Don't Miss!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಾಸ್ಟಿಂಗ್ ಕೌಚ್' ತಡೆಯಲು ಹೊಸ ಹೆಜ್ಜೆಯಿಟ್ಟ ಪವನ್ ಕಲ್ಯಾಣ್
ಕಳೆದ ಕೆಲವು ತಿಂಗಳಿನಿಂದ ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಗಲಾಟೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ಯುವ ನಟಿ ಶ್ರೀರೆಡ್ಡಿ ಸೇರಿದಂತೆ ಹಲವು ನಟಿಯರು ತೆಲುಗು ಸಿನಿ ಲೋಕದ ನಿರ್ದೇಶಕ, ನಿರ್ಮಾಪಕ, ನಟರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹೆಸರನ್ನ ಕೂಡ ಈ ಕಾಸ್ಟಿಂಗ್ ಕೌಚ್ ವಿವಾದದಲ್ಲಿ ಎಳೆದು ತಂದು ದೊಡ್ಡ ಸಂಚಲನ ಸೃಷ್ಟಿಸಿದ್ದರು. ಈ ನಡುವೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜನಸೇನಾ ನಾಯಕ ಪವನ್ ವಿರುದ್ಧ ಟ್ವಿಟ್ಟರ್ ನಲ್ಲಿ ದೊಡ್ಡ ಯುದ್ದವನ್ನ ಮಾಡಿದರು.
ಇದರಿಂದ ತೀವ್ರ ಬೇಸರಗೊಂಡ ಮೆಗಾಸ್ಟಾರ್ ಹಾಗೂ ಮೆಗಾ ಫ್ಯಾಮಿಲಿಯ ಅಭಿಮಾನಿಗಳು ಶ್ರೀರೆಡ್ಡಿ ಮತ್ತು ಆರ್.ಜಿ.ವಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಇದೆಲ್ಲವೂ ಈಗ ಮುಗಿದ ಅಧ್ಯಾಯ. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣದ 'ಕಾಸ್ಟಿಂಗ್ ಕೌಚ್' ತಡೆಯಲು ಇದೀಗ ಪವನ್ ಕಲ್ಯಾಣ್ ಹೊಸ ಹೆಜ್ಜೆಯಿಟ್ಟಿದ್ದಾರೆ. ಏನದು.? ಮುಂದೆ ಓದಿ....
ಆತ್ಮ ಗೌರವ ಹೋರಾಟ ಸಮಿತಿ
ಸಿನಿ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಸಂಪ್ರದಾಯವನ್ನ ತಡೆಯಲು ಮತ್ತು ಸಿನಿಮಾ ಇಂಡಸ್ಟ್ರಿಗೆ ಬರುತ್ತಿರುವ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನ ನಿಯಂತ್ರಿಸುವ ಸಲುವಾಗಿ ''ಆತ್ಮ ಗೌರವ ಹೋರಾಟ ಸಮಿತಿ'' ರಚನೆ ಮಾಡುವುದಾಗಿ ಪವನ್ ಕಲ್ಯಾಣ್ ನಿರ್ಧರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಸಮಿತಿಗೆ 'ಜನಸೇನಾ' ಬೆಂಬಲ
ಸಿನಿ ಇಂಡಸ್ಟ್ರಿಯ ಒಳಿತಿಗಾಗಿ ರಚನೆಯಾಗಲಿರುವ 'ಆತ್ಮ ಗೌರವ ಹೋರಾಟ ಸಮಿತಿ'ಗೆ ಜನಸೇನಾ ವೀರ ಮಹಿಳಾ ವಿಭಾಗವೂ ಜೊತೆಯಾಗಿ ನಿಲ್ಲುತ್ತದೆ. ಎಲ್ಲ ರೀತಿಯಲ್ಲೂ ಈ ಸಮಿತಿಗೆ ನಮ್ಮ ಪಕ್ಷದ ಮಹಿಳಾ ವಿಭಾಗ ಬೆಂಬಲವಾಗಿ ನಿಲ್ತಾರೆ'' ಎಂಬ ವಿಷ್ಯವನ್ನ ಪವನ್ ತಿಳಿಸಿದ್ದಾರೆ.
ಪವನ್ ಕಲ್ಯಾಣ್ ಗೆ ಬೆಂಬಿಡದೆ ಕಾಡುತ್ತಿರುವ ರಾಮ್ ಗೋಪಾಲ್ ವರ್ಮಾ
ಶ್ರೀರೆಡ್ಡಿ ಏನಂದ್ರು.?
ಇನ್ನು ಪವನ್ ಕಲ್ಯಾಣ್ ಅವರು ಈ ನಿರ್ಧಾರವನ್ನ ತಮ್ಮ ಟ್ವಿಟ್ಟರ್ ಮೂಲಕ ಹೇಳುತ್ತಿದ್ದಂತೆ, ನಟಿ ಶ್ರೀರೆಡ್ಡಿ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಪವನ್ ಟ್ವೀಟ್ ಗೆ ರಿಯಾಕ್ಷನ್ ಕೊಟ್ಟಿದ್ದು, ಎರಡು ಕೈ ಎತ್ತಿ ಮುಗಿಯುತ್ತಿರುವ ಎಮೋಜಿ ಪೋಸ್ಟ್ ಮಾಡಿದ್ದಾರೆ.
ಪವನ್ ಕಲ್ಯಾಣ್ ವಿವಾದಕ್ಕೆ ಹೊಸ ಟ್ವಿಸ್ಟ್ ನೀಡಿದ ಶ್ರೀರೆಡ್ಡಿ
ಇದು ಸಕ್ಸಸ್ ಆಗುತ್ತಾ.?
ತೆಲುಗು ಇಂಡಸ್ಟ್ರಿಯಲ್ಲಿ ಸದ್ಯದ ಮಟ್ಟಿಗೆ ಕಾಸ್ಟಿಂಗ್ ಕೌಚ್ ಇದೆ ಎನ್ನುವುದನ್ನ ಬಹುತೇಕ ಕಲಾವಿದರು ಒಪ್ಪಿಕೊಳ್ಳುತ್ತಿಲ್ಲ. ಕೇವಲ ನೊಂದ ಜೂನಿಯರ್ ಕಲಾವಿದರು ಮಾತ್ರ ಇದೆ ಎಂದು ಆರೋಪಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಕಲಾವಿದರ ಸಂಘ, ವಾಣಿಜ್ಯ ಮಂಡಳಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಗ ಪವನ್ ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ಎಷ್ಟರ ಜನರು ವಿಶ್ವಾಸ ಇಡುತ್ತಾರೆ ಎಂಬುದು ಪ್ರಶ್ನೆಯಾಗಲಿದೆ. ಮತ್ತು ಇದರಿಂದ ಈ ಸಮಸ್ಯೆ ನಿಯಂತ್ರಿಸಲು ಸಾಧ್ಯವಾಗುತ್ತಾ ಎಂಬುದು ಕುತೂಹಲವಾಗಿದೆ.