Don't Miss!
- News Summer Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ.. ಇಲ್ಲಿವೆ ಸಲಹೆಗಳು
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Automobiles ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನಸಾರೆ ಜೋಡಿಗೆ ಶುರುವಾಯ್ತು ಪ್ರಾಣಿ ಕಾಳಜಿ
Recommended Video
ಕನ್ನಡ ಸಿನಿಮಾ ಕಲಾವಿದರು ನಾವು ಅಭಿನಯಕ್ಕೆ ಮಾತ್ರ ಸೀಮಿತವಾಗಿಲ್ಲ ಎನ್ನುವುದನ್ನ ಆಗಾಗ ನಿರೂಪಿಸುತ್ತಾ ಇರುತ್ತಾರೆ. ನಿನ್ನೆಯಷ್ಟೇ ನಟಿ ರಾಧಿಕಾ ಪಂಡಿತ್ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗಬಾರದು ಎಂದು ತಮ್ಮ ಮನೆಯಂಗಳದಲ್ಲಿ ನೀರಿನ ಪಾತ್ರೆ ಇಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಬಿಸಿಲಿನಿಂದ ಪಕ್ಷಿಗಳನ್ನ ರಕ್ಷಿಸಿ ಎಂದು ಸಂದೇಶ ಸಾರಿದ್ದರು.
ಸಾಕಷ್ಟು ವರ್ಷಗಳಿಂದ ಪ್ರಾಣಿಗಳ ಬಗ್ಗೆ ಕಾಳಜಿ ತೋರುತ್ತಿರುವ ನಟಿ ಐಂದ್ರಿತಾ ಈ ಬಾರಿಯೂ ಎಂದಿನಂತೆ ಪ್ರಾಣಿಗಳಿಗಾಗಿ ಕೆಲಸ ಶುರು ಮಾಡಿದ್ದಾರೆ. ವಿಶೇಷ ಎಂದರೆ ಈ ಬಾರಿ ದೂದ್ ಪೇಡಾ ದಿಗಂತ್ ಕೂಡ ಐಂದ್ರಿತಾ ಜೊತೆ ಕೈ ಜೋಡಿಸಿದ್ದಾರೆ.
ಪಕ್ಷಿಗಳ ಕಾಳಜಿಗೆ ಮುಂದಾದ ಯಶ್ ಮಡದಿ ರಾಧಿಕಾ
ಬೇಸಿಗೆಯಲ್ಲಿ ಬೀದಿ ನಾಯಿಗಳಿಗೆ, ಪಕ್ಷಿಗಳಿಗೆ ನೀರು ಸಿಗುವುದು ಕಷ್ಟವಾಗುತ್ತದೆ ಆದ್ದರಿಂದ ನಮ್ಮ ಕೈಲಾಗುವಂತ ಸಹಾಯ ಮಾಡೋಣ ಎನ್ನುವ ನಿಟ್ಟಿನಲ್ಲಿ ಐಂದ್ರಿತಾ ಮತ್ತು ದಿಗಂತ್ ಈ ಕೆಲಸಕ್ಕೆ ಮುಂದಾಗಿದ್ದಾರೆ.
ಸನ್ನಿ(sunny) ಎನ್ನುವ ತಂಡದಿಂದ ಪ್ರಾಣಿ-ಪಕ್ಷಿಗಳಿಗಳಿಗೆ ನೀರಿ ಮತ್ತು ಆಹಾರ ವ್ಯವಸ್ಥೆ ಮಾಡಲು ಮಣ್ಣಿನ ಪಾತ್ರೆಗಳನ್ನ ನೀಡುತ್ತಿದ್ದಾರೆ. ಅವರಿಂದ ಸಹಾಯ ಪಡೆದ ಐಂದ್ರಿತಾ ಹಾಗೂ ದಿಗಂತ್ ತಮ್ಮ ಮನೆಯ ಸುತ್ತಾ ಮುತ್ತಾ ಮಣ್ಣಿನ ಪಾತ್ರೆಗಳನ್ನ ಪ್ರಾಣಿಗಳಿಗಾಗಿ ಮೀಸಲಿಟ್ಟಿದ್ದಾರೆ. ಪ್ರತಿ ವರ್ಷ ಬೇಸಿಗೆಯಲ್ಲೂ ರಸ್ತೆಗಿಳಿದು ಬೀದಿ ನಾಯಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮನಸಾರೆ ಬೆಡಗಿ ಈ ಬಾರಿಯೂ ಅನೇಕ ಅಭಿಮಾನಿಗಳಿಗೆ ಸ್ಫೂರ್ತಿ ಆಗಿದ್ದಾರೆ.
ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ದಿಗಂತ್-ಐಂದ್ರಿತಾ ರೇ!