Don't Miss!
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಗಳೇ... ನಿಮ್ಮಿಂದ ಇದನ್ನೆಲ್ಲ 'ನಲ್ಲ' ಸುದೀಪ್ ನಿರೀಕ್ಷಿಸುವುದಿಲ್ಲ.!
ಅಭಿನಯ ಚಕ್ರವರ್ತಿ... ಕೆಚ್ಚೆದೆಯ ಕಿಚ್ಚ... ಸುದೀಪ್ ರವರನ್ನ ಕಂಡರೆ ಅಭಿಮಾನಿಗಳಲ್ಲಿ ಅಪಾರ ಅಭಿಮಾನ. ಸುದೀಪ್ ರವರ ಪ್ರತಿಯೊಂದು ಸ್ಟೈಲ್ ನೂ ಅನುಕರಿಸುವ... ಸುದೀಪ್ ರವರ ಬಗ್ಗೆ ಮನದಾಳದಿಂದ ಕವಿತೆ ಬರೆಯುವ... ಸುದೀಪ್ ರವರ ಪೋಸ್ಟರ್ ಗಳನ್ನು ಸ್ಕೆಚ್ ಮಾಡುವ ಅಸಂಖ್ಯಾತ ಅಭಿಮಾನಿಗಳು ಎಲ್ಲೆಲ್ಲೂ ಇದ್ದಾರೆ.
ತಮ್ಮಂತೆಯೇ ಯಾರಾದರೂ ಸ್ಟೈಲ್ ಮಾಡಿಕೊಂಡಾಗ... ಪ್ರೀತಿಯಿಂದ ಕವನ ಕಳುಹಿಸಿದಾಗ... ತಮ್ಮ ಭಾವಚಿತ್ರಗಳನ್ನ ಸ್ಕೆಚ್ ಮಾಡಿದಾಗ ಕಿಚ್ಚ ಸುದೀಪ್ ಕೂಡ ಖುಷಿ ಪಡುತ್ತಾರೆ.
ಆದರೆ.. ಇದಕ್ಕಿಂತ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಅತಿರೇಕದ ಅಭಿಮಾನ ಪ್ರದರ್ಶಿಸಿದರೆ ಸುದೀಪ್ ಸಹಿಸುವುದಿಲ್ಲ. ಬೇಕಾದರೆ, ಇತ್ತೀಚೆಗಷ್ಟೇ ಸುದೀಪ್ ಮಾಡಿರುವ ಟ್ವೀಟ್ ಗಳತ್ತ ಒಮ್ಮೆ ಕಣ್ಣಾಡಿಸಿ....
ರಕ್ತದಲ್ಲಿ 'ಐ ಲವ್ ಯು' ಬರೆದಿದ್ದಕ್ಕೆ....
ಸುದೀಪ್ ರವರ ಅಪ್ಪಟ 'ಭಕ್ತ'ನೊಬ್ಬ ಇತ್ತೀಚೆಗೆ ತಾನೆ ತನ್ನ ಕೈ ಕೂಯ್ದುಕೊಂಡು ರಕ್ತದಿಂದ 'ಐ ಲವ್ ಯು ಕಿಚ್ಚ' ಎಂದು ಬರೆದಿರುವ ಫೋಟೋವನ್ನ ಸುದೀಪ್ ಗೆ ಟ್ವೀಟ್ ಮಾಡಿದ್ದ. ಅದನ್ನ ನೋಡಿದ ಸುದೀಪ್ ಪ್ರತಿಕ್ರಿಯೆ ಕೊಟ್ಟಿರುವುದು ಹೀಗೆ...
ಪ್ರೀತಿಯನ್ನ ವ್ಯಕ್ತಪಡಿಸುವ ರೀತಿ ಇದಲ್ಲ.!
''ನಿಮ್ಮ ಪ್ರೀತಿಗೆ ನಾನು ಚಿರಋಣಿ. ಆದರೆ, ಇದನ್ನ ನಾನು ಯಾರಿಂದಲೂ ನಿರೀಕ್ಷಿಸುವುದಿಲ್ಲ. ಪ್ರೀತಿಯನ್ನ ಹಲವು ರೀತಿಯಲ್ಲಿ ವ್ಯಕ್ತಪಡಿಸಬಹುದು. ಆದ್ರೆ, ಇದು ಸೂಕ್ತ ಆಯ್ಕೆ ಅಲ್ಲ'' ಎಂದು ಸುದೀಪ್ ಟ್ವೀಟಿಸಿದ್ದಾರೆ.
ಕ್ಲಾಸ್ ನಲ್ಲಿ ಕೂತ್ಕೊಂಡ್ ಟ್ವೀಟ್ ಮಾಡಿದ್ರೆ...
ಸುದೀಪ್ ರವರ ಮತ್ತೋರ್ವ ಅಭಿಮಾನಿ, ''ಅಣ್ಣ.. ಒಂದು ರಿಪ್ಲೈ ಮಾಡಿ ಪ್ಲೀಸ್.. ಕ್ಲಾಸ್ ನಲ್ಲಿ ಕೂತುಕೊಂಡು ಮೆಸೇಜ್ ಮಾಡ್ತಿದ್ದೀನಿ'' ಅಂತ ಸುದೀಪ್ ಗೆ ಟ್ವೀಟ್ ಮಾಡಿದ್ದ.
ಇದು ತಪ್ಪು
ಆ ಟ್ವೀಟ್ ಗೆ, ''ಮತ್ತೆ ಕ್ಲಾಸ್ ನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಿ. ಟ್ವೀಟ್ ಮೇಲೆ ಅಲ್ಲ. ಇದು ತಪ್ಪು'' ಎಂದು ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಅಭಿಮಾನದ ಹೆಸರಿನಲ್ಲಿ ಇದೆಲ್ಲ ಬೇಡ...
ಅಭಿಮಾನದ ಹೆಸರಿನಲ್ಲಿ ಓದಿನ ಕಡೆ ಗಮನ ಕೊಡದೆ, ವಿದ್ಯಾಭ್ಯಾಸವನ್ನ ಹಾಳು ಮಾಡಿಕೊಳ್ಳಬಾರದು ಎಂಬುದು ಸುದೀಪ್ ರವರ ಕಾಳಜಿ.