twitter
    For Quick Alerts
    ALLOW NOTIFICATIONS  
    For Daily Alerts

    8 ದಿನದಲ್ಲೇ ಅಮೇಜಾನ್‌ಗೆ ಬಂದ ಯುವರತ್ನ: ಅಪ್ಪು ಫ್ಯಾನ್ಸ್ ಬೇಸರ

    |

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿರುವ ಯುವರತ್ನ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾ ಭೀತಿಯ ನಡುವೆಯೂ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಸಿನಿಮಾ ಬಿಡುಗಡೆಯಾಗಿ ಕೇವಲ ಏಂಟು ದಿನಗಳು ಕಳೆದಿದೆ. ಅಷ್ಟರಲ್ಲೇ ಯುವರತ್ನ ಚಿತ್ರವನ್ನು ಅಮೇಜಾನ್ ಪ್ರೈಮ್ ಪ್ರಸಾರ ಮಾಡುವುದಾಗಿ ಪ್ರಕಟಿಸಿದೆ.

    ಕನ್ನಡ, ತೆಲುಗು ಜೊತೆಗೆ ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಯುವರತ್ನ ಚಿತ್ರವನ್ನು ಅಮೇಜಾನ್ ಪ್ರೈಮ್ ಏಪ್ರಿಲ್ 9 ರಂದ ಪ್ರಸಾರ ಮಾಡುತ್ತಿದೆ. ಚಿತ್ರಕ್ಕೆ ಒಳ್ಳೆಯ ಟಾಕ್ ಇದ್ದರೂ ಇಷ್ಟು ಬೇಗ ಒಟಿಟಿಯಲ್ಲಿ ಪ್ರಸಾರ ಮಾಡ್ತಿರುವುದಕ್ಕೆ ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

    ಇಷ್ಟು ಬೇಗ ಬೇಡ

    ಇಷ್ಟು ಬೇಗ ಬೇಡ

    ಅಮೇಜಾನ್ ಪ್ರೈಮ್‌ನಲ್ಲಿ ಯುವರತ್ನ ಪ್ರಸಾರದ ಸುದ್ದಿ ತಿಳಿಯುತ್ತಿದ್ದಂತೆ ಪುನೀತ್ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ''ರಾಜ್ಯಾದ್ಯಂತ ಒಳ್ಳೆಯ ಪ್ರದರ್ಶನ ಕಾಣ್ತಿದೆ. 50 ಪರ್ಸೆಂಟ್ ಜಾರಿಯಾಗಿದ್ದರೂ ಜನ ಸಿನಿಮಾ ನೋಡ್ತಾರೆ. 50 ದಿನ ಆದ್ಮೇಲೆ ಕೊಡಿ'' ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

    'ಕ್ಲಿಷ್ಟಕರ ಸನ್ನಿವೇಶ'ದ ಒತ್ತಡ: 'ಯುವರತ್ನ' ಸಿನಿಮಾ ಒಟಿಟಿಗೆ, ದಿನಾಂಕ ಪ್ರಕಟ'ಕ್ಲಿಷ್ಟಕರ ಸನ್ನಿವೇಶ'ದ ಒತ್ತಡ: 'ಯುವರತ್ನ' ಸಿನಿಮಾ ಒಟಿಟಿಗೆ, ದಿನಾಂಕ ಪ್ರಕಟ

    ಒಂದು ವಾರದಲ್ಲೇ ಅಗತ್ಯ ಏನಿತ್ತು?

    ಒಂದು ವಾರದಲ್ಲೇ ಅಗತ್ಯ ಏನಿತ್ತು?

    'ಸಿನಿಮಾ ರಿಲೀಸ್ ಆಗಿ ಎರಡು ವಾರ ಪೂರ್ಣಗೊಂಡಿಲ್ಲ. ಅಷ್ಟು ಬೇಗ ಒಟಿಟಿಯಲ್ಲಿ ಪ್ರಸಾರ ಮಾಡುವ ಅಗತ್ಯ ಏನಿತ್ತು' ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಏಪ್ರಿಲ್ 1 ರಂದು ಯುವರತ್ನ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿತ್ತು.

    ನಿಜಕ್ಕೂ ಬೇಸರ

    ನಿಜಕ್ಕೂ ಬೇಸರ

    'ಕೋವಿಡ್ ಕಾರಣದಿಂದ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದ್ದೇವೆ. ಹಾಗಾಗಿ ಯುವರತ್ನ ಚಿತ್ರವನ್ನು ಒಟಿಟಿಯಲ್ಲಿ ಇಷ್ಟು ಬೇಗ ಪ್ರಸಾರ ಮಾಡಲಾಗುತ್ತಿದೆ. ಜನರು ಕೂಡ ಥಿಯೇಟರ್‌ಗೆ ಬರೋಕೆ ಆಗ್ತಿಲ್ಲ, ಒಟಿಟಿಯಲ್ಲಿ ರಿಲೀಸ್ ಮಾಡಿ ಎಂದು ಮನವಿ ಮಾಡಿದ್ದಾರೆ, ಹಾಗಾಗಿ, ಇಷ್ಟು ಬೇಗ ಒಟಿಟಿಗೆ ಬರಬೇಕಾಯಿತು' ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ಪಷ್ಟನೆ ನೀಡಿದ್ದಾರೆ. ಆದರೂ ಚಿತ್ರತಂಡ ನಿರ್ಧಾರದಿಂದ ಕೆಲವು ಅಭಿಮಾನಿಗಳು ನಿರಾಸೆಯಾಗಿದ್ದಾರೆ.

    ಇದು ಸೂಕ್ತ ನಿರ್ಧಾರವಲ್ಲ

    ಇದು ಸೂಕ್ತ ನಿರ್ಧಾರವಲ್ಲ

    'ಪ್ರೇಕ್ಷಕರು ಚಿತ್ರವನ್ನು ಸಿನಿಮಾ ಹಾಲ್‌ನಲ್ಲಿ ನೋಡಿಯೇ ಎಂಜಾಯ್ ಮಾಡುತ್ತಿದ್ದಾರೆ. ಹೀಗಿರುವಾಗ ಒಟಿಟಿಯಲ್ಲಿ ಪ್ರಸಾರ ಮಾಡುವುದು ಸೂಕ್ತ ನಿರ್ಧಾರವಲ್ಲ' ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Recommended Video

    'ದುಬಾರಿ'ಗೆ ಬ್ರೇಕ್ ಹಾಕಿದ ಧ್ರುವ ಸರ್ಜಾ | Filmibeat Kannada
    ವಕೀಲ್ ಸಾಬ್ ರಿಲೀಸ್ ಏಕೆ?

    ವಕೀಲ್ ಸಾಬ್ ರಿಲೀಸ್ ಏಕೆ?

    ''ಕೋವಿಡ್ ಕ್ಲಿಷ್ಟಕರ ಪರಿಸ್ಥಿತಿ ಎಂದು ಹೇಳುವುದಾದರೇ ತೆಲುಗು ಸಿನಿಮಾ ವಕೀಲ್ ಸಾಬ್ ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿರುವುದೇಕೆ? ಆ ಚಿತ್ರವನ್ನು ಒಟಿಟಿಗೆ ಕೊಡಬಹುದಿತ್ತು ಅಲ್ಲವೇ. ಈ ಲಾಜಿಕ್ ಯುವರತ್ನ ಚಿತ್ರಕ್ಕೆ ಏಕೆ?'' ಎಂದು ನೆಟ್ಟಿಗನೊಬ್ಬ ಪ್ರಶ್ನಿಸಿದ್ದಾರೆ.

    English summary
    Puneeth Rajkumar Fans Unhappy About Yuvarathnaa team. Movie is premiering on Amazon Prime, April 9th - 8 days from theatrical release day.
    Friday, April 9, 2021, 9:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X