ವಿಷ್ಣು ಕೆಟ್ಟ ನಟ ಅಂದ ಮುಕುಂದ್ ರಾಜ್ ವಿವಾದದ ಕಿಡಿ

By Rajendra

Dr Vishnuvardhan dishonoured in Chandramana
ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಬಗೆಗಿನ ಲೇಖನವೊಂದು ಈಗ ಭಾರಿ ವಿವಾದ, ಚರ್ಚೆಗೆ ಕಾರಣವಾಗಿದೆ. ಲೇಖಕ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಬದುಕು, ಬರಹ, ಆಸಕ್ತಿ, ಸಾಧನೆಗಳನ್ನು ಕುರಿತ ಚಂದ್ರಮಾನ ಪುಸ್ತಕದಲ್ಲಿನ ಲೇಖನ ಈಗ ವಿವಾದಕ್ಕೆ ಕಾರಣವಾಗಿದೆ.

ಈ ಕೃತಿಯಲ್ಲಿ ಮುಕುಂದ್ ರಾಜ್ ಅವರು ಬರೆದಿರುವ ಲೇಖನದಲ್ಲಿ ವಿಷ್ಣುವರ್ಧನ್ ಅವರಿಗೆ ಆಕ್ಟಿಂಗ್ ಬರುತ್ತಿರಲಿಲ್ಲ. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದಲ್ಲಿ ವಿಷ್ಣುವರ್ಧನ್ ಆಕ್ಟಿಂಗ್ ಸರಿ ಇರಲಿಲ್ಲ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಈಗ ಭಾರಿ ವಿವಾದ ತಲೆದೋರಿದೆ.

ಮುಕುಂದ್ ಅವರು ತಮ್ಮ ಲೇಖನದಲ್ಲಿ ಮತಾಡ್ ಮಾತಾಡು ಮಲ್ಲಿಗೆ ಸಿನಿಮಾ ಕರ್ನಾಟಕದ ಜನ ಅಪ್ಪಿಕೊಂಡು ನೋಡಬೇಕಾದ ಸಿನಿಮಾ. ಅಂತಹ ಸಿನಿಮಾವನ್ನು ಜನ ನೋಡಲಿಲ್ಲ. ಅದಕ್ಕೆ ಕಾರಣ ವಿಷ್ಣುವರ್ಧನ್ರಂತಹ ಹಿರಿಯ ನಟನ ಕೆಟ್ಟ ಅಭಿನಯ. ಹೊಸ ಹುಡುಗರನ್ನು ಹಾಕಿಕೊಂಡು ಮಾಡಿದ ಅಮೆರಿಕಾ ಅಮೆರಿಕಾ ಸಿನಿಮಾ ಯಶಸ್ವಿಯಾಗುತ್ತದೆ. ಆದರೆ ಮಾತಾಡ್ ಮಾತಾಡು ಮಲ್ಲಿಗೆ ಯಶಸ್ವಿಯಾಗಲಿಲ್ಲ.

ಮಾತಾಡ್ ಮಾತಾಡ್ ಚಿತ್ರದ ಸೋಲಿಗೆ ವಿಷ್ಣುವರ್ಧನ್ ಕಾರಣ ಎಂದು ಮುಕುಂದ್ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಈ ಮೂಲಕ ವಿಷ್ಣು ಅಭಿಮಾನಿಗಳನ್ನು ಕೆಣಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಕುಂದ್ ರಾಜ್ ಅವರು ನಾನು ಮಾಡಿರುವುದು ದೊಡ್ಡ ಅಪರಾಧವಲ್ಲ. ತಾವು ಬಹಿರಂಗವಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.

ಈ ಹಿಂದೊಮ್ಮೆ ಮುಕುಂದ್ ರಾಜ್ ಅವರು "ರಾಜ್ ಕುಮಾರ್ ಬಗ್ಗೆ ಬಹಳಷ್ಟು ಮಂದಿ ಮಾತನಾಡುತ್ತಾರೆ, ಆದರೆ ಅವರು 'ಸ್ವಾಮಿ ರಾಘವೇಂದ್ರ' ಹಾಗೂ 'ಅಯ್ಯಪ್ಪ' ಚಿತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಮೌಢ್ಯತೆಯನ್ನು ತುಂಬಿದ್ದಾರೆ. ಒಂದು ವೇಳೆ ರಾಜ್ ಕುಮಾರ್ ಅವರು ಈ ರೀತಿಯ ಚಿತ್ರಗಳಲ್ಲಿ ಅಭಿನಯಿಸದೇ ಇದ್ದಿದ್ದರೆ ಚಿತ್ರರಸಿಕರು ಕುರುಡು ನಂಬಿಕೆ ಬೆಳೆಸಿಕೊಳ್ಳುತ್ತಿರಲಿಲ್ಲ ಎಂದಿದ್ದರು. (ಏಜೆನ್ಸೀಸ್)

More from Filmibeat

English summary
Teacher-cum-poet Mukunda Raj dishonors in his article in the book Chandrama by Nagathihalli Chandrashekhar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X