twitter
    For Quick Alerts
    ALLOW NOTIFICATIONS  
    For Daily Alerts

    ಎರಡು ದಶಕಗಳ ನಂತ್ರ ಒಂದಾದ 'ನಮ್ಮೂರ ಮಂದಾರ..' ಜೋಡಿ

    By Harshitha
    |

    'ಸಕಲಕಲಾವಲ್ಲಭ' ಕಮಲ್ ಹಾಸನ್ ಅಭಿನಯದ 'ಉತ್ತಮ ವಿಲನ್' ರಿಲೀಸ್ ಆಗಿದ್ದೂ ಆಯ್ತು. ಕಾಲಿವುಡ್ ಅಂಗಳದಲ್ಲಿ ಭರ್ಜರಿ ಸೌಂಡ್ ಮಾಡಿದ್ದೂ ಆಯ್ತು. ಆದ್ರೆ, 'ಉತ್ತಮ ವಿಲನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ರಮೇಶ್ ಅರವಿಂದ್ ಈಗೇನ್ಮಾಡ್ತಿದ್ದಾರೆ?

    ಈ ಪ್ರಶ್ನೆಗೆ ಗಾಂಧಿನಗರದಲ್ಲಿ ಉತ್ತರ ಸಿಕ್ಕಿದೆ. ನಟ ರಮೇಶ್ ಅರವಿಂದ್ ಮತ್ತೆ ಬಣ್ಣ ಹಚ್ಚುವ ಮನಸ್ಸು ಮಾಡಿದ್ದಾರೆ. ಅದು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರಕ್ಕಾಗಿ ಅನ್ನೋದು ಇಂಟ್ರೆಸ್ಟಿಂಗ್ ವಿಷಯ. [ಕಮಲ್ ಹಾಸನ್ ಅಭಿನಯದ ಉತ್ತಮ ವಿಲನ್ ಚಿತ್ರವಿಮರ್ಶೆ]

    Ramesh Aravind and Sunil Kumar Desai pairs up after two decades

    ಹೌದು, ಬರೋಬ್ಬರಿ ಎರಡು ದಶಕಗಳ ನಂತರ ರಮೇಶ್ ಅರವಿಂದ್ ಮತ್ತು ಸುನೀಲ್ ಕುಮಾರ್ ದೇಸಾಯಿ ಒಟ್ಟಾಗಿದ್ದಾರೆ. 'ನಮ್ಮೂರ ಮಂದಾರ ಹೂವೆ' ಚಿತ್ರದ ನಂತರ ಈ ಎರಡು ಅದ್ಭುತಗಳು ಮತ್ತೆ ಒಂದಾಗುತ್ತಿರುವುದು ಸಖತ್ ಸ್ಪೆಷಲ್.

    ಈಗಾಗಲೇ ಚಿತ್ರಕಥೆ ರೆಡಿ ಮಾಡಿಕೊಂಡಿರುವ ಸುನೀಲ್ ಕುಮಾರ್ ದೇಸಾಯಿ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಮಾಡಿಲ್ಲ. ಹಾಗೇ, ರಮೇಶ್ ಅರವಿಂದ್ ಅವರೊಬ್ಬರನ್ನ ಬಿಟ್ಟರೆ ಬಾಕಿ ತಾರಾಗಣದ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ. [ದೇಸಾಯಿ ಹೊಸ ಚಿತ್ರಕ್ಕೆ ಅನಂತ್, ಕೋಮಲ್ ಕಿಕ್]

    ಹಾಗ್ನೋಡಿದ್ರೆ, ನಟ ರಮೇಶ್ ಅರವಿಂದ್ ಸಿನಿಮಾಗಾಗಿ ಬಣ್ಣ ಹಚ್ಚಿ ಎರಡು ವರ್ಷಗಳಾಗಿವೆ. ಲಾಂಗ್ ಗ್ಯಾಪ್ ನಂತರ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ಮತ್ತು ರಮೇಶ್ ಅರವಿಂದ್ ಅವರ ಕಾಂಬಿನೇಷನ್ ನ ಈ ಚಿತ್ರದ ಹೆಚ್ಚನ ಮಾಹಿತಿಗೆ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

    English summary
    Kannada Actor Ramesh Aravind has given a nod to yet-to-be-titled film directed by Sunil Kumar Desai. There by the duo is paring up after almost two decades.
    Saturday, July 18, 2015, 17:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X