ಆಕ್ಷನ್ ಕಟ್ ಹೇಳಲಿರುವ ಗೀತಸಾಹಿತಿ ಕವಿರಾಜ್

By Rajendra

Lyricist Kaviraj
ನಡೆದಾಡುವ ಕಾಮನಬಿಲ್ಲು (ಪರಿಚಯ), ನೀನು ಬಂದ ಮೇಲೆ ತಾನೆ (ಕೃಷ್ಣ), ಏನೋ ಒಂಥರಾ (ಹುಡಿಗಾಟ), ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ (ಚಪ್ಪಾಳೆ)...ಈ ರೀತಿಯ ಅದೆಷ್ಟೋ ಗೀತೆಗಳನ್ನು ಹೆಣೆದ ಗೀತಸಾಹಿತಿ ಕವಿರಾಜ್. ಈಗವರು ನಿರ್ದೇಶಕನ ಕ್ಯಾಪ್ ಧರಿಸಲು ಸಿದ್ಧವಾಗಿದ್ದಾರೆ.

ಅವರ ನಿರ್ದೇಶನದ ಚಿತ್ರ ಇದೇ ವರ್ಷ ಸೆಟ್ಟೇರಲಿದೆಯಂತೆ. ಸದ್ಯಕ್ಕೆ ಚಿತ್ರಕಥೆ ಹೆಣೆಯುವುದರಲ್ಲಿ ಅವರು ಬಿಜಿ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ಎಲ್ಲರನ್ನೂ ಮನರಂಜಿಸಲಿದೆ ಎಂಬ ವಿಶ್ವಾಸ ಅವರಿಗಿದೆ. ಈಗಾಗಲೆ ಅವರು ಹಲವಾರು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಇತ್ತೀಚೆಗಷ್ಟೇ ತೆರೆಕಂಡ ದುನಿಯಾ ವಿಜಯ್ ಅಭಿನಯದ ರಜಿನಿಕಾಂತ ಚಿತ್ರದಲ್ಲಿ ಅವರು ಒಂದು ಸಣ್ಣ ಪಾತ್ರವನ್ನು ಪೋಷಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಿಸುತ್ತಿರುವ ಚಿತ್ರವೊಂದಕ್ಕೆ ಕವಿರಾಜ್ ಸಹಾಯ ನಿರ್ಮಾಪರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ನಿರ್ದೇಶನದ ಸಿನಿಮಾದ ಚಿತ್ರಕಥೆ ಸಂಪೂರ್ಣವಾದ ಬಳಿಕಷ್ಟೇ ಪಾತ್ರವರ್ಗದ ಆಯ್ಕೆ ಎಂದಿದ್ದಾರೆ. ಮೊದಲು ಚಿತ್ರಕಥೆ ಕಡೆಗೆ ಗಮನ ಹರಿಸಿದ್ದೇನೆ. ಅದು ಪೂರ್ಣವಾದ ಬಳಿಕ ಅದಕ್ಕೆ ಹೊಂದುವ ನಟರನ್ನು ಆಯ್ಕೆ ಮಾಡುತ್ತೇನೆ. ಬಹುಶಃ ಈ ವರ್ಷದ ಕೊನೆಗೆ ಚಿತ್ರ ಸೆಟ್ಟೇರಬಹುದು. (ಏಜೆನ್ಸೀಸ್)

More from Filmibeat

English summary
Kannada lyricist Kaviraj all set to direct a film this year end. The script is in the initial stages, I assure that my film will be an entertainer says Kaviraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X