Don't Miss!
- News 'ಚೊಂಬು' ವಾಗ್ದಾದ: ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟಿದ್ದು ನೀವು: ಬಿಜೆಪಿ ತಿರುಗೇಟು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾವನ 'ಪ್ರೇಮ ಬರಹ'ಕ್ಕೆ ಶಾಕ್ ಕೊಟ್ಟ ಚಿರಂಜೀವಿ ಸರ್ಜಾ
Recommended Video
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅಭಿನಯದ 'ಪ್ರೇಮ ಬರಹ' ಸಿನಿಮಾದ ರಿಲೀಸ್ ದಿನಾಂಕ ಘೋಷಿಸಿದ್ದು, ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಫೆಬ್ರವರಿ 9 ರಂದು ಗಾಂಧಿನಗರದಲ್ಲಿ 'ಪ್ರೇಮ ಬರಹ' ಮೊಳಗಲಿದ್ದು, ಸರ್ಜಾ ಕುಟುಂಬದ ಕುಡಿಯನ್ನ ಕನ್ನಡಕ್ಕೆ ಸ್ವಾಗತಿಸಲು ಸ್ಯಾಂಡಲ್ ವುಡ್ ಸಜ್ಜಾಗಿದೆ.
ಇಷ್ಟು ದಿನ ಅರ್ಜುನ್ ಸರ್ಜಾ ಅವರ ಸೋದರಳಿಯರಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಇಬ್ಬರು 'ಪ್ರೇಮ ಬರಹ' ಚಿತ್ರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಆದ್ರೆ, ಈಗೊಂದು ಅಚ್ಚರಿಯ ಅಂಶ ಹೊರಬಿದ್ದಿದೆ.
ಹನುಮ ಗೀತೆ ಹಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸರ್ಜಾ ಫ್ಯಾಮಿಲಿ
ಅರ್ಜುನ್ ಸರ್ಜಾ ಪುತ್ರಿಯನ್ನ ಸ್ವಾಗತಿಸಲು ಸಜ್ಜಾಗುತ್ತಿದ್ದ ಚಿರು ಸರ್ಜಾ, ಈಗ ಸೋದರ ಮಾವನ ಎದುರು ಕಾಂಪಿಟೇಶನ್ ಮಾಡಬೇಕಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಇಬ್ಬರು ಕಿತ್ತಾಡಬೇಕಿದೆ. ಏನಿದು ಹೊಸ ವಿಷ್ಯ? ಮುಂದೆ ಓದಿ....
'ಪ್ರೇಮ ಬರಹ'ಕ್ಕೆ ಚಿರು ಶಾಕ್
ಫೆಬ್ರವರಿ 9 ರಂದು ಬಿಡುಗಡೆಯಾಗಲಿರುವ 'ಪ್ರೇಮ ಬರಹ' ಚಿತ್ರಕ್ಕೆ ನಟ ಚಿರಂಜೀವಿ ಸರ್ಜಾ ಶಾಕ್ ನೀಡಿದ್ದಾರೆ. ಸೋದರ ಮಾವನ ಚಿತ್ರದ ಎದುರು ತಮ್ಮ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದಾರೆ ಚಿರು ಸರ್ಜಾ.
ಅದೇ ದಿನ ಬರ್ತಿದೆ 'ಸಂಹಾರ'
ಐಶ್ವರ್ಯ ಅರ್ಜುನ್ ಸರ್ಜಾ ಅಭಿನಯದ ಚೊಚ್ಚಲ ಸಿನಿಮಾದ ಜೊತೆಯಲ್ಲೇ ಚಿರು ಸರ್ಜಾ ಅಭಿನಯದ 'ಸಂಹಾರ' ಸಿನಿಮಾ ರಿಲೀಸ್ ಆಗುತ್ತಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಮುಗಿಸಿರುವ 'ಸಂಹಾರ', ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.
'ಪ್ರೇಮ ಬರಹ'ಕ್ಕೆ ದರ್ಶನ್, ಅಂಬಿ ಬರಮಾಡಿಕೊಳ್ಳುವ ಆ ಸೆಲೆಬ್ರಿಟಿ ಯಾರು.?
ಸರ್ಜಾ ಕುಟುಂಬದ ಸಿನಿಮಾಗಳು
ಇದು ಕಾಂಪಿಟೇಶನ್ ಎನ್ನುವುದಕ್ಕಿಂತ ಚಿತ್ರಪ್ರೇಮಿಗಳಿಗೆ ಡಬಲ್ ಟ್ರೀಟ್ ಎನ್ನಬಹುದು. ಒಂದೇ ದಿನ, ಒಂದೇ ಕುಟುಂಬದ ಎರಡು ಚಿತ್ರಗಳು ತೆರೆ ಮೇಲೆ ನೋಡುವುದು ಅಭಿಮಾನಿಗಳಿಗೆ ಖುಷಿಯ ವಿಚಾರ.
'ಸಂಹಾರ' ಚಿತ್ರದ ಬಗ್ಗೆ
ಗುರುದೇಶಪಾಂಡೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಚಿತ್ರಕ್ಕೆ ನಾಯಕಿ. ರವಿ ಬಸ್ರೂರ್ ಅವರ ಸಂಗೀತ ಚಿತ್ರಕ್ಕಿದೆ. ವಿಶೇಷ ಪಾತ್ರದಲ್ಲಿ ಚಿಕ್ಕಣ್ಣ ಕೂಡ ಕಾಣಿಸಿಕೊಂಡಿದ್ದಾರೆ.