Just In
Don't Miss!
- Automobiles
2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ನ್ಯೂ ಜನರೇಷನ್ ಕ್ರೆಟಾ
- News
ಕೈ ತಪ್ಪಿದ ಸಚಿವ ಸ್ಥಾನ; ಅಪಚ್ಚು ರಂಜನ್ ಆಕ್ರೋಶ
- Sports
ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್ ಬ್ರಿಸ್ಬೇನ್, ದಿನ 3, Live ಸ್ಕೋರ್
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಶ್ 'ಮಾಸ್ಟರ್ ಪೀಸ್' ಬಿಡುಗಡೆಗೆ ನೋ ಪ್ರಾಬ್ಲಂ!!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್' ಬಿಡುಗಡೆಗೆ ಎರಡೇ ದಿನ ಬಾಕಿ. ಅಷ್ಟರಲ್ಲೇ, ಸಿನಿಮಾ ಬಗ್ಗೆ ಅಪಸ್ವರ ಕೇಳಿ ಬಂದಿತ್ತು.
ಸಂತೋಷ್ ಚಿತ್ರಮಂದಿರದಲ್ಲಿ ಹಾಕಲಾದ ಕಟೌಟ್ ಸಲುವಾಗಿ 'ಮಾಸ್ಟರ್ ಪೀಸ್' ಚಿತ್ರದ ವಿರುದ್ಧ 'ಜಾತ್ರೆ' ಸಿನಿಮಾ ನಾಯಕ ಚೇತನ್ ಚಂದ್ರ ಬೇಸರಗೊಂಡಿದ್ದರು. ['ಮಾಸ್ಟರ್ ಪೀಸ್' ಬಿಡುಗಡೆಗೆ ಮುನ್ನ ಏನಿದು ಅಪಸ್ವರ.?]
ಆದ್ರೀಗ, ಎಲ್ಲಾ ಗೊಂದಲ-ಗದ್ದಲಕ್ಕೆ ಫುಲ್ ಸ್ಟಾಪ್ ಬಿದ್ದಿದೆ. 'ಜಾತ್ರೆ' ಹಾಗೂ 'ಮಾಸ್ಟರ್ ಪೀಸ್' ಚಿತ್ರ ನಡುವೆ ಎದ್ದಿದ್ದ ಅಸಮಾಧಾನ ಶಮನವಾಗಿದೆ. ನಟ ಚೇತನ್ ಚಂದ್ರ ಜೊತೆ ಯಶ್ ಮಾತುಕತೆ ನಡೆಸಿ ವಿವಾದಕ್ಕೆ ಶುಭಂ ಹಾಡಿದ್ದಾರೆ. [ಮುಯ್ಯಿಗೆ ಮುಯ್ಯಿ; ಯಶ್ 'ಮಾಸ್ಟರ್ ಪೀಸ್' ಕಟೌಟ್ ಪೀಸ್ ಪೀಸ್!]
ಅಂದ್ಹಾಗೆ, 'ಮಾಸ್ಟರ್ ಪೀಸ್' ಸಿನಿಮಾ ಇದೇ ಗುರುವಾರ (ಡಿಸೆಂಬರ್ 24) ಭಾರತದಾದ್ಯಂತ ಬಿಡುಗಡೆ ಆಗಲಿದೆ. 'ಕೇಡಿ ನಂ.1' ಆಗಿ ಯಶ್ ಸಿನಿಮಾದಲ್ಲಿ ಮಿಂಚಿದ್ದಾರೆ. ಯಶ್ ಜೊತೆ ಶಾನ್ವಿ ಡ್ಯುಯೆಟ್ ಹಾಡಿದ್ದಾರೆ.
'ಮಾಸ್ಟರ್ ಪೀಸ್' ಚಿತ್ರದ ಮೂಲಕ ಸಂಭಾಷಣೆಕಾರ ಮಂಜು ಮಾಂಡವ್ಯ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸುವ ಹುಮ್ಮಸ್ಸು ಮಂಜು ಮಾಂಡವ್ಯಗಿದೆ. ಅವರ ಕೈಹಿಡಿದು ಸಾಥ್ ಕೊಡುವ ಜವಾಬ್ದಾರಿ ನಿಮ್ಮದು...