Don't Miss!
- News Bank Holidays in April: ಏಪ್ರಿಲ್ನಲ್ಲಿ 14 ದಿನಗಳ ಕಾಲ ಬ್ಯಾಂಕ್ ರಜೆ, ಪಟ್ಟಿ ಇಲ್ಲಿದೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರಕ್ಕೆ 14 ವರ್ಷ: ಸುದೀಪ್ಗೆ ಸ್ಮರಣೀಯ ನೆನಪು
ಸಾಹಸಸಿಂಹ ಡಾ ವಿಷ್ಣುವರ್ಧನ್ ನಟನೆಯಲ್ಲಿ ಮೂಡಿ ಬಂದಿದ್ದ 'ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾ 14 ವರ್ಷ ಪೂರೈಸಿದೆ. ಆಗಸ್ಟ್ 24, 2017ರಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ಹದಿನಾಲ್ಕು ವರ್ಷ ತುಂಬಿದ ಸಂತಸವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
'ಮೇಷ್ಟ್ರು' ಎಂದೇ ಗುರುತಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಬಂದ ಬಹಳ ವಿಶೇಷ ಚಿತ್ರಗಳು ಪೈಕಿ 'ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾ ಸಹ ಒಂದು. ಅಮೆರಿಕಾ ಅಮೆರಿಕಾ, ಅಮೃತಧಾರೆ ಅಂತಹ ಹಿಟ್ ಚಿತ್ರಗಳ ನಂತರ ಮಾತಾಡ್ ಮಾತಾಡ್ ಮಲ್ಲಿಗೆ ಕೈಗೆತ್ತಿಕೊಂಡಿದ್ದರು.
ಚಮಚಗಳನ್ನು ದೂರವಿಟ್ಟು ಕೆಲಸ ಮಾಡಿ; ನೂತನ ಸಿಎಂಗೆ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಪಕ್ಕಾ ಆಕ್ಷನ್ ಸಿನಿಮಾಗಳಲ್ಲಿ ಘರ್ಜಿಸುತ್ತಿದ್ದ ವಿಷ್ಣುವರ್ಧನ್ ಅವರ ಜೊತೆ ಕಲಾತ್ಮಕ ಚಿತ್ರವೊಂದು ಮಾಡುವ ಪ್ರಯತ್ನದಲ್ಲಿ ಗೆದ್ದು ಬೀಗಿದ್ದರು. ಕೆ ಮಂಜು ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ವಿಷ್ಣುವರ್ಧನ್, ಸುಹಾಸಿನಿ, ಕಿಚ್ಚ ಸುದೀಪ್, ನಿವೇದಿತಾ, ಅರುಣ್ ಸಾಗರ್, ರಂಗಾಯಣ ರಘು, ತಾರಾ, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ಕೋಮಲ್ ಸೇರಿದಂತೆ ಅನೇಕರು ನಟಿಸಿದ್ದರು.
ನನ್ನ ಸಿದ್ಧಾಂತಗಳನ್ನು ಹೇಳಿದ ಸಿನಿಮಾ
'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರ 14 ವರ್ಷ ಪೂರೈಸಿದ ಹಿನ್ನೆಲೆ ನಾಗತಿಹಳ್ಳಿ ಚಂದ್ರಶೇಖರ್ ಟ್ವಿಟ್ಟರ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ''ನನ್ನ ನಂಬಿಕೆಯ ಸಿದ್ಧಾಂತಗಳನ್ನು ಹೇಳಲು ಸಾಧ್ಯವಾದ ಮೆಚ್ಚಿನ ಸಿನಿಮಾ. ವಿಷ್ಣು ಅವರ ಅಪರಿಮಿತ ಸ್ನೇಹ, ವಿಷ್ಣು-ಸುದೀಪ್ ಅವರ ಮನೋಜ್ಞ ಮುಖಾಮುಖಿ ದೃಶ್ಯ, ಪ್ರಿಯ ಶಿಷ್ಯ ಕೆ ಮಂಜು ಪಟ್ಟ ಶ್ರಮ ಎಲ್ಲ ನೆನಪಾಗುತ್ತದೆ'' ಎಂದು ಪೋಸ್ಟ್ ಮಾಡಿದ್ದಾರೆ.
ಎಂಎನ್ಸಿ vs ರೈತರು
ಎಂಎನ್ಸಿ ಕಂಪನಿಗಳು ರಾಷ್ಟ್ರೀಯ ಹೆದ್ದಾರಿ, ನೈಸ್ ರಸ್ತೆ, ಫ್ಯಾಕ್ಟರಿ ಎಂಬ ಕಾರಣಗಳನ್ನು ನೀಡಿ ರೈತರ ಭೂಮಿಯನ್ನು ಕಬಳಿಸುತ್ತದೆ. ಎಂಎನ್ಸಿ ಕಂಪನಿಗಳ ದಬ್ಬಾಳಿಕೆ ವಿರುದ್ಧ ಹೂವಯ್ಯ (ವಿಷ್ಣುವರ್ಧನ್) ತಿರುಗಿಬಿದ್ದು ತಮ್ಮ ಶಾಂತಿಯುತ ಹೋರಾಟದಿಂದ ರೈತರ ಭೂಮಿ, ತಮ್ಮ ಊರು ಉಳಿಸಿಕೊಳ್ಳಲು ಯಶಸ್ವಿಯಾಗ್ತಾರೆ. ಕ್ರಾಂತಿಕಾರಿಯಾಗಿ ಮೂಡಿಬಂದಿದ್ದ ಈ ಸಿನಿಮಾ ಜನಮನ ಗೆದ್ದಿತ್ತು. ವಿಷ್ಣುವರ್ಧನ್ ಅವರ ವಿಶಿಷ್ಟ ಅಭಿನಯ ಮೆಚ್ಚುಗೆ ಗಳಿಸಿಕೊಂಡಿತ್ತು.
ವಿಷ್ಣುವರ್ಧನ್ ಜೊತೆ ಮೊದಲ ಚಿತ್ರ
ಕಿಚ್ಚ ಸುದೀಪ್ ಅವರು ವಿಷ್ಣುವರ್ಧನ್ ಅವರ ಅಭಿಮಾನಿ. ಅವರ ಆದರ್ಶ, ವ್ಯಕ್ತಿತ್ವವನ್ನು ಅನುಸರಿಸುವ ಸುದೀಪ್ಗೆ ಮೊದಲ ಬಾರಿಗೆ ಅವರೊಟ್ಟಿಗೆ ನಟಿಸುವ ಅವಕಾಶ ಸಿಕ್ಕಿದ್ದು 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದಲ್ಲಿ. ನಕ್ಸಲ್ ನಾಯಕನ ಪಾತ್ರದಲ್ಲಿ ಸುದೀಪ್ ನಟಿಸಿದ್ದು, ವಿಷ್ಣುವರ್ಧನ್ ಮತ್ತು ಸುದೀಪ್ ಮುಖಾಮುಖಿ ದೃಶ್ಯಗಳನ್ನು ನೋಡುಗರಿಗೆ ಬಹಳ ಇಷ್ಟವಾಗಿತ್ತು. ಶಾಂತಿ ಮತ್ತು ಕ್ರಾಂತಿ ಕೊನೆಯಲ್ಲಿ ಶಾಂತಿ ಗೆಲ್ಲುತ್ತದೆ ಎಂದು ವಿಷ್ಣುವರ್ಧನ್-ಸುದೀಪ್ ಪಾತ್ರಗಳು ಪ್ರತಿಬಿಂಬಿಸಿದ್ದವು. ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸುದೀಪ್ ಯಾವಾಗಲೂ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರವನ್ನು ಸ್ಮರಿಸಿಕೊಳ್ಳುತ್ತಾರೆ.
ಎರಡು ರಾಜ್ಯ ಪ್ರಶಸ್ತಿ
'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರಕ್ಕೆ ಎರಡು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಮೂರನೇ ಸಿನಿಮಾ ಹಾಗೂ ಅತ್ಯುತ್ತಮ ಗೀತೆ ರಚನೆಗಾಗಿ ರಾಜ್ಯ ಪ್ರಶಸ್ತಿ ಲಭಿಸಿತ್ತು. ಮನೋಮೂರ್ತಿ ಸಂಗೀತ ನಿರ್ದೇಶಿಸಿದ್ದರು. ವ್ಯವಹಾರಿಕವಾಗಿ ಈ ಚಿತ್ರ ಅಷ್ಟು ದೊಡ್ಡ ಗಳಿಕೆ ಕಂಡಿಲ್ಲ. ಈ ಬಗ್ಗೆ ನಿರ್ಮಾಪಕ ಕೆ ಮಂಜು ಬೇಸರ ವ್ಯಕ್ತಪಡಿಸಿದ್ದರು. ಒಂದೊಳ್ಳೆ ಸಿನಿಮಾ, ರೈತರ ಪರವಾಗಿದ್ದ ಚಿತ್ರ ಬಿಸಿನೆಸ್ನಲ್ಲಿ ನಿರೀಕ್ಷೆಯ ಮಟ್ಟ ತಲುಪಲಿಲ್ಲ ಎಂದು ನಿರಾಸೆಯಾಗಿದ್ದರು.