'ಬೆಂಗಳೂರು ಅಂಡರ್ ವರ್ಲ್ಡ್' ಗೆ ಕಾಲಿಟ್ಟ 'ಡೆಡ್ಲಿ' ಆದಿತ್ಯ
'ರೆಬೆಲ್' ಚಿತ್ರದ ನಂತರ ಗಾಂಧಿನಗರದಲ್ಲಿ ಕಾಣೆಯಾಗಿದ್ದ 'ಡೆಡ್ಲಿ ಸೋಮ' ಖ್ಯಾತಿಯ ನಟ ಆದಿತ್ಯ ಅವರು ನಿರ್ದೇಶಕ ಪಿ.ಎನ್ ಸತ್ಯ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಈ ಮೊದಲು ಸುದ್ದಿಯಾಗಿತ್ತು.
ಇದೀಗ ಆ ಸುದ್ದಿ ನಿಜವಾಗಿದೆ. ನಟ ಆದಿತ್ಯ ಅವರು ನಿರ್ದೇಶಕ ಪಿ.ಎನ್ ಸತ್ಯ ಅವರ ಜೊತೆ ಹೊಸ ಪ್ರಾಜೆಕ್ಟ್ ಒಂದಕ್ಕೆ ಸಹಿ ಹಾಕಿದ್ದಾರೆ. ಚಿತ್ರಕ್ಕೆ 'ಬೆಂಗಳೂರು ಅಂಡರ್ ವರ್ಲ್ಡ್' ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಬೆಂಗಳೂರಿನ ಭೂಗತ ಲೋಕವನ್ನು ಎಳೆ-ಎಳೆಯಾಗಿ ಬಿಚ್ಚಿಡಲಾಗಿದೆ.[ಸ್ಯಾಂಡಲ್ ವುಡ್ ಹೀರೋಗಳು ಪರಭಾಷೆಯಲ್ಲಿ ವಿಲನ್ ಗಳು]

ಚಿತ್ರಕ್ಕೆ ನಿರ್ಮಾಪಕರಾದ ಸುಧಾಕರ್ ಮತ್ತು ಆನಂದ್ ಬಂಡವಾಳ ಹೂಡುತ್ತಿದ್ದು, ನಿರ್ದೇಶಕ ಪಿ.ಎನ್ ಸತ್ಯ ಅವರೇ ಕಥೆ-ಚಿತ್ರಕಥೆ-ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಈ ಮೊದಲು ನಿರ್ಮಾಪಕ ಕೆ.ಮಂಜು ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾದಲ್ಲಿ ಆದಿತ್ಯ ಅವರು ವಿಲನ್ ಆಗಿ ಎಂಟ್ರಿ ಕೊಡಲಿದ್ದಾರೆ ಅಂತ ಗಾಸಿಪ್ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಆದ ಬದಲಾವಣೆಯಿಂದ ಆದಿತ್ಯ ಜಾಗಕ್ಕೆ ತಮಿಳು-ತೆಲುಗು ನಟ ಶ್ಯಾಮ್ ಎಂಟ್ರಿಯಾಗಿದ್ದಾರೆ.[ಯಶ್ ಸಿನಿಮಾದಿಂದ 'ಡೆಡ್ಲಿ' ಆದಿತ್ಯ ಔಟ್ ಆಗಿದ್ದೇಕೆ?]

ಇನ್ನೇನು ಸದ್ಯದಲ್ಲೇ 'ಡೆಡ್ಲಿ' ಆದಿತ್ಯ ಹಾಗೂ ನಿರ್ದೇಶಕ ಪಿ.ಎನ್ ಸತ್ಯ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಸಿನಿಮಾ ಸೆಟ್ಟೇರಿ ಶೂಟಿಂಗ್ ಆರಂಭಿಸಲಿದೆ.


Click it and Unblock the Notifications











