Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾನಪದ ಹಾಡಿಗೆ ನವರಸ ನಾಯಕ ಜಗ್ಗೇಶ್ ಕಂಠದಾನ
ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಅವರ ಕಾಮಿಡಿ, ಅವರ ನಟನೆ, ಹಾಗೂ ಅವರು ತಮ್ಮ ಮುಖದಲ್ಲಿ ವ್ಯಕ್ತಪಡಿಸುವ ಮುಖಭಾವ ಸಾಮಾನ್ಯವಾಗಿ ಎಲ್ಲರಿಗೂ ಬಹಳ ಇಷ್ಟ.
ಇದೇ ಜಗ್ಗೇಶ್ ಅವರು ಒಂದು ಹಾಡಿಗೆ ಧ್ವನಿ ನೀಡಿದರೆ ಹೇಗಿರುತ್ತೆ?. ಅದನ್ನೂ ಕೂಡ ಅಭಿಮಾನಿಗಳು ಕೇಳುವ ದಿನ ಬಹಳ ಹತ್ತಿರದಲ್ಲಿದೆ. ಹೌದು ನಟ ಜಗ್ಗೇಶ್ ಅವರು ಈಗಾಗಲೇ ಜಾನಪದ ಹಾಡೊಂದಕ್ಕೆ ತಮ್ಮ ಧ್ವನಿ ನೀಡಿದ್ದಾರೆ.[ಒಂದ್ಕಾಲದಲ್ಲಿ ಜಗ್ಗೇಶ್ ಅವರನ್ನು ಸ್ವಂತ ತಮ್ಮನಂತೆ ಕಂಡಿದ್ದ ಶಿವಣ್ಣ]
'ದನ ಕಾಯೋನು' ಎಂಬ ಜಾನಪದ ಆಲ್ಬಂ ಒಂದಕ್ಕೆ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಕಂಠಸಿರಿಯಿಂದ ಹಾಡು ಹಾಡಿದ್ದಾರೆ. ಹಿರಿಯ ಗಾಯಕಿ ಮಂಜುಳಾ ಗುರುರಾಜ್ ಅವರ ಮಗ ಸಾಗರ್ ಗುರುರಾಜ್ ಅವರು ಈ ಜಾನಪದ ಆಲ್ಬಂನ ಸಂಗೀತ ನಿರ್ದೇಶನದ ಸಾರಥ್ಯ ವಹಿಸಿಕೊಂಡಿದ್ದರು.
ಜಾನಪದ ಸೊಗಡು ಇರೋ ಈ ಮ್ಯೂಸಿಕ್ ಆಲ್ಬಂನ "ಸೂರ್ಯ ಬದಲಾಗವ್ನೆ...ಚಂದ್ರ ಬದಲಾಗವ್ನೆ..ಮನಸ್ಸಾನೆ ಬದಲಾಗಿ ಪರ್ಪಂಚ ಕೆಡ್ಸವ್ನೆ" ಎಂಬ ವಿಭಿನ್ನ ಹಾಡಿಗೆ ಜಗ್ಗೇಶ್ ಅವರು ತಮ್ಮ ಸುಮಧುರ ಧ್ವನಿ ನೀಡಿದ್ದಾರೆ.[ಕೋಮಲ್ ಕುರಿತ ಅಂತೆ-ಕಂತೆ ಪುರಾಣಕ್ಕೆ ಪೂರ್ಣ ವಿರಾಮವಿಟ್ಟ ಜಗ್ಗೇಶ್]
ಈಗಾಗಲೇ ಈ ಮ್ಯೂಸಿಕ್ ಆಲ್ಬಂನ ಕೆಲಸಗಳು ಕೊನೆಯ ಹಂತದಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಅಂದಹಾಗೆ ಜಗ್ಗೇಶ್ ಅವರು ಈ ಮೊದಲು ತಮ್ಮ ಸಿನಿಮಾದ ಹಾಡುಗಳಿಗೆ ಧ್ವನಿ ನೀಡಿದ್ದಾರಾದರೂ, ಮ್ಯೂಸಿಕ್ ಆಲ್ಬಂ ಒಂದಕ್ಕೆ ಧ್ವನಿ ನೀಡಿರೋದು ಇದೇ ಮೊದಲು.
ಜಾನಪದ ಹಾಡಿನ ರೆಕಾರ್ಡಿಂಗ್ ಫೋಟೋ ಒಂದನ್ನು ಟ್ವಿಟ್ಟರ್ ಗೆ ಅಪ್ ಲೋಡ್ ಮಾಡಿರುವ ಜಗ್ಗೇಶ್ ಅವರು, ಗ್ರಾಮೀಣ ಸೊಗಡಿನ ಹಾಡೊಂದಕ್ಕೆ ಧ್ವನಿ ನೀಡಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ.