Don't Miss!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- News ವಿರಾಟ್ ಕೊಹ್ಲಿ ಬಳಿ ಬಂದ ಅಭಿಮಾನಿಯನ್ನು ಕಾಲಲ್ಲಿ ತುಳಿದ ಸೆಕ್ಯೂರಿಟಿ ಸಿಬ್ಬಂದಿ-ರೂಪೇಶ್ ರಾಜಣ್ಣ ಹೇಳಿದ್ದೇನು?
- Automobiles ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೇವರಿಟ್ ಆಗುವುದು ಪಕ್ಕಾ!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಠಾರಿವೀರಕ್ಕೆ ಶುಭ ಹಾರೈಸಿದ ಗಾಡ್ ಫಾದರ್ ಮಂಜು
ನಿರ್ಮಾಪಕ ಕೆ. ಮಂಜು ಕಠಾರಿವೀರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಕಠಾರಿವೀರ ಚಿತ್ರದ ಪ್ರಚಾರಕಾರ್ಯದ ಅಂಗವಾಗಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ 'ಕಠಾರಿ ಸುಂದರಿ'ಗೆ ಫೋನ್ ಕರೆ ಮಾಡಿ ಅವರು ಶುಭ ಹಾರೈಸಿದ್ದಾರೆ. ಮುನಿರತ್ನ ನಿರ್ಮಾಣ ಹಾಗೂ ಉಪೇಂದ್ರ ಅಭಿನಯದ ಕಠಾರಿವೀರ ಚಿತ್ರದ ಪ್ರಚಾರಕಾರ್ಯ ಬಿರುಸಿನಿಂದ ನಡೆಯುತ್ತಿದೆ. ನಾಳೆ, ಅಂದರೆ ಮೇ 10, 2012 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮುನಿರತ್ನ, ರಮ್ಯಾ ಹಾಗೂ ಉಪೇಂದ್ರ ಜೊತೆ ನಿರೂಪಕರಾದ ಗೌರೀಶ್ ಅಕ್ಕಿ ನಡೆಸುತ್ತಿದ್ದ ಸಂವಾದ ಕಾರ್ಯಕ್ರಮದ ಮಧ್ಯೆ ಕರೆ ಮಾಡಿ 'ಗುಡ್ ಲಕ್' ಹೇಳಿದ ಮಂಜು ಅವರಿಗೆ ರಮ್ಯಾ, 'ನೀವೇ ನಮಗೆ ಗಾಡ್ ಫಾದರ್' ಎಂದರು. ಅದಕ್ಕೆ ನಕ್ಕು ಸಮಾಧಾನದಿಂದ ಉತ್ತರ ಹೇಳಿದ ಮಂಜು "ದೇವಕನ್ಯೆ ರಮ್ಯಾ ನನ್ನ ಕನಸಿನಲ್ಲಿ ಬಂದು ನನ್ನ ಮೂಡ್ ಚೇಂಜ್ ಮಾಡಿದ್ದಾರೆ. ಈಗ ನಾನು ಹಾಗೂ ಮುನಿ ಮೊದಲಿನಂತೆ ಫ್ರೆಂಡ್ಸ್" ಎಂದಿದ್ದಾರೆ.
ಮಂಜು ಮಾಡಿದ ಕರೆ, ಅಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ರಮ್ಯಾ, ಉಪೇಂದ್ರ ಹಾಗೂ ಮುನಿರತ್ನರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಸುಳ್ಳಲ್ಲ. ಕೃತಿಚೌರ್ಯದ ಬಗ್ಗೆಯೂ ಮಾತನಾಡಿದ ಮಂಜು, "ನಮ್ಮಂತ ನಿರ್ಮಾಪಕರು ಹಾಗೂ ಉಪೇಂದ್ರರಂಥಹ ನಿರ್ದೇಶಕ, ನಟರ ಬಳಿ ತುಂಬಾ ಮಂದಿ ಕಥೆ ಹೇಳಲು ಬರುತ್ತಾರೆ. ಅದನ್ನೆಲ್ಲಾ ನೆನಪಿಟ್ಟುಕೊಳ್ಳಲು ಆಗುವುದಿಲ್ಲ" ಎಂದು ಹೇಳಿದ್ದಾರೆ. (ಒನ್ ಇಂಡಿಯಾ ಕನ್ನಡ)