Don't Miss!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು ಕೆಟ್ಟ ನಟ ಅಂದ ಮುಕುಂದ್ ರಾಜ್ ವಿವಾದದ ಕಿಡಿ
ಈ ಕೃತಿಯಲ್ಲಿ ಮುಕುಂದ್ ರಾಜ್ ಅವರು ಬರೆದಿರುವ ಲೇಖನದಲ್ಲಿ ವಿಷ್ಣುವರ್ಧನ್ ಅವರಿಗೆ ಆಕ್ಟಿಂಗ್ ಬರುತ್ತಿರಲಿಲ್ಲ. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದಲ್ಲಿ ವಿಷ್ಣುವರ್ಧನ್ ಆಕ್ಟಿಂಗ್ ಸರಿ ಇರಲಿಲ್ಲ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಈಗ ಭಾರಿ ವಿವಾದ ತಲೆದೋರಿದೆ.
ಮುಕುಂದ್ ಅವರು ತಮ್ಮ ಲೇಖನದಲ್ಲಿ ಮತಾಡ್ ಮಾತಾಡು ಮಲ್ಲಿಗೆ ಸಿನಿಮಾ ಕರ್ನಾಟಕದ ಜನ ಅಪ್ಪಿಕೊಂಡು ನೋಡಬೇಕಾದ ಸಿನಿಮಾ. ಅಂತಹ ಸಿನಿಮಾವನ್ನು ಜನ ನೋಡಲಿಲ್ಲ. ಅದಕ್ಕೆ ಕಾರಣ ವಿಷ್ಣುವರ್ಧನ್ರಂತಹ ಹಿರಿಯ ನಟನ ಕೆಟ್ಟ ಅಭಿನಯ. ಹೊಸ ಹುಡುಗರನ್ನು ಹಾಕಿಕೊಂಡು ಮಾಡಿದ ಅಮೆರಿಕಾ ಅಮೆರಿಕಾ ಸಿನಿಮಾ ಯಶಸ್ವಿಯಾಗುತ್ತದೆ. ಆದರೆ ಮಾತಾಡ್ ಮಾತಾಡು ಮಲ್ಲಿಗೆ ಯಶಸ್ವಿಯಾಗಲಿಲ್ಲ.
ಮಾತಾಡ್ ಮಾತಾಡ್ ಚಿತ್ರದ ಸೋಲಿಗೆ ವಿಷ್ಣುವರ್ಧನ್ ಕಾರಣ ಎಂದು ಮುಕುಂದ್ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಈ ಮೂಲಕ ವಿಷ್ಣು ಅಭಿಮಾನಿಗಳನ್ನು ಕೆಣಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಕುಂದ್ ರಾಜ್ ಅವರು ನಾನು ಮಾಡಿರುವುದು ದೊಡ್ಡ ಅಪರಾಧವಲ್ಲ. ತಾವು ಬಹಿರಂಗವಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.
ಈ ಹಿಂದೊಮ್ಮೆ ಮುಕುಂದ್ ರಾಜ್ ಅವರು "ರಾಜ್ ಕುಮಾರ್ ಬಗ್ಗೆ ಬಹಳಷ್ಟು ಮಂದಿ ಮಾತನಾಡುತ್ತಾರೆ, ಆದರೆ ಅವರು 'ಸ್ವಾಮಿ ರಾಘವೇಂದ್ರ' ಹಾಗೂ 'ಅಯ್ಯಪ್ಪ' ಚಿತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಮೌಢ್ಯತೆಯನ್ನು ತುಂಬಿದ್ದಾರೆ. ಒಂದು ವೇಳೆ ರಾಜ್ ಕುಮಾರ್ ಅವರು ಈ ರೀತಿಯ ಚಿತ್ರಗಳಲ್ಲಿ ಅಭಿನಯಿಸದೇ ಇದ್ದಿದ್ದರೆ ಚಿತ್ರರಸಿಕರು ಕುರುಡು ನಂಬಿಕೆ ಬೆಳೆಸಿಕೊಳ್ಳುತ್ತಿರಲಿಲ್ಲ ಎಂದಿದ್ದರು. (ಏಜೆನ್ಸೀಸ್)