Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಮ್ಮ ದಿನಕರ್ ಮುಂದಿನ ಸಿನಿಮಾ ಬಗ್ಗೆ ಸುಳಿವು ಬಿಟ್ಟುಕೊಟ್ಟ ದರ್ಶನ್
ನಟ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಚಂದನವನದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಅಪರೂಪಕ್ಕೆ ಸಿನಿಮಾ ಮಾಡಿದರು ಹಿಟ್ ಸಿನಿಮಾವನ್ನೇ ನೀಡುತ್ತಾರೆ ದಿನಕರ್.
ದಿನಕರ್ ತೂಗುದೀಪ್ ನಿರ್ದೇಶನದ ಎರಡು ಸಿನಿಮಾದಲ್ಲಿ ದರ್ಶನ್ ನಾಯಕರಾಗಿ ನಟಿಸಿದ್ದಾರೆ ಮತ್ತು ಎರಡೂ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿವೆ. ದರ್ಶನ್ ಅಭಿಮಾನಿಗಳಂತೂ ದಿನಕರ್ ಜೊತೆ ಮತ್ತೊಂದು ಸಿನಿಮಾ ಮಾಡಲು ಒತ್ತಾಯ ಹೇರುತ್ತಲೇ ಇರುತ್ತಾರೆ.
ರಾಬರ್ಟ್ ಸಿನಿಮಾದ ಪ್ರಚಾರ ಕಾರ್ಯದಲ್ಲಿರುವ ದರ್ಶನ್ಗೆ ಈಗ ಮತ್ತೊಮ್ಮೆ ದಿನಕರ್ ಅವರ ನಿರ್ದೇಶನದ ಸಿನಿಮಾದಲ್ಲಿ ಯಾವಾಗ ನಟಿಸುತ್ತೀರಿ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಸಕಾರಾತ್ಮಕವಾಗಿಯೇ ಉತ್ತರಿಸಿದ ದರ್ಶನ್, ದಿನಕರ್ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾ ಬಗ್ಗೆ ಸುಳಿವು ನೀಡಿದರು.
ಇತರ ಹೀರೋಗಳೊಂದಿಗೂ ಕೆಲಸ ಮಾಡಲಿ: ದರ್ಶನ್
ಸಂದರ್ಶನದಲ್ಲಿ ಮಾತನಾಡಿದ ದರ್ಶನ್, ದಿನಕರ್ ಇತರ ಹೀರೋಗಳೊಂದಿಗೂ ಕೆಲಸ ಮಾಡಲಿ. ಈಗ ಪುನೀತ್ ರಾಜ್ಕುಮಾರ್ ಸಿನಿಮಾವನ್ನು ದಿನಕರ್ ನಿರ್ದೇಶನ ಮಾಡಲಿದ್ದಾರೆ. ಉದ್ಯಮದ ಇನ್ನೂ ಬೇರೆ ನಟರೊಂದಿಗೂ ದಿನಕರ್ ಕೆಲಸ ಮಾಡಲಿ ಎಂದರು.
ನಾವಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತೇವೆ: ದರ್ಶನ್
'ದಿನಕರ್ ನಾನು ಸಿನಿಮಾ ಮಾಡುತ್ತೇವೆ. ನಾವು ಒಟ್ಟಿಗೆ ಇರುವವರು ಯಾವಾಗ ಬೇಕಾದರೂ ಸಿನಿಮಾ ಮಾಡಬಹುದು. ಮಾಡುತ್ತೇವೆ ಸಹ ಎಂದಿದ್ದಾರೆ ದರ್ಶನ್. ಈ ಮೊದಲು ದಿನಕರ್ ನಿರ್ದೇಶನದ ಸಾರಥಿ, ನವಗ್ರಹ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದಾರೆ. ಜೊತೆ-ಜೊತೆಯಲಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ದರ್ಶನ್.
ಸೆಟ್ಟೇರಲಿಲ್ಲ 'ಸರ್ವಾಂತರ್ಯಾಮಿ'
ದಿನಕರ್ ತೂಗುದೀಪ್ ನಿರ್ದೇಶನದ 'ಸರ್ವಾಂತರ್ಯಾಮಿ' ಹೆಸರಿನ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಸಿನಿಮಾ ಯಾಕೋ ಸೆಟ್ಟೇರಲೇ ಇಲ್ಲ. 2019 ರ ಸಮಯದಲ್ಲಿ 'ಶಿವನಂದಿ' ಟೈಟಲ್ ಅನ್ನು ದಿನಕರ್ ನೊಂದಣಿ ಮಾಡಿಸಿದರು. ಆಗ ದರ್ಶನ್ ಅವರಿಗಾಗಿ ಶಿವನಂದಿ ಹೆಸರಿನ ಸಿನಿಮಾ ದಿನಕರ್ ಮಾಡಲಿದ್ದಾರೆ ಎನ್ನಲಾಯಿತು.
Recommended Video
'ಜೇಮ್ಸ್' ಬಳಿಕ ಸೆಟ್ಟೇರಲಿದೆ ಸಿನಿಮಾ
ಆದರೆ ಅಂತಿಮವಾಗಿ ನಟ ಪುನೀತ್ ರಾಜ್ಕುಮಾರ್ ಅವರಿಗಾಗಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ ದಿನಕರ್ ತೂಗುದೀಪ್. ಈ ಕುರಿತು ಕೆಲವು ದಿನಗಳಿಂದಲೂ ಸುದ್ದಿ ಹರಿದಾಡುತ್ತಿತ್ತು. ಆದರೆ ನಟ ದರ್ಶನ್ ಅವರು ಸುದ್ದಿಯನ್ನು ಕನ್ಫರ್ಮ್ ಮಾಡಿದ್ದಾರೆ. 'ಜೇಮ್ಸ್' ಸಿನಿಮಾದ ಬಳಿಕ ದಿನಕರ್-ಪುನೀತ್ ಅವರ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.