Just In
Don't Miss!
- News
ಜನವರಿಯಲ್ಲಿ ವಿಧಾನ ಮಂಡಲ ಜಂಟಿ ಅಧಿವೇಶನ: ರಾಜ್ಯಪಾಲರಿಂದ ಭಾಷಣ
- Finance
ಭಾರತದ ಚಿಲ್ಲರೆ ಹಣದುಬ್ಬರ ಮೂರು ವರ್ಷದ ಗರಿಷ್ಠ ಮಟ್ಟ 5.54%
- Sports
ಪ್ರತಿಷ್ಠಿತ ಲಾ ಲಿಗಾ ಫುಟ್ಬಾಲ್ ಲೀಗ್ಗೆ ರೋಹಿತ್ ಶರ್ಮಾ ರಾಯಭಾರಿ!
- Automobiles
ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು
- Lifestyle
ಜ್ಯೋತಿಶಾಸ್ತ್ರದ ಪ್ರಕಾರ 2020ರಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಹೇಗಿರಲಿದೆ
- Technology
ಹಲವು ಇಮೇಲ್ ಗಳನ್ನು ಒಂದೇ ಇಮೇಲ್ ನಲ್ಲಿ ಸೇರಿಸಿ ಸೆಂಡ್ ಮಾಡಲು ಅವಕಾಶ ನೀಡುವ ಜಿಮೇಲ್
- Education
IBPS SO Admit Card 2019: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ ಪ್ರಕಟ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಭಾರತದ ಯಾವುದೇ ಸಿನಿಮಾಗೂ 'ಮದಕರಿ' ಕಮ್ಮಿ ಇರೋಲ್ಲ- ರಾಜೇಂದ್ರ ಸಿಂಗ್ ಬಾಬು
ಕನ್ನಡದ ಮತ್ತೊಂದು ಅದ್ದೂರಿ ಸಿನಿಮಾ 'ಗಂಡುಗಲಿ ವೀರ ಮದಕರಿ' ಚಿತ್ರದ ಮುಹೂರ್ತ ನಿನ್ನೆ (ಡಿಸೆಂಬರ್ 2) ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿನಿಮಾದ ಬಗ್ಗೆ ನಟ ದರ್ಶನ್ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿದ್ದಾರೆ.
ಸಿನಿಮಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ದರ್ಶನ್ ''ಈ ಪಾತ್ರಕ್ಕಾಗಿ ಹಲವು ದಿನಗಳಿಂದ ತಯಾರಿ ಮಾಡಿಕೊಳ್ಳುತ್ತಲೇ ಇದ್ದೇವೆ'' ಎಂದಿದ್ದಾರೆ.
'ಮದಕರಿ ನಾಯಕ' ಚಿತ್ರದುರ್ಗದಲ್ಲಿ ಮುಹೂರ್ತ, ಬೆಂಗಳೂರಿನಲ್ಲಿ ಅಧಿಕೃತ ಲಾಂಚ್ ಕಾರ್ಯಕ್ರಮ
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ''ಮದಕರಿ ನಾಯಕರ ಬಗ್ಗೆ ಸಿನಿಮಾ ಮಾಡಲು ತುಂಬ ಜನ ಪ್ರಯತ್ನ ಪಟ್ಟರು ಆದರೆ ಆಗಿರಲಿಲ್ಲ. ಈಗ ಅದು ಸಾಧ್ಯ ಆಗುತ್ತಿದೆ. ಈ ಸಿನಿಮಾವನ್ನು ದರ್ಶನ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರೇ ಮಾಡಬೇಕು ಅಂತ ಇತ್ತೇನೋ'' ಎಂದರು.
ರಾಕ್ ಲೈನ್ ವೆಂಕಟೇಶ್ ಹೆಸರಿನಲ್ಲಿಯೇ 'ರಾಕ್' ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿಯೇ 'ಚಾಲೆಂಜ್' ಇದೆ. ಈ ಇಬ್ಬರು ಇರುವುದು ನೂರು ಆನೆ ಬಲ ಇದ್ದಂತೆ. ನಮ್ಮ ಸಿನಿಮಾ ಭಾರತದ ಯಾವ ಸಿನಿಮಾಗೂ ಕಡಿಮೆ ಇರುವುದಿಲ್ಲ. ಕನ್ನಡ ಬಾವುಟ ಭಾರತದ ತುಂಬ ಹಾರಿಸುತ್ತೇವೆ. ಅಂತಹ ಸಿನಿಮಾ ಮಾಡುವುದು ನಮ್ಮ ಕೆಲಸ ''ಎಂದು ಸಿನಿಮಾದ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹೀಗೊಂದು ಗಾಸಿಪ್: ನಿಜವಾದರೆ ಖುಷಿ ಪಡ್ತೀರಾ.?
ಸದ್ಯ ಚಿತ್ರದುರ್ಗದಲ್ಲಿ ಸಿನಿಮಾದ ಪೂಜೆ ನಡೆದಿದೆ. ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಸಿನಿಮಾ ಲಾಂಚ್ ಆಗಲಿದೆ.