Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬುಲೆಟ್ ಪ್ರಕಾಶ್ ಜೊತೆ ಕೆಎಂ ಚೈತನ್ಯ 'ಪರಾರಿ'
ಕನ್ನಡ ಚಿತ್ರರಂಗದ ಕಾಮಿಡಿ ನಟ ಬುಲೆಟ್ ಪ್ರಕಾಶ್ ಚಿತ್ರದ ನಾಯಕ ನಟ. ಇನ್ನೊಬ್ಬ ಹಾಸ್ಯನಟ ಶರಣ್ ಅವರು 'ರ್ಯಾಂ ಬೋ' ಚಿತ್ರದ ಮೂಲಕ ನಾಯಕನಟನಾಗಿ ಬದಲಾಗಿದ್ದೇ ತಡ. ಈಗ ಬುಲೆಟ್ ಪ್ರಕಾಶ್ ಕೂಡ ಮತ್ತೊಮ್ಮೆ ಹೀರೋ ಆಗಲು ಹೊರಟಿದ್ದಾರೆ.
ಅವರು ಈ ಹಿಂದೆ ರಂಗಾಯಣ ರಘು ಜೊತೆ 'ಐತಲಕ್ಕಡಿ' ಚಿತ್ರದಲ್ಲಿ ಕಾಮಿಡಿ ಹೀರೋ ಆಗಿ ಮಿಂಚಿದ್ದರು. ಇನ್ನು 'ಪರಾರಿ' ಚಿತ್ರದ ವಿಷಯಕ್ಕೆ ಬಂದರೆ. ಸದ್ಯದ ಯುವಜನಾಂಗದ ಮನೋಭಾವದ ಬಗ್ಗೆ ಚಿತ್ರ ಬೆಳಕು ಬೀರುತ್ತದಂತೆ. ಯುವಕರ ಲೈಂಗಿಕ ದೃಷ್ಟಿಕೋನವೇ ಇಲ್ಲಿನ ಕಥಾವಸ್ತು.
ಹದಿಹರೆಯದ ಯುವಕನ ಪಾತ್ರದಲ್ಲಿ ಬುಲೆಟ್ ಪ್ರಕಾಶ್ ಕಾಣಿಸಲಿದ್ದಾರೆ. ಅವರು ಇನ್ನೂ ಹುಡುಗನಿದ್ದಂತೆ. ಬೇಕಿದ್ದರೆ ಅವರಿಗೆ ಶಾಲಾ ಸಮವಸ್ತ್ರ ಹಾಕಿ ನೋಡಿ. ಶಾಲಾ ಬಾಲಕನಂತೆಯೇ ಕಾಣುತ್ತಾರೆ ಎಂದು ಚೈತನ್ಯ ಅವರ ಪಾತ್ರದ ಬಗ್ಗೆ ವಿವರ ನೀಡಿದರು.
ಪರಾರಿ ಚಿತ್ರಕ್ಕೆ ಈ ಹಿಂದೆ 'ಎಸ್ಕೇಪ್' ಎಂದು ಹೆಸರಿಡಲಾಗಿತ್ತು. ಆದರೆ 'ಪರಾರಿ' ಎಂಬ ಶೀರ್ಷಿಕೆಯೇ ಕ್ಯಾಚಿಯಾಗಿರುವ ಕಾರಣ ಅದನ್ನೇ ಆಯ್ಕೆ ಮಾಡಿದ್ದೇವೆ. ಈ ಚಿತ್ರದ ಮೂಲಕ ಹೊಸ ಕಾರ್ಪೋರೇಟ್ ನಿರ್ಮಾಪಕರೊಬ್ಬರು ಕನ್ನಡ ಚಿತ್ರೋದ್ಯಮಕ್ಕೆ ಪರಿಚಯವಾಗುತ್ತಿದ್ದಾರೆ ಎಂದಿದ್ದಾರೆ ಚೈತನ್ಯ. (ಏಜೆನ್ಸೀಸ್)