twitter
    For Quick Alerts
    ALLOW NOTIFICATIONS  
    For Daily Alerts

    ಭಾರತದ ಯಾವುದೇ ಸಿನಿಮಾಗೂ 'ಮದಕರಿ' ಕಮ್ಮಿ ಇರೋಲ್ಲ- ರಾಜೇಂದ್ರ ಸಿಂಗ್ ಬಾಬು

    |

    ಕನ್ನಡದ ಮತ್ತೊಂದು ಅದ್ದೂರಿ ಸಿನಿಮಾ 'ಗಂಡುಗಲಿ ವೀರ ಮದಕರಿ' ಚಿತ್ರದ ಮುಹೂರ್ತ ನಿನ್ನೆ (ಡಿಸೆಂಬರ್ 2) ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿನಿಮಾದ ಬಗ್ಗೆ ನಟ ದರ್ಶನ್ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿದ್ದಾರೆ.

    ಸಿನಿಮಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ದರ್ಶನ್ ''ಈ ಪಾತ್ರಕ್ಕಾಗಿ ಹಲವು ದಿನಗಳಿಂದ ತಯಾರಿ ಮಾಡಿಕೊಳ್ಳುತ್ತಲೇ ಇದ್ದೇವೆ'' ಎಂದಿದ್ದಾರೆ.

    'ಮದಕರಿ ನಾಯಕ' ಚಿತ್ರದುರ್ಗದಲ್ಲಿ ಮುಹೂರ್ತ, ಬೆಂಗಳೂರಿನಲ್ಲಿ ಅಧಿಕೃತ ಲಾಂಚ್ ಕಾರ್ಯಕ್ರಮ'ಮದಕರಿ ನಾಯಕ' ಚಿತ್ರದುರ್ಗದಲ್ಲಿ ಮುಹೂರ್ತ, ಬೆಂಗಳೂರಿನಲ್ಲಿ ಅಧಿಕೃತ ಲಾಂಚ್ ಕಾರ್ಯಕ್ರಮ

    ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ''ಮದಕರಿ ನಾಯಕರ ಬಗ್ಗೆ ಸಿನಿಮಾ ಮಾಡಲು ತುಂಬ ಜನ ಪ್ರಯತ್ನ ಪಟ್ಟರು ಆದರೆ ಆಗಿರಲಿಲ್ಲ. ಈಗ ಅದು ಸಾಧ್ಯ ಆಗುತ್ತಿದೆ. ಈ ಸಿನಿಮಾವನ್ನು ದರ್ಶನ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರೇ ಮಾಡಬೇಕು ಅಂತ ಇತ್ತೇನೋ'' ಎಂದರು.

    Rajendra Singh Babu Spoke About Gandugali Madakari Nayaka Movie

    ರಾಕ್ ಲೈನ್ ವೆಂಕಟೇಶ್ ಹೆಸರಿನಲ್ಲಿಯೇ 'ರಾಕ್' ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿಯೇ 'ಚಾಲೆಂಜ್' ಇದೆ. ಈ ಇಬ್ಬರು ಇರುವುದು ನೂರು ಆನೆ ಬಲ ಇದ್ದಂತೆ. ನಮ್ಮ ಸಿನಿಮಾ ಭಾರತದ ಯಾವ ಸಿನಿಮಾಗೂ ಕಡಿಮೆ ಇರುವುದಿಲ್ಲ. ಕನ್ನಡ ಬಾವುಟ ಭಾರತದ ತುಂಬ ಹಾರಿಸುತ್ತೇವೆ. ಅಂತಹ ಸಿನಿಮಾ ಮಾಡುವುದು ನಮ್ಮ ಕೆಲಸ ''ಎಂದು ಸಿನಿಮಾದ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹೀಗೊಂದು ಗಾಸಿಪ್: ನಿಜವಾದರೆ ಖುಷಿ ಪಡ್ತೀರಾ.?ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹೀಗೊಂದು ಗಾಸಿಪ್: ನಿಜವಾದರೆ ಖುಷಿ ಪಡ್ತೀರಾ.?

    ಸದ್ಯ ಚಿತ್ರದುರ್ಗದಲ್ಲಿ ಸಿನಿಮಾದ ಪೂಜೆ ನಡೆದಿದೆ. ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಸಿನಿಮಾ ಲಾಂಚ್ ಆಗಲಿದೆ.

    English summary
    Director Rajendra Singh Babu spoke about Gandugali Madakari Nayaka Movie.
    Tuesday, December 3, 2019, 10:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X