Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ.ರಾಜ್ಕುಮಾರ್ ಯೋಗಗುರು ಹೊನ್ನಪ್ಪ ನಿಧನ
ಡಾ.ರಾಜ್ಕುಮಾರ್ ಅವರ ಯೋಗ ಗುರು ಆಗಿದ್ದ ಹೊನ್ನಪ್ಪ ಫಕೀರಪ್ಪ ನಾಯ್ಕರ್ ಇಂದು (ಮೇ 20) ನಿಧನರಾಗಿದ್ದಾರೆ.
90 ವರ್ಷ ವಯಸ್ಸಾಗಿದ್ದ ಹೊನ್ನಪ್ಪ ನಾಯ್ಕರ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಬೆಂಗಳೂರಿನ ಜೆ.ಪಿ.ನಗರದಲ್ಲಿ ವಾಸವಿದ್ದ ಹೊನ್ನಪ್ಪ ಅವರು ಕನಕಪುರ ರಸ್ತೆಯಲ್ಲಿ ಆಶ್ರಮವೊಂದನ್ನು ನಡೆಸುತ್ತಿದ್ದರು.
ಡಾ.ರಾಜ್ಕುಮಾರ್ ಅವರಿಗೆ ಹಲವು ವರ್ಷಗಳ ಕಾಲ ಹೊನ್ನಪ್ಪ ನಾಯ್ಕರ್ ಅವರೇ ಯೋಗ ಹೇಳಿಕೊಡುತ್ತಿದ್ದರು. 'ಕಾಮನಬಿಲ್ಲು' ಸಿನಿಮಾದಲ್ಲಿ ರಾಜ್ಕುಮಾರ್ ಪ್ರದರ್ಶಿಸಿರುವ ಅದ್ಭುತ ಯೋಗಭಂಗಿಗಳ ಹಿಂದೆ ಹೊನ್ನಪ್ಪ ನಾಯ್ಕರ್ ಅವರ ಯೋಗದಾನವೂ ಇದೆ.
ಡಾ.ರಾಜ್ಕುಮಾರ್ ಮಾತ್ರವಲ್ಲದೇ ಪಾರ್ವತಮ್ಮ ರಾಜ್ಕುಮಾರ್ ಹಾಗೂ ಅಣ್ಣಾವ್ರ ಕುಟುಂಬದ ಇತರರಿಗೂ ಹೊನ್ನಪ್ಪ ಯೋಗಾಭ್ಯಾಸ ಮಾಡಿಸುತ್ತಿದ್ದರು. ರಾಘವೇಂದ್ರ ರಾಜ್ಕುಮಾರ್ ಅವರಿಗೆ ಪಾರ್ಶ್ವವಾಯುವಾದ ಬಳಿಕ ಅವರಿಗೂ ಹೊನ್ನಪ್ಪ ಯೋಗಭ್ಯಾಸ ಹೇಳಿಕೊಟ್ಟಿದ್ದರು. ರಾಘವೇಂದ್ರ ರಾಜ್ಕುಮಾರ್ ಬಹುಬೇಗ ಚೇತರಿಸಿಕೊಂಡು ಚಿತ್ರೀಕರಣಗಳಿಗೆ ತೆರಳುವಷ್ಟರ ಮಟ್ಟಿಗೆ ದೇಹಾರೋಗ್ಯ ಸುಧಾರಿಸುವಂತಾಗುವ ಹಿಂದೆ ಹೊನ್ನಪ್ಪ ನಾಯ್ಕರ್ ಶ್ರಮವಿದೆ.
ಹೊನ್ನಪ್ಪ ಅವರ ಅಗಲಿಕೆಗೆ ಸಂತಾಪ ಸೂಚಿಸಿರುವ ರಾಘವೇಂದ್ರ ರಾಜ್ಕುಮಾರ್, ''ಅಪ್ಪಾಜಿಯವರ ಯೋಗಗುರುಗಳು ಅಗಲಿದ್ದು ಈ ಕ್ಷಣ ಮನಸ್ಸಿಗೆ ತುಂಬಲಾರದಷ್ಟು ದುಃಖವಾಗಿದೆ. ಗುರು ಬ್ರಹ್ಮಃ ಗುರು ವಿಷ್ಣು, ಗುರು ದೇವೋ ನಮಃ'' ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
Recommended Video
ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಹೊನ್ನಪ್ಪ ಅವರಿಗೆ ಮೂವರು ಮಕ್ಕಳಿದ್ದಾರೆ. ಹೊನ್ನಪ್ಪನವರ ಅಂತಿಮ ಸಂಸ್ಕಾರವನ್ನು ಕನಕಪುರ ಬಳಿಯ ನಾಗದೇವನಹಳ್ಳಿ ಬಳಿ ನೆರವೇರಿಸಲು ಕುಟುಂಬದವರು ನಿಶ್ಚಯಿಸಿದ್ದಾರೆ.