ಬುಲೆಟ್ ಪ್ರಕಾಶ್ ಜೊತೆ ಕೆಎಂ ಚೈತನ್ಯ 'ಪರಾರಿ'

ಕನ್ನಡ ಚಿತ್ರರಂಗದ ಕಾಮಿಡಿ ನಟ ಬುಲೆಟ್ ಪ್ರಕಾಶ್ ಚಿತ್ರದ ನಾಯಕ ನಟ. ಇನ್ನೊಬ್ಬ ಹಾಸ್ಯನಟ ಶರಣ್ ಅವರು 'ರ್ಯಾಂ ಬೋ' ಚಿತ್ರದ ಮೂಲಕ ನಾಯಕನಟನಾಗಿ ಬದಲಾಗಿದ್ದೇ ತಡ. ಈಗ ಬುಲೆಟ್ ಪ್ರಕಾಶ್ ಕೂಡ ಮತ್ತೊಮ್ಮೆ ಹೀರೋ ಆಗಲು ಹೊರಟಿದ್ದಾರೆ.
ಅವರು ಈ ಹಿಂದೆ ರಂಗಾಯಣ ರಘು ಜೊತೆ 'ಐತಲಕ್ಕಡಿ' ಚಿತ್ರದಲ್ಲಿ ಕಾಮಿಡಿ ಹೀರೋ ಆಗಿ ಮಿಂಚಿದ್ದರು. ಇನ್ನು 'ಪರಾರಿ' ಚಿತ್ರದ ವಿಷಯಕ್ಕೆ ಬಂದರೆ. ಸದ್ಯದ ಯುವಜನಾಂಗದ ಮನೋಭಾವದ ಬಗ್ಗೆ ಚಿತ್ರ ಬೆಳಕು ಬೀರುತ್ತದಂತೆ. ಯುವಕರ ಲೈಂಗಿಕ ದೃಷ್ಟಿಕೋನವೇ ಇಲ್ಲಿನ ಕಥಾವಸ್ತು.
ಹದಿಹರೆಯದ ಯುವಕನ ಪಾತ್ರದಲ್ಲಿ ಬುಲೆಟ್ ಪ್ರಕಾಶ್ ಕಾಣಿಸಲಿದ್ದಾರೆ. ಅವರು ಇನ್ನೂ ಹುಡುಗನಿದ್ದಂತೆ. ಬೇಕಿದ್ದರೆ ಅವರಿಗೆ ಶಾಲಾ ಸಮವಸ್ತ್ರ ಹಾಕಿ ನೋಡಿ. ಶಾಲಾ ಬಾಲಕನಂತೆಯೇ ಕಾಣುತ್ತಾರೆ ಎಂದು ಚೈತನ್ಯ ಅವರ ಪಾತ್ರದ ಬಗ್ಗೆ ವಿವರ ನೀಡಿದರು.
ಪರಾರಿ ಚಿತ್ರಕ್ಕೆ ಈ ಹಿಂದೆ 'ಎಸ್ಕೇಪ್' ಎಂದು ಹೆಸರಿಡಲಾಗಿತ್ತು. ಆದರೆ 'ಪರಾರಿ' ಎಂಬ ಶೀರ್ಷಿಕೆಯೇ ಕ್ಯಾಚಿಯಾಗಿರುವ ಕಾರಣ ಅದನ್ನೇ ಆಯ್ಕೆ ಮಾಡಿದ್ದೇವೆ. ಈ ಚಿತ್ರದ ಮೂಲಕ ಹೊಸ ಕಾರ್ಪೋರೇಟ್ ನಿರ್ಮಾಪಕರೊಬ್ಬರು ಕನ್ನಡ ಚಿತ್ರೋದ್ಯಮಕ್ಕೆ ಪರಿಚಯವಾಗುತ್ತಿದ್ದಾರೆ ಎಂದಿದ್ದಾರೆ ಚೈತನ್ಯ. (ಏಜೆನ್ಸೀಸ್)


Click it and Unblock the Notifications











