twitter
    For Quick Alerts
    ALLOW NOTIFICATIONS  
    For Daily Alerts

    'ರನ್ನ' ಚಿತ್ರಕ್ಕೆ ಎದುರಾಗಿದೆ ಹೊಸ ಸಂಕಷ್ಟ

    By Harshitha
    |

    ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರ ಜೂನ್ 4 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲು ಸಜ್ಜಾಗಿದೆ. ಹೀಗಿರುವಾಗಲೇ 'ರನ್ನ' ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ. ನಿರ್ಮಾಪಕ ಚಂದ್ರಶೇಖರ್ ವಿರುದ್ಧ ಚಿತ್ರ ವಿತರಕ ಪ್ರಸನ್ನ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದಾರೆ.

    'ರನ್ನ' ಶೂಟಿಂಗ್ ಹಂತದಲ್ಲಿರುವಾಗಲೇ ಬೆಂಗಳೂರು, ಮೈಸೂರು ಮತ್ತು ಕೋಲಾರ ಜಿಲ್ಲೆಗಳ ವಿತರಣಾ ಹಕ್ಕುಗಳನ್ನ ಪ್ರಸನ್ನ ಕುಮಾರ್ ಅವರಿಗೆ ನಿರ್ಮಾಪಕ ಚಂದ್ರಶೇಖರ್ ಮಾರಟ ಮಾಡಿದ್ದರು. ಆದರೂ, ಪೋಸ್ಟರ್ ಗಳಲ್ಲಿ ಪ್ರಸನ್ನ ಕುಮಾರ್ ಹೆಸರು ಹಾಕಿರಲಿಲ್ಲ.

    ranna

    ಇದೀಗ 'ರನ್ನ' ಚಿತ್ರ ಬಿಡುಗಡೆ ದಿನಾಂಕ ಸನಿಹವಾಗುತ್ತಿದ್ದಂತೆ ಚಿತ್ರದ ಸಂಪೂರ್ಣ ವಿತರಣಾ ಹಕ್ಕುಗಳನ್ನ ಗೋಕುಲ್ ಫಿಲ್ಮ್ ಡಿಸ್ಟ್ರಿಬ್ಯೂಷನ್ಸ್ ಗೆ ಚಂದ್ರಶೇಖರ್ ನೀಡಿದ್ದಾರೆ. ಇದರಿಂದ ಕುಪಿತಗೊಂಡಿರುವ ಪ್ರಸನ್ನ ಕುಮಾರ್ ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. [ಸುದೀಪ್ 'ರನ್ನ' ರಿಲೀಸ್ ಗೆ ಕೋರ್ಟ್ ಮಧ್ಯಂತರ ತಡೆ]

    ಜೂನ್ 2 ರೊಳಗೆ ಉತ್ತರ ನೀಡುವಂತೆ 'ರನ್ನ' ಚಿತ್ರ ನಿರ್ಮಾಪಕರಿಗೆ ಸಿಟಿ ಸಿವಿಲ್ ಕೋರ್ಟ್ ಸೂಚನೆ ನೀಡಿ ನೋಟಿಸ್ ಜಾರಿ ಮಾಡಿದೆ. ''ಚಿತ್ರ ಬಿಡುಗಡೆಗೆ ಇದರಿಂದ ಯಾವುದೇ ತೊಂದರೆ ಇಲ್ಲ. ಹಳೆ ಅಗ್ರೀಮೆಂಟ್ ಇಟ್ಕೊಂಡು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. ರಿಲೀಸ್ ಸಮಯದಲ್ಲಿ ಈಗ ಇದೆಲ್ಲಾ ಸಾಮಾನ್ಯ. ಎಲ್ಲಾ ಕ್ಲಿಯರ್ ಆಗುತ್ತೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ತರುಣ್ ಸುಧೀರ್ ತಿಳಿಸಿದರು. [ರನ್ನ ಚಿತ್ರಕ್ಕೆ ಅಡ್ಡಿ ಮಾಡುತ್ತಿರುವ ವಿಘ್ನ ಸಂತೋಷಿಗಳಾರು?]

    ಒಟ್ನಲ್ಲಿ ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿವಾದಗಳಿಂದ 'ರನ್ನ' ಚಿತ್ರ ಸುದ್ದಿಯಾಗುತ್ತಲೇ ಇದೆ. ಯಾವುದೇ ಅಡ್ಡಿಯಿಲ್ಲದೆ ಸಿನಿಮಾ ರಿಲೀಸ್ ಆದ್ರೆ ಸಾಕು ಅಂತಿದ್ದಾರೆ ನಿರ್ಮಾಪಕರು.

    English summary
    Kiccha Sudeep starrer 'Ranna' is all set to release on June 4th. Meanwhile, City Civil court has issued a notice to film producer Chandrashekar regarding Film Distribution controversy.
    Friday, May 29, 2015, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X