Just In
Don't Miss!
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Sports
ಅಜಿಂಕ್ಯ ರಹಾನೆ ಬಳಗಕ್ಕೆ ಕ್ವಾರಂಟೈನ್ ವಿನಾಯಿತಿ ನೀಡಿದ ಮಹಾರಾಷ್ಟ್ರ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗೋಲ್ಡನ್ ಗರ್ಲ್ ರಮ್ಯಾ ಮೇಲೆ ಹೆಜ್ಜೇನು ದಾಳಿ
ಗೊಲ್ಡನ್ ಗರ್ಲ್ ರಮ್ಯಾ ಅವರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸೋಮವಾರ ನಡೆದಿದೆ. 'ನೀರ್ ದೋಸೆ' ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅವರ ಮೇಲೆ ಇದ್ದಕ್ಕಿದ್ದಂತೆ ಜೇನುಹುಳುಗಳು ದಾಳಿ ಮಾಡಿವೆ.
ರಮ್ಯಾ ಅವರು ಕೂಡಲೆ ಜೇನುಹುಳುಗಳಿಂದ ತಪ್ಪಿಸಿಕೊಂಡು ತಮ್ಮ ಕಾರ್ವಾನ್ ಸೇರಿಕೊಂಡು ಬಚಾವಾಗಿದ್ದಾರೆ. ರಮ್ಯಾ ಅವರ ಸಹಾಯಕರಿಗೆ ಮಾತ್ರ ಹೆಜ್ಜೇನು ಕುಟುಕಿದೆ. ಕೆಲವರು ಅಲ್ಲೇ ಇದ್ದ ಈಜುಕೊಳಕ್ಕೆ ಜಿಗಿದು ಜೇನುಹುಳುಗಳ ಕಡಿತದಿಂದ ಪಾರಾದರು.
ವಿಜಯ ಪ್ರಕಾಶ್ ನಿರ್ದೇಶಿಸುತ್ತಿರುವ ನೀರ್ ದೋಸೆ ಚಿತ್ರೀಕರಣ ರಾಜರಾಜೇಶ್ವರಿ ನಗರದ ಬೆಸ್ಟ್ ಕ್ಲಬ್ ನಲ್ಲಿ ನಡೆಯುತ್ತಿತ್ತು. ಹೆಜ್ಜೇನು ದಾಳಿಗೆ ಸಿಕ್ಕಿದವರನ್ನೇ ಅಲ್ಲೇ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಒಟ್ಟು ಆರು ಮಂದಿಯನ್ನು ಚೆನ್ನಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೇನು ದಾಳಿಯಿಂದ ತತ್ತರಿಸಿದ 'ನೀರ್ ದೋಸೆ' ಚಿತ್ರತಂಡ ಶೂಟಿಂಗ್ ಸ್ಪಾಟನ್ನು ಬೇರೆ ಕಡೆಗೆ ಬದಲಾಯಿಸಿದೆ. ಈ ಹೆಜ್ಜೇನುಗಳಿಗೆ 'ನೀರ್ ದೋಸೆ' ಮೇಲೆ ಇಷ್ಟವಾಯ್ತೋ ಅಥವಾ ರಮ್ಯಾ ಅವರ ಮನಸ್ಸಾಯಿತೋ ಯಾರಿಗೆ ಗೊತ್ತು.
ನವರಸ ನಾಯಕ ಜಗ್ಗೇಶ್ ನಾಯಕ ನಟರಾಗಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು ಸುತ್ತಮುತ್ತ ನಡೆಯಲಿದೆ. ಚಿತ್ರದ ನಿರ್ಮಾಪಕ ಸುಧೀಂದ್ರ. ಚಿತ್ರದ ಪಾತ್ರವರ್ಗದಲ್ಲಿ ದತ್ತಣ್ಣ ಹಾಗೂ ಭಾವನಾ ಅವರು ಇದ್ದಾರೆ. ಅಂದಹಾಗೆ ದತ್ತಣ್ಣ ಅವರು ಚಿತ್ರೀಕರಣದಲ್ಲಿದ್ದರಂತೆ, ಅವರು ಜೇನು ದಾಳಿಯಿಂದ ಪಾರಾಗಿದ್ದಾರೆ.
ಈ ಹಿಂದೊಮ್ಮೆ ರಾಗಿಣಿ ದ್ವಿವೇದಿ ಅವರ ಮೇಲೂ ಜೇನು ದಾಳಿ ಮಾಡಿತ್ತು. ಆದರೆ ಅವರು ಹೆಜ್ಜೇನುಗಳ ದಾಳಿಯಿಂದ ಪಾರಾಗಿ ಸೇಫ್ ಆಗಿ ಬೆಂಗಳೂರು ತಲುಪಿದ್ದರು. ಈ ಘಟನೆ ನಡೆದದ್ದು ಕೋಲಾರದಲ್ಲಿ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. (ಏಜೆನ್ಸೀಸ್)