Don't Miss!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- News Snake Video: ವಿಮಾನದಲ್ಲಿ ಹಾವು ಬಿಟ್ಟ ವ್ಯಕ್ತಿ: ಬೆಂಗಳೂರಿನಲ್ಲಿ ಬಂಧನ- ಶಿವಪುರಿಯಲ್ಲಿ ಅಪರೂಪದ ಹಾವು ಪತ್ತೆ!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಗರದ ಕುಡುಕರು ಪೂನಂ ಪಾಂಡೆಯನ್ನು ಬೆಚ್ಚಿಬೀಳಿಸಿದ್ರಂತೆ
ಸಾಧ್ಯವಾದಷ್ಟು ಕಮ್ಮಿ ಬಟ್ಟೆ ಧರಿಸಿ ಪಡ್ಡೆ ಹೈಕ್ಳ ಕೊರೆಯುವ ಧನುರ್ಮಾಸದ ಚಳಿಯುನ್ನು ಒದ್ದೋಡಿಸುವ ಪೂನಂ ಪಾಂಡೆ ಹೊಸ ವರ್ಷಾಚರಣೆಗೆ ಇದೇ ಮೊದಲ ಬಾರಿಗೆ ಲೈವ್ ಪರ್ಫಾರ್ಮೆನ್ಸ್ ನೀಡಲು ಬೆಂಗಳೂರಿಗೆ ಬಂದಿದ್ದರು. (ಡಿ.31ರ ರಾತ್ರಿ ಬೆಂಗಳೂರಲ್ಲಿ ಪೂನಂ ಏರಿಸಲಿದ್ದಾಳೆ ನಶಾ)
ನಗರದ ಜೆ ಪಿ ನಗರ 9ನೇ ಹಂತದಲ್ಲಿರುವ (ಅಂಜನಾಪುರ, ಕನಕಪುರ ರಸ್ತೆ) ಕ್ಯಾಪಿಟಲ್ ಕ್ಲಬ್ ರಿಸಾರ್ಟಿನಲ್ಲಿ ಡಿಸೆಂಬರ್ 31ರಂದು ಸಂಜೆ ಏಳೂವರೆಗೆ ಪೂನಂ ಪಾಂಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕುಣಿಯಲು ಪೂನಂ ಪಾಂಡೆ ಒಂದು ಕೋಟಿ ಪಡೆದಿದ್ದರೆನ್ನುವುದು ಸುದ್ದಿಯಿತ್ತು.
ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ತನಗಾದ ಕಹಿ ಘಟನೆಯನ್ನು ಪೂನಂ ಪಾಂಡೆ ಖಾಸಗಿ ಪತ್ರಿಕೆಯೊಂದಕ್ಕೆ ತೆರೆದಿಟ್ಟಿದ್ದಾರೆ. ಅಲ್ಲದೇ, ಇನ್ನು ಮುಂದೆ ಯಾವ ಕಾರಣಕ್ಕೂ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ನ್ಯೂಇಯರ್ ರೆಸೊಲ್ಯುಷನ್ ತೆಗೆದು ಕೊಂಡಿದ್ದಾರೆ.
ಬೆಂಗಳೂರು ಐಷಾರಾಮಿ ರಿಸಾರ್ಟಿನಲ್ಲಿ ಹೊಸ ವರ್ಷಾಚರಣೆಯಂದು ನಡೆದಿದ್ದೇನು ಎನ್ನುವುದನ್ನು ಪೂನಂ ಪಾಂಡೆ ವಿವರಿಸಿದ್ದು ಹೀಗೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ದೊಡ್ಡ ಮೊತ್ತದ ಹಣದ ಮಾತುಕತೆಯಾಗಿತ್ತು. ಕಾರ್ಯಕ್ರಮ ಆರಂಭವಾಗಿ ಕೇವಲ ಹತ್ತು ನಿಮಿಷಗಳಾಗಿದ್ದವು.
ನನಗೆ ರಿಸಾರ್ಟಿನಲ್ಲಿ ಉತ್ತಮ ಭದ್ರತೆಯನ್ನು ಒದಗಿಸಲಾಗಿತ್ತು. 15 ರಿಂದ 20 ಬೌನ್ಸರ್ ಮತ್ತು ಸೆಕ್ಯೂರಿಟಿ ವ್ಯವಸ್ಥೆಯನ್ನು ನೀಡಲಾಗಿತ್ತು. ಆದರೆ ಪಾನಮತ್ತರಾಗಿದ್ದ ಯುವಕರ ಗುಂಪೊಂದು ವೇದಿಕೆಯ ಮುಂದೆ ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು.
ಕೊನೆ ಕೊನೆಗೆ ಬೌನ್ಸರ್ ಮತ್ತು ಸೆಕ್ಯೂರಿಟಿಗಳಿಗೂ ಅವರನ್ನು ನಿಯಂತ್ರಿಸಲಾಗಲಿಲ್ಲ. ನನ್ನ ಕಾರ್ಯಕ್ರಮ ಮುಗಿಯುತ್ತಿದ್ದಂತೇ ವೇದಿಕೆಯನ್ನೇ ಅವರು ಹತ್ತಿದರು. ಅವರ ವರ್ತನೆ ನನಗೆ ಭಯ ಹುಟ್ಟಿಸಿತು.
ಅಷ್ಟರಲ್ಲೇ ಹುಷಾರಾದ ನಾನು ವೇದಿಕೆಯಿಂದ ಕೆಳಗಿಳಿದು ನನಗೆ ನೀಡಲಾಗಿದ್ದ ಕೊಠಡಿ ಕಡೆಗೆ ಓಡಲಾರಂಭಿಸಿದೆ. ಪಾನಮತ್ತ ಯುವಕರು ಕೊಠಡಿಯ ವರೆಗೂ ನನ್ನನ್ನು ಹಿಂಬಾಲಿಸಿ ಕೊಂಡು ಬಂದರು. ನನ್ನ ಜೀವನದಲ್ಲಿ ಅಷ್ಟು ಜೋರಾಗಿ ಎಂದೂ ನಾನು ಓಡಿಲ್ಲ,
ಕೊನೆಗೆ ಸೆಕ್ಯೂರಿಟಿ ಮತ್ತು ಬೌನ್ಸರುಗಳು ಹರಸಾಹಸ ಪಟ್ಟು ಅವರನ್ನು ಹೊರಕ್ಕೆ ಎಳೆದು ಕೊಂಡು ಹೋದರು. ಇನ್ನು ಮುಂದೆ ಇಂತಹ ಪಾರ್ಟಿಯಲ್ಲಿ ನಾನೆಂದೂ ಭಾಗವಹಿಸುವುದಿಲ್ಲ ಎಂದು ಪೂನಂ ಪಾಂಡೆ ತನ್ನ ಭಯಾನಕ ಅನುಭವವನ್ನು ಬಿಚ್ಚಿಟ್ಟರು.
ಪಡ್ಡೆಗಳ ಹೃದಯ ಸಿಂಹಾಸನಕ್ಕೆ ಕಿಚ್ಚು ಹಚ್ಚುತ್ತಿದ್ದ ಪೂನಂ ಪಾಂಡೆ ಕುಡುಕರಿಂದ ನಗರದಲ್ಲಿ ಬೆಚ್ಚಿಬಿದ್ದ ಪರಿಯಿದು.