Don't Miss!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸತ್ಯ ಹರಿಶ್ಚಂದ್ರ'ನ ಅವತಾರ ತಾಳಿದ ಕಾಮಿಡಿ ಕಿಂಗ್ ಶರಣ್
'ರ್ಯಾಂಬೋ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳಲು ಆರಂಭಿಸಿದ ನಂತರ ಕಾಮಿಡಿ ಕಿಂಗ್ ಶರಣ್ ಅವರಿಗೆ ಪುರುಸೋತ್ತೇ ಇಲ್ಲದಂತಾಗಿದೆ.ತದನಂತರ ಸಾಲು-ಸಾಲು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ ಶರಣ್ ಅವರು, ತಮ್ಮ ಅಭಿಮಾನಿಗಳಿಗೆ ಕಾಮಿಡಿ ಜೊತೆಗೆ ಹೀರೋಯಿಸಂ ಕೂಡ ತೋರಿಸಿಕೊಟ್ಟರು.
ಇದೀಗ ಮತ್ತೆ ಇನ್ನೊಂದು ಹೊಸ ಸಿನಿಮಾದಲ್ಲಿ ಶರಣ್ ಅವರು ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ಮಾಪಕ ಕೆ.ಮಂಜು ನಿರ್ಮಾಣದಲ್ಲಿ ಶರಣ್ ಅವರು ನಟಿಸುತ್ತಿದ್ದು, ಇದೀಗ ಚಿತ್ರಕ್ಕೆ 'ಸತ್ಯ ಹರಿಶ್ಚಂದ್ರ' ಎಂದು ಹೆಸರಿಡಲಾಗಿದೆ.[ಸ್ಟಾರ್ ಗಳಾಗಿದ್ದರೂ ಗಾಡಿ ಬಿಟ್ಟು ಕಾಲ್ನಡಿಗೆಯಲ್ಲಿ ಸಾಗಿದ 'ಆ' ಘಟನೆಗಳಿವು.!]
ಅಂದಹಾಗೆ ನಟ ಸಾರ್ವಭೌಮ ಡಾ ರಾಜ್ ಕುಮಾರ್ ಅವರ ಪೌರಾಣಿಕ ಚಿತ್ರಗಳ ಹೆಸರನ್ನು ಇತ್ತೀಚಿನ ಕಮರ್ಷಿಯಲ್ ಚಿತ್ರಗಳಿಗೆ ಇಡೋದು ಒಂಥರಾ ಟ್ರೆಂಡ್ ಆಗಿದೆ. ರೇಡಿಯೋ ಜಾಕಿ ಆಗಿದ್ದ ಶ್ರೀನಿ ಅವರು ತಮ್ಮ ಹೊಸ ಚಿತ್ರಕ್ಕೆ 'ಶ್ರೀನಿವಾಸ ಕಲ್ಯಾಣ' ಎಂದು ಹೆಸರಿಟ್ಟಿದ್ದಾರೆ.
ಈಗ ಈ ಸಾಲಿಗೆ ಹೊಸ ಸೇರ್ಪಡೆ ಕೆ.ಮಂಜು ಮತ್ತು ಶರಣ್ ಕಾಂಬಿನೇಷನ್ ನ 'ಸತ್ಯ ಹರಿಶ್ಚಂದ್ರ' ಸಿನಿಮಾ. ಇನ್ನು ಇದು 'ಸತ್ಯ ಹರಿಶ್ಚಂದ್ರ' ಮಹಾರಾಜನ ಕುರಿತಾದ ಕಥೆಯಲ್ಲ, ಜೊತೆಗೆ ಡಾ.ರಾಜ್ ಅವರ ಕಥೆಗೂ, ಈ ಕಥೆಗೂ ಯಾವುದೇ ರೀತಿಯ ಸಂಬಂಧ ಇಲ್ಲ.[ಮತ್ತೊಂದು ತಮಿಳು ರೀಮೇಕ್ ನಲ್ಲಿ ನಟಿಸ್ತಾರಾ ಶರಣ್.?]
ಬದ್ಲಾಗಿ ಇದೊಂದು ಸಾಮಾಜಿಕ ಕಾಮಿಡಿ ಚಿತ್ರವಾಗಿದ್ದು, ಕಥೆಗೆ ಹೆಸರು ಪೂರಕವಾಗಿದೆ ಅಂತ, ಈ ಹೆಸರನ್ನು ಇಡಲಾಗಿದೆ. ಚಿತ್ರಕ್ಕೆ 'ಆಕ್ಟರ್' ಚಿತ್ರದ ಖ್ಯಾತಿಯ ದಯಾಳ್ ಪದ್ಮನಾಭನ್ ಅವರು ಆಕ್ಷನ್-ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಕಥೆ ಕೂಡ ಅವರೇ ಬರೆದಿದ್ದಾರೆ.[ಭಿಕ್ಷುಕರಾಗಿ 128 ರೂಪಾಯಿ ಸಂಪಾದಿಸಿದ ಕಾಮಿಡಿ ಕಿಂಗ್ ಶರಣ್]
ಇನ್ನು ಕಾಮಿಡಿ ಕಿಂಗ್ ಶರಣ್ ಅವರು ಸದ್ಯಕ್ಕೆ 'ನಟರಾಜ ಸರ್ವಿಸ್' ಚಿತ್ರದ ಪ್ರೊಮೋಷನ್ ನಲ್ಲಿ ಬಿಜಿಯಾಗಿದ್ದು, ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಜೊತೆಗೆ 'ರಾಜ್-ವಿಷ್ಣು' ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿರುವುದರಿಂದ, ಪೂರ್ತಿ ಮುಗಿದ ನಂತರ 'ಸತ್ಯ ಹರಿಶ್ಚಂದ್ರ'ನಾಗಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್ 18ಕ್ಕೆ ಈ ಸಿನಿಮಾ ಸೆಟ್ಟೇರಲಿದೆ.