Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
60 ವರ್ಷದ ನಂತರ ಪ್ರಧಾನಿ ಆಗುತ್ತೇನೆ ಎಂದ ಹುಚ್ಚ ವೆಂಕಟ್
ಯಾವಾಗಲೂ ಮಾತೆತ್ತಿದರೆ, 'ನನ್ ಮಗಂದ್', 'ನನ್ ಎಕ್ಕಡ' ಅಂತ ಡೈಲಾಗ್ ಜೊತೆಗೆ ಸಿನಿಮಾ ಸಿನಿಮಾ ಅನ್ನುತ್ತಿದ್ದ 'ಫೈರಿಂಗ್ ಸ್ಟಾರ್' ವೆಂಕಟ್ ಇದೀಗ ಹೊಸದಾಗಿ ರಾಜಕೀಯ ಸೇರುವ ಬಗ್ಗೆ ಮಾತನಾಡುತ್ತಿದ್ದಾರೆ.
ಹೌದು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರಿಗೆ ರಾಜಕೀಯ ಸೇರಲು ತುಂಬಾ ಒತ್ತಡ ಹಾಕುತ್ತಿದ್ದಾರಂತೆ. ಆದರೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲದ ವೆಂಕಟ್ ಇನ್ನೇನು ಮೂರೇ ತಿಂಗಳಿನಲ್ಲಿ ತಾವೇ ಹೊಸ ರಾಜಕೀಯ ಪಕ್ಷವೊಂದನ್ನು ಕಟ್ಟುತ್ತಾರಂತೆ. ಈ ಬಗ್ಗೆ ಸ್ವತಃ ವೆಂಕಟ್ ಅವರೇ ಹೇಳಿಕೊಂಡಿದ್ದಾರೆ.[ವೆಂಕಟ್ 'ಡಿಕ್ಟೇಟರ್'ಗೆ ಎಸ್.ನಾರಾಯಣ್ ಆಕ್ಷನ್-ಕಟ್]
ಇತ್ತೀಚೆಗೆ ತಮ್ಮ 'ಸ್ವತಂತ್ರ್ಯ ಪಾಳ್ಯ' ಸಿನಿಮಾದ ಪ್ರದರ್ಶನ ಸಂದರ್ಭದಲ್ಲಿ ಪ್ರಚಾರಕ್ಕೆ ಮಂಗಳೂರಿನ ಸುಚಿತ್ರಾ ಚಿತ್ರಮಂದಿರಕ್ಕೆ ಆಗಮಿಸಿದ್ದ 'ಫೈರಿಂಗ್ ಸ್ಟಾರ್' ವೆಂಕಟ್ ಅವರು ಪ್ರೇಕ್ಷಕರೊಂದಿಗೆ ತಾವೂ ಸಿನಿಮಾ ನೋಡಿದರು.
ತದನಂತರ ಮಾಧ್ಯಮದೊಂದಿಗೆ ಮಾತನಾಡಿದ ವೆಂಕಟ್ ಅವರು 'ನನಗೆ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಆಫರ್ ಗಳು ಬರುತ್ತಿದೆ. ಆದರೆ ನನಗೆ ಯಾವುದೇ ರಾಜಕೀಯ ಪಕ್ಷ ಸೇರುವ ಆಸೆ ಇಲ್ಲ. ಅದರ ಬದ್ಲಾಗಿ ನಾನೇ ಒಂದು ರಾಜಕೀಯ ಪಕ್ಷ ಕಟ್ಟುವ ಯೋಚನೆ ಇದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಮೂರು ತಿಂಗಳಲ್ಲಿ ಒಂದು ಹೊಸ ಪಕ್ಷ ಕಟ್ಟುತ್ತೇನೆ'.['ಡಿಕ್ಟೇಟರ್' ಆದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್]
'ನನಗೆ 60 ವರ್ಷ ತುಂಬಿದ ನಂತರ ರಾಜ್ಯದ ಮುಖ್ಯಮಂತ್ರಿ ಅಥವಾ ದೇಶದ ಪ್ರಧಾನಿ ಆಗುತ್ತೇನೆ ಎಂದು ವೆಂಕಟ್ ನುಡಿದಿದ್ದಾರೆ.
ವೆಂಕಟ್ ಅವರು ಮಂಗಳೂರಿನ ಸುಚಿತ್ರಾ ಚಿತ್ರಮಂದಿರದ ಬಳಿ ಬರುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಭರ್ಜರಿಯಾಗಿ ಬರಮಾಡಿಕೊಂಡರು. ನಂತರ ಅವರು ಮಂಗಳೂರಿನಲ್ಲಿ ತಮಗಾದ ಮೊದಲ ಪ್ರೇಮ ಕಥೆಯನ್ನು ಎಲ್ಲರೆದುರು ಹಂಚಿಕೊಂಡರು.[ಪುಸ್ತಕದಲ್ಲಿ ವೆಂಕಟ್ - ಹುಚ್ಚು ಮನಸ್ಸಿನ ನೂರು ಮುಖಗಳು!]
'ನಾನು ಮಂಗಳೂರಿಗೆ ಹಲವು ವರ್ಷಗಳ ಬಳಿಕ ಆಗಮಿಸಿದ್ದು, ಮಂಗಳೂರಿನ ಜನತೆ ನನಗೆ ನಿರಾಸೆ ಮೂಡಿಸಿದ್ದಾರೆ. ನನಗೆ ಮೊದಲ ಪ್ರೇಮ ಚಿಗುರೊಡೆದದ್ದು ಇಲ್ಲಿಯೇ. ಮಣ್ಣಗುಡ್ಡೆಯ ಗೋಕರ್ಣನಾಥೇಶ್ವರ ಕಾಲೇಜಿನ ಹುಡುಗಿಯನ್ನು ಪ್ರೀತಿಸಿದ್ದೆ. ಇಲ್ಲಿನ ಬೀಚ್ ಮತ್ತು ಕಟೀಲಿನ ದೇವಸ್ಥಾನಕ್ಕೆಲ್ಲಾ ಅವಳ ಜೊತೆ ಸುತ್ತಿದ್ದೆ. ಆಮೇಲೆ ನನ್ನದೇ ಒಂದು ಚಿಕ್ಕ ತಪ್ಪಿನಿಂದಾಗಿ ಲವ್ ಬ್ರೇಕ್ ಅಪ್ ಆಯ್ತು' ಎಂದು ಫೈರಿಂಗ್ ಸ್ಟಾರ್ ಬೇಸರ ವ್ಯಕ್ತಪಡಿಸಿದ್ದಾರೆ.