SRH ಅತ್ಯಧಿಕ ಐಪಿಎಲ್ ಮೊತ್ತ ಗಳಿಸಿದ ಹೊರತಾಗಿಯೂ RCBಯ ಈ ದಾಖಲೆ ಟಚ್ ಮಾಡಲಾಗಲಿಲ್ಲ
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Automobiles ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ: ಟಾಟಾ ಟಿಯಾಗೋ ಇವಿ EMI, ಆನ್ ರೋಡ್ ಬೆಲೆ ಎಷ್ಟು?
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬಾಳಿನ ಹೊಸಿಲಲಿ ಸಾಯಿಕುಮಾರ್ ಮಗಳು
ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರ ಏಕೈಕ ಪುತ್ರಿ ಜ್ಯೋತಿರ್ಮಯಿ ಅವರ ಮದುವೆ ಆರತಕ್ಷತೆ ಕಾರ್ಯಕ್ರಮ ಹೈದರಾಬಾದಿನಲ್ಲಿ ಗುರುವಾರ (ಆ.9) ಅದ್ದೂರಿಯಾಗಿ ನೆರವೇರಿತು. ಎಂಬಿಬಿಎಸ್ ಓದಿರುವ ಜ್ಯೋತಿರ್ಮಯಿ ಅವರು ಬಿ.ಟೆಕ್ ಪದವೀಧರ ಕೃಷ್ಣ ಫಲ್ಗುಣ ಅವರನ್ನು ಬಾಳ ಸಂಗಾತಿಯಾಗಿ ಬರಮಾಡಿಕೊಂಡರು.
ಹೈದರಾಬಾದಿನ ಮಾಧಾಪುರ್ ನಲ್ಲಿರುವ 'N' ಕನ್ವೆಷನ್ ಸೆಂಟರ್ ನಲ್ಲಿ ಇವರಿಬ್ಬರ ಮದುವೆ ಆರತಕ್ಷತೆ ನೆರವೇರಿತು. ನೂತನ ದಾಂಪತ್ಯಕ್ಕೆ ಅಡಿಯಿಟ್ಟ ಇವರಿಬ್ಬರಿಗೆ ಚಿತ್ರರಂಗದ ಹಲವಾರು ಗಣ್ಯರು ಶುಭಕೋರಿದರು.
ಈ ಸಂದರ್ಭದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಮನೋ ಅವರು ಸುಮಧುರ ಗೀತೆಗಳನ್ನು ಹಾಡಿ ಮದುವೆ ಸಂಭ್ರಮಕ್ಕೆ ಮತ್ತಷ್ಟು ಕಳೆತಂದರು. ದಕ್ಷಿಣ ಚಿತ್ರರಂಗದ ಹಲವಾರು ತಾರೆಗಳು ಮದುವೆಗೆ ಸಾಕ್ಷಿಯಾದರು.
ಈ ಮದುವೆ ರಿಸೆಪ್ಷನ್ ಗಾಗಿ ಸಾಯಿಕುಮಾರ್ ವಿಶೇಷ ಆಹ್ವಾನ ಪತ್ರಿಕೆಯನ್ನೂ ಹಂಚಿದ್ದರು. ಪತ್ರಿಕೆ ತೆರೆಯುತ್ತಿದ್ದಂತೆ ಸಾಯಿಕುಮಾರ್ ಅವರ ಧ್ವನಿ ಕೇಳಿಬರುತ್ತಿತ್ತು. ಪತ್ರಿಕೆಯಲ್ಲಿರುವ ವಿಷಯವನ್ನು ಅವರೇ ಓದಿ ಆಹ್ವಾನಿಸುತ್ತಿದ್ದಾರೇನೋ ಎಂಬಂತಿತ್ತು.
ಖಾಕಿ ತೊಟ್ಟು ಕೈಯಲ್ಲೊಂದು ಲಾಠಿ ಹಿಡಿದು ಸರ ಸರನೆ ನಡೆದು ಬಂದು ತಲೆಯನ್ನೊಮ್ಮೆ ಮೇಲಕೆತ್ತಿ ನಿರರ್ಗಳವಾಗಿ ಡೈಲಾಗ್ ಹೊಡೆಯೊ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರೇ ಸ್ವತಃ ತಮ್ಮನ್ನು ಮದುವೆ ಆಹ್ವಾನಿಸುತ್ತಿದ್ದಾರೇನೋ ಎಂಬಂತೆ ಭಾಸವಾಗುತ್ತಿತ್ತು.
ಇದರ ಜೊತೆಗೆ ನಾಲ್ಕು ಸಿಂಹಗಳ ಫೋಟೋವನ್ನೂ ಹಾಕಿದ್ದರು ಅವರ ಪಕ್ಕದಲ್ಲಿ ಕಾಣಿಸದ ನಾಲ್ಕನೇ ಸಿಂಹವೇ ನಿಮ್ಮ ಸಾಯಿಕುಮಾರ್ ಎಂದೂ ಉಳಿದ ಸಿಂಹಗಳಲ್ಲಿ ಮರಿ ಸಿಂಹ ತಮ್ಮ ಪುತ್ರ, ಹೆಣ್ಣು ಸಿಂಹ ತಮ್ಮ ಧರ್ಮಪತ್ನಿ ಹಾಗೂ ವೃದ್ಧ ಸಿಂಹ ತಮ್ಮ ತಂದೆಯವರು ಎಂದು ಬರೆದಿದ್ದರು. ವಿನೋದಭರಿತ ಶೈಲಿಯಲ್ಲಿದ್ದ ಈ ಆಹ್ವಾನ ಪತ್ರಿಕೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು.