Don't Miss!
- Automobiles 5 ರೂ. ಚಿಲ್ಲರೆ ಕೊಟ್ಟಿಲ್ಲವೆಂದು ರೊಚ್ಚಿಗೆದ್ದ ಪ್ರಯಾಣಿಕ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದೇನು ಗೊತ್ತಾ?
- News India Weather: ಮುಂದಿನ ಮೂರು ದಿನ ದೇಶದ ಈ ಭಾಗದಲ್ಲಿ ಅಬ್ಬರದ ಮಳೆ ಮುನ್ಸೂಚನೆ, ಎಲ್ಲಿಲ್ಲಿ?-ಮಾಹಿತಿ
- Finance Shilpa Shetty: ಇಡಿಯಿಂದ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರ 98 ಕೋಟಿ ಮೌಲ್ಯದ 2 ಫ್ಲಾಟ್, ಷೇರು ವಶ
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Lifestyle ಮಾಲ್ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಾಡಲು ಬಾರದೇ ಉಗಿಸಿಕೊಂಡಿದ್ದವರು ಇಂದು ಹಾಡಿ ತೋರಿಸಿದ್ರು
'ನಾನು ಅವನಲ್ಲ ಅವಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ ಸಂಚಾರಿ ವಿಜಯ್ ಅವರು ಅತ್ಯುತ್ತಮ ನಟ ಅಂತ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.
ಆದರೆ ನಟ ಸಂಚಾರಿ ವಿಜಯ್ ಅವರು ಒಬ್ಬ ಖ್ಯಾತ ಗಾಯಕನಾಗಬೇಕೆಂಬ ಗುರಿ ಇಟ್ಟುಕೊಂಡು ಚಿತ್ರರಂಗಕ್ಕೆ ಕಾಲಿಟ್ಟರಂತೆ. ಆದರೆ ರಿಯಾಲಿಟಿ ಶೋ ಒಂದರಲ್ಲಿ ಸರಿಯಾಗಿ ಹಾಡುವುದಕ್ಕಾಗದೇ ತೀರ್ಪಗಾರರ ಕೈಯಲ್ಲಿ ಬೈಸಿಕೊಂಡು ವಾಪಸ್ ಬಂದಿದ್ದರು.[ಸಂದರ್ಶನ : ಸಂಚಾರಿ ವಿಜಯ್ 'ಅವನು...ಅವಳಾದ' ಪರಿ]
ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಸಂಚಾರಿ ವಿಜಯ್ ಅವರಿಗೆ 'ನೀನು ಹಾಡುವುದಕ್ಕಿಂತ ನಟನೆಯಲ್ಲಿ ತೊಡಗಿಸಿಕೋ' ಅಂತ ಸಲಹೆ ನೀಡಿದ ಕಾರಣ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡರು.
ಬೆಂಗಳೂರಿಗೆ ಕಾಲಿಟ್ಟ ಮೊದಲ ದಿನಗಳಲ್ಲಿ ಸಂಗೀತಗಾರನಾಗಬೇಕೆಂಬ ದೃಷ್ಟಿಯಿಂದ ಮೂರುವರೆ ವರ್ಷಗಳ ಕಾಲ ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ ಮತ್ತು ಹಿಂದೂಸ್ಥಾನಿ ಸಂಗೀತ ಅಭ್ಯಾಸ ಮಾಡಿದರಂತೆ. ಆದರೆ ಹಿಂದೂಸ್ಥಾನಿ ಸಂಗೀತ ತಲೆಗೆ ಹತ್ತದ ಕಾರಣ ರಿಯಾಲಿಟಿ ಶೋನಲ್ಲಿ ರಿಜೆಕ್ಟ್ ಆಗಿದ್ದರು.['ರಿಕ್ತ' ಇದು ಸಂಚಾರಿ ವಿಜಯ್ ಬತ್ತಳಿಕೆಯಿಂದ ಹೊರಟ ಹೊಸ ಬಾಣ]
ಅಂದು ರಿಜೆಕ್ಟ್ ಆದ ಅದೇ ವಿಜಯ್ ಇದೀಗ ತಮ್ಮ ಎರಡನೇ ಚಿತ್ರ 'ರಿಕ್ತ'ದ 'ನೋಡ್ತಾ ನೋಡ್ತಾ ಗೆದ್ದವಳು' ಅನ್ನೋ ಪ್ಯಾಥೋ ಸಾಂಗ್ ಒಂದಕ್ಕೆ ತಮ್ಮ ಧ್ವನಿ ನೀಡಿದ್ದಾರೆ, ಚೊಚ್ಚಲ ಸಂಗೀತ ನಿರ್ದೇಶಕ ರಾಕಿ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[4 ವಿಭಿನ್ನ ಶೇಡ್ ನಲ್ಲಿ ಸಂಚಾರಿ ವಿಜಯ್ ಹೊಸ ಅವತಾರ]
ನವ ನಿರ್ದೇಶಕ ಅಮೃತ್ ಕುಮಾರ್ ಅವರ ಒತ್ತಾಯದ ಮೇರೆಗೆ ಈ ಹಾಡಿಗೆ ಸಂಚಾರಿ ವಿಜಯ್ ಅವರು ತಮ್ಮ ಧ್ವನಿ ನೀಡಿದ್ದು, ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ.