ಅಬ್ಬಾ..'ಯಜಮಾನ' ಟೈಟಲ್ ನಲ್ಲಿಯೇ ಇಷ್ಟೊಂದು ವಿಷಯವಿದೆ!
Recommended Video

Yajamana Movie: ಅಬ್ಬಾ..'ಯಜಮಾನ' ಟೈಟಲ್ ನಲ್ಲಿಯೇ ಇಷ್ಟೊಂದು ವಿಷಯವಿದೆ! | FILMIBEAT KANNADA
'ಯಜಮಾನ' ಸಿನಿಮಾ ಇನ್ನು 8 ದಿನಗಳಲ್ಲಿ ಬಿಡುಗಡೆಯಾಗುತ್ತಿದೆ. ಆ ಸಿನಿಮಾ ನೋಡುವ ಮುನ್ನ ಆ ಟೈಟಲ್ ನಲ್ಲಿ ಇರುವ ವಿಷಯವನ್ನು ತಿಳಿಸಿದ್ದಾರೆ ಗೀತರಚನೆಕಾರ ಕವಿರಾಜ್.
'ಯಜಮಾನ' ಚಿತ್ರದ ಪತ್ರಿಕಾಗೋಷ್ಠಿ ಕಾರ್ಯಕ್ರಮಕ್ಕೆ ಆಗಮಿಸಿದ ಕವಿರಾಜ್ 'ಯಜಮಾನ' ಎಂಬ ನಾಲ್ಕು ಅಕ್ಷರದಲ್ಲಿಯೇ ಚಿತ್ರದ ಬಗ್ಗೆ ಮಾತನಾಡಿದರು.
ಜನ - 'ಜನ' ಈ ಸಿನಿಮಾ ಮೆಚ್ಚುತ್ತಾರೆ
ಜಯ - ಸಿನಿಮಾಗೆ 'ಜಯ' ಸಿಗುತ್ತದೆ
ಜಮಾ - ನಿರ್ಮಾಪಕರ ಖಾತೆಯ ಹಣ 'ಜಮಾ' ಆಗುತ್ತದೆ
ಜಮಾನ - 'ಜಮಾನ' ಯಜಮಾನನನ್ನು ಮೆಚ್ಚುತ್ತದೆ

ಎಂದು ನಾಲ್ಕು ಅಕ್ಷರವನ್ನು ಇಟ್ಟುಕೊಂಡು ಆಟ ಆಡಿದರು. ಕವಿರಾಜ್ ಅವರ ಪದಗಳ ಆಟವನ್ನು ಕಂಡು ದರ್ಶನ್ ಕೂಡ ಚಪ್ಪಾಳೆ ತಟ್ಟಿದರು.
ಅಂದಹಾಗೆ, ದರ್ಶನ್ ಅವರ ಅನೇಕ ಸಿನಿಮಾಗಳಿಗೆ ಕವಿರಾಜ್ ಹಾಡನ್ನು ಬರೆದಿದ್ದಾರೆ. 'ಯಜಮಾನ'ದ 'ಒಂದು ಮುಂಜಾನೆ..' ಹಾಡಿಗೆ ಸಹ ಕವಿರಾಜ್ ಸಾಹಿತ್ಯವಿದೆ. ಈ ಹಾಡಿಗೆ 50 ಪಲ್ಲವಿಗಳನ್ನು ಬರೆದಿದ್ದು, ಕೊನೆಗೆ ಒಂದು ಪಲ್ಲವಿಯನ್ನು ಹರಿಕೃಷ್ಣ ಆಯ್ಕೆ ಮಾಡಿಕೊಂಡರಂತೆ.
More from Filmibeat
English summary
Kannada movie lyrics writer kaviraj spoke about Darshan's 'Yajamana' movie.


Click it and Unblock the Notifications











