Don't Miss!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಕೆ ಇತರರ ಜೀವನದ ಜೊತೆ ಆಟವಾಡುತ್ತಿದ್ದೀರಾ: ರಾಗಿಣಿ ಪ್ರಶ್ನೆ
ಕೊರೊನಾ ಭೀತಿಯಿಂದ ಬೆಂಗಳೂರು ಬಿಟ್ಟು ಹಳ್ಳಿಗಳ ಕಡೆಗೆ ಹೊರಟಿರುವವರ ಮೇಲೆ ತುಪ್ಪದ ಹುಡುಗಿ ರಾಗಿಣಿ ಕೆಂಡ ಕಾರಿದ್ದಾರೆ.
ಕೊರೊನಾ ಪ್ರಕರಣಗಳು ಬೆಂಗಳೂರಿನಲ್ಲಿ ಸತತವಾಗಿ ಏರುತ್ತಿರುವ ಕಾರಣ ಹಲವರು ಬೆಂಗಳೂರು ತೊರೆದು ಹಳ್ಳಿಗಳಿಗೆ ವಾಪಸ್ ಹೋಗುತ್ತಿದ್ದಾರೆ.
ಇಂದು ಮಧ್ಯಾಹ್ವ ಯಡಿಯೂರಪ್ಪ ಅವರು, 'ಊರಿಗೆ ಹೋಗುವವರು, ಬೆಂಗಳೂರಿಗೆ ಬರುವವರಿಗೆ ಇಂದೇ ಕೊನೆಯ ದಿನ'' ಎಂದು ಹೇಳಿಕೆ ಕೊಟ್ಟ ಮೇಲಂತೂ ಸಾವಿರಾರು ಮಂದಿ ಏಕಾಏಕಿ ಬೆಂಗಳೂರು ತೊರೆಯುತ್ತಿದ್ದಾರೆ. ಇದರ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಅದರಲ್ಲಿ ನಟಿ ರಾಗಿಣಿ ದ್ವಿವೇದಿ ಸಹ ಒಬ್ಬರು.
ಯಾಕೆ ಊರು ಬಿಟ್ಟು ಹೋಗ್ತಿದ್ದೀರಾ: ರಾಗಿಣಿ ಪ್ರಶ್ನೆ
''ಯಾಕೆ ಊರು ಬಿಟ್ಟು ಹೋಗ್ತಿದ್ದೀರಾ? ಯಾಕೆ ಬಸ್ಸುಗಳಲ್ಲಿ, ಇತರೆ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಮಾಡುತ್ತಿದ್ದೀರಾ? ಯಾಕೆ ಬೇರೆಯವರ ಜೀವನದ ಜೊತೆ ಆಟವಾಡುತ್ತಿದ್ದೀರ? ಎಂದು ರಾಗಿಣಿ ಅಸಮಾಧಾನ ವ್ಯಕ್ತಪಡಿಸದ್ದಾರೆ.
ಸಾರ್ವಜನಿಕ ಸಾರಿಗೆ ಬಳಸುವುದು ಸರಿಯಲ್ಲ: ರಾಗಿಣಿ
ಕರ್ಪ್ಯೂ ಆಗಿರೋದು, ಲಾಕ್ ಡೌನ್ ಆಗಿರೋದು, ಸೋಷಿಯಲ್ ಡಿಸ್ಟೆನ್ಸಿಂಗ್ ಮಾಡಲು ಹೇಳಿರುವುದು ನಮ್ಮ ಒಳಿತಿಗೆ ಅದನ್ನು ಬಿಟ್ಟು ಹೊರಗೆ ಬಂದಿದ್ದಲ್ಲದೆ, ಒಟ್ಟಿಗೆ ಪ್ರಯಾಣ ಮಾಡುವುದು ಸರಿಯಲ್ಲ ಎಂದು ರಾಗಿಣಿ ಆಕ್ರೋಶ ಹೊರಹಾಕಿದ್ದಾರೆ.
ಹೊರಗೆ ಓಡೇಡಬೇಡಿ: ರಾಗಿಣಿ ಸಂದೇಶ
ಅಷ್ಟೆ ಅಲ್ಲದೆ, ಕರ್ಪ್ಯೂ ಆದೇಶವನ್ನು ಧಿಕ್ಕರಿಸಿ ಹೊರಗೆ ಓಡಾಡುತ್ತಿದ್ದಾರೆ. ಅವರ ಜೀವನನ್ನು ಮಾತ್ರವಲ್ಲದೆ ಇತರರ ಜೀವನದ ಜೊತೆಯೂ ಅವರು ಆಟವಾಡುತ್ತಿದ್ದಾರೆ ಎಂದು ರಾಗಿಣಿ ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸಿ: ರಾಗಿಣಿ
ದಯವಿಟ್ಟು ಯಾರೂ ಸಹ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣ ಮಾಡಬೇಡಿ, ಸರ್ಕಾರ ವಿಧಿಸಿರುವ ನಿಯಮಗಳನ್ನು ತಪ್ಪದೇ ಪಾಲಿಸಿ, ಯಾರೂ ಸಹ ಊರು ಬಿಟ್ಟು ಹೊರಗೆ ಹೋಗಬೇಡಿ ಎಂದು ರಾಗಿಣಿ ಮನವಿ ಮಾಡಿದ್ದಾರೆ.