twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯದಾದ್ಯಂತ 'ಸಂಗೊಳ್ಳಿ ರಾಯಣ್ಣ' ವಿಜಯಯಾತ್ರೆ

    By Rajendra
    |

    ರಾಜ್ಯದಲ್ಲಿ ಡಬ್ಬಿಂಗ್ ವಿವಾದ ಮತ್ತೆ ತಲೆಯೆತ್ತಿದೆ. ಇದೇ ಸಂದರ್ಭದಲ್ಲಿ ಪರಭಾಷಾ ಚಿತ್ರಗಳಿಗೆ ಸೆಡ್ಡುಹೊಡೆದಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಗಮನಾರ್ಹ ದಾಖಲೆ ಮಾಡಿದೆ.

    ಈಗಾಗಲೆ 25 ದಿನಗಳನ್ನು ಪೂರೈಸಿರುವ ರಾಯಣ್ಣ ಈಗ ರಾಜ್ಯದಾದ್ಯಂತ ವಿಜಯಯಾತ್ರೆ ಹೊರಡಲು ಅಣಿಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿಜೀವನದಲ್ಲೂ ರಾಯಣ್ಣ ಚಿತ್ರ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

    ಇದೇ ಭಾನುವಾರ (ಡಿಸೆಂಬರ್ 2) ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿತ್ರತಂಡ ಬೆಂಗಳೂರಿನ ಸಂಗೊಳ್ಳಿ ಪ್ರತಿಮೆಯಿಂದ ಬೆಳಗ್ಗೆ 9.30ಕ್ಕೆ ಹೊರಡಲಿದೆ. ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ತರೀಕೆರೆ ಸಾಗಲಿದೆ.

    ಸೋಮವಾರ (ಡಿಸೆಂಬರ್ 3) ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಕೊಪ್ಪ ಮಂಗಳೂರು ತಲುಪಲಿದೆ. ಅಲ್ಲಿಂದ ಚಿತ್ರತಂಡ ಮಂಗಳವಾರ (ಡಿಸೆಂಬರ್ 4) ಪುತ್ತೂರು, ಸಕಲೇಶಪುರ, ಮೂಡಿಗೆರೆ, ಚಿಕ್ಕಮಂಗಳೂರು ಹಾಸನ ತಲುಪಲಿದೆ.

    ಬುಧವಾರ (ಡಿಸೆಂಬರ್ 5)ಕ್ಕೆ ಹೊಳೆನರಸೀಪುರ, ಚನ್ನರಾಯಪಟ್ಟಣ, ಕೆ.ಆರ್.ಪೇಟೆ, ಕೆ.ಆರ್.ನಗರ ಯಾತ್ರೆ ಮುಗಿಸಿಕೊಂಡು ಮೈಸೂರು ತಲುಪಲಿದೆ. ಗುರುವಾರ (ಡಿಸೆಂಬರ್ 6) ಚಾಮರಾಜನಗರ, ಕೊಳ್ಳೆಗಾಲ, ಮಳವಳ್ಳಿ ಹಾಗೂ ಮೈಸೂರು ತಲುಪಿ ಶುಕ್ರವಾರ (ಡಿಸೆಂಬರ್ 7) ಮಂಡ್ಯ, ಮದ್ದೂರು, ರಾಮನಗರದ ಮೂಲಕ ಬೆಂಗಳೂರು ಸೇರಲಿದೆ. (ಒನ್ಇಂಡಿಯಾ ಕನ್ನಡ)

    English summary
    Challenging star Darshan lead Kranthiveera Sangolli Rayanna Vijaya Yaathre...Starts from Dec 02 from Bangalore. The road show ends in on 7th December in Mandya. Meanwhile the movie completes 25 days in 100 plus theaters.
    Thursday, November 29, 2012, 16:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X