'ಸಿಂಹ ಹಸ್ತ' ತಂಡದಿಂದ ಬಡ ರೋಗಿಗಳಿಗೆ ಸಹಾಯ ಹಸ್ತ

By Harshitha

ಬರೋಬ್ಬರಿ 25 ಲಕ್ಷ ರೂಪಾಯಿ ಖರ್ಚು ಮಾಡಿ ಅದ್ಧೂರಿ ಆಡಿಯೋ ರಿಲೀಸ್ ಸಮಾರಂಭ ಮಾಡುವ ಬದಲು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ನಿರ್ಧಾರ ಮಾಡಿ 'ಸಿಂಹ ಹಸ್ತ' ಕಾರ್ಯಕ್ರಮವನ್ನು ರೂಪಿಸಿದವರು 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ.

ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಆದರ್ಶವನ್ನು ಪಾಲಿಸುತ್ತಾ, ಅವರ ಹೆಸರಿನಲ್ಲಿ ಒಂದು ಅರ್ಥ ಪೂರ್ಣ ಕಾರ್ಯಕ್ರಮ ಮಾಡಲು ಮುಂದಾದ ಸಾಜಿದ್ ಖುರೇಶಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರಕ ಕಾಯಿಲೆಗಳಿಂದ ನರಳುತ್ತಿರುವ, ಹಣ ಇಲ್ಲದೆ ಪರದಾಡುತ್ತಿರುವ ಬಡ ರೋಗಿಗಳಿಗೆ 25 ಲಕ್ಷ ರೂಪಾಯಿ ಕೊಡಲು ಮನಸ್ಸು ಮಾಡಿದ್ದರು. [ಡಾ.ವಿಷ್ಣುವರ್ಧನ್ ಹೆಸರಿಗೆ ಅಕ್ಷರಶಃ ಶೋಭೆ ತರುವ ಕೆಲಸ ಇದು.!]

ಅದರಂತೆ, ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳನ್ನು ಗುರುತಿಸುವ ಕೆಲಸ 'ಸಿಂಹ ಹಸ್ತ' ತಂಡದ್ದಾಗಿತ್ತು. ಮುಂದೆ ಓದಿ....

250ಕ್ಕೂ ಹೆಚ್ಚು ರೋಗಿಗಳಿದ್ದರು

250ಕ್ಕೂ ಹೆಚ್ಚು ರೋಗಿಗಳಿದ್ದರು

ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿ ತೀರಾ ಕಷ್ಟದಲ್ಲಿ ಇರುವ, ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದ 250ಕ್ಕೂ ಹೆಚ್ಚು ರೋಗಿಗಳನ್ನು 'ಸಿಂಹ ಹಸ್ತ' ತಂಡ ಗುರುತಿಸಿತ್ತು. ಅದರಲ್ಲಿ 25 ರೋಗಿಗಳಿಗೆ ನಿರ್ಮಾಪಕ ಸಾಜಿದ್ ಖುರೇಶಿ ತಲಾ ಒಂದು ಲಕ್ಷ ರೂಪಾಯಿ ನೀಡಲಿದ್ದಾರೆ. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]

ಮೊದಲ ಪಟ್ಟಿ ಅಂತಿಮ

ಮೊದಲ ಪಟ್ಟಿ ಅಂತಿಮ

25 ರೋಗಿಗಳ ಪೈಕಿ ಮೊದಲ ಹಂತವಾಗಿ 10 ರೋಗಿಗಳನ್ನು ನಿರ್ಮಾಪಕ ಸಾಜಿದ್ ಖುರೇಶಿ ಅಂತಿಮಗೊಳಿಸಿದ್ದಾರೆ. [ಡಾ.ವಿಷ್ಣು 'ನಾಗರಹಾವು' ನೋಡಲು ತುದಿಗಾಲಲ್ಲಿ ನಿಂತಿರುವ 'ಸಿಂಗಂ' ಸೂರ್ಯ]

ಇವರೇ ಅವರು..

ಇವರೇ ಅವರು..

ನಾನಾ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವ, ಆರ್ಥಿಕ ಸಂಕಷ್ಟದಲ್ಲಿ ಇರುವ ಸೌಮ್ಯ, ವರ್ಷ, ಪ್ರಕಾಶ್, ಕಿರಣ್, ಗೌತಮ್, ಪುಷ್ಪ, ಹನುಮಂತಿ, ಅಂಬಿಕಾ, ಪಾರ್ವತಮ್ಮ ಹಾಗೂ ಶ್ರೀನಿವಾಸ್ ರವರಿಗೆ 'ನಾಗರಹಾವು' ಚಿತ್ರತಂಡ ಸಹಾಯ ಹಸ್ತ ಚಾಚಿದೆ.

ಇನ್ನು ನಾಲ್ಕು ದಿನಗಳಲ್ಲಿ 15 ಜನರ ಪಟ್ಟಿ ಅಂತಿಮ

ಇನ್ನು ನಾಲ್ಕು ದಿನಗಳಲ್ಲಿ 15 ಜನರ ಪಟ್ಟಿ ಅಂತಿಮ

'ನಾಗರಹಾವು' ಆಡಿಯೋ ರಿಲೀಸ್ ದಿನಾಂಕದ ಒಳಗಾಗಿ ಉಳಿದ 15 ರೋಗಿಗಳ ಪಟ್ಟಿ ಅಂತಿಮವಾಗಲಿದೆ.

ಆಗಸ್ಟ್ 14 ರಂದು ಹಣ ವಿತರಣೆ

ಆಗಸ್ಟ್ 14 ರಂದು ಹಣ ವಿತರಣೆ

ಆಗಸ್ಟ್ 14 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುವ 'ನಾಗರಹಾವು' ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಒಟ್ಟು 25 ಮಂದಿಗೆ ತಲಾ 1 ಲಕ್ಷ ರೂಪಾಯಿ ಹಣ ವಿತರಣೆ ಮಾಡಲಿದ್ದಾರೆ ನಿರ್ಮಾಪಕ ಸಾಜಿದ್ ಖುರೇಶಿ. ['ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು]

ನೀವೂ ಸಹಾಯ ಮಾಡಬಹುದು

ನೀವೂ ಸಹಾಯ ಮಾಡಬಹುದು

'ನಾಗರಹಾವು' ಚಿತ್ರತಂಡ ರೂಪಿಸಿರುವ 'ಸಿಂಹ ಹಸ್ತ' ಕಾರ್ಯಕ್ರಮದ ಅಡಿ ನೀವೂ ಕೂಡ ಬಡ ರೋಗಿಗಳಿಗೆ ನಿಮ್ಮ ಕೈಯಲ್ಲಾದ ಸಹಾಯ ಮಾಡಬಹುದು.

ಸಹಾಯ ಮಾಡುವುದು ಹೇಗೆ.?

ಸಹಾಯ ಮಾಡುವುದು ಹೇಗೆ.?

ನಿಮಗೆ ಸಹಾಯ ಮಾಡುವ ಮನಸ್ಸು ಇದ್ದರೆ, ಕೆಳಕಂಡ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ...

Account Name : SIMHA HASTHA (Current ACC)

Bank Name : DCB Bank

Account Number : 07121300000480

IFSC CODE : DCBL0000071

Branch Name : Rajaji Nagar, Bengaluru

Number - +91 8197269231

More from Filmibeat

English summary
Kannada Movie 'Nagarahavu' Producer Sajid Qureshi has decided to spend Rs 25 Lakhs on the Medical treatment of 25 Poor Patients in the name of 'Simha Hastha'. Among 25 Patients, 10 are introduced to the Press and Media on August 8th in a Press Meet held at Hotel Citadel, Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X