Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆದಿತ್ಯ-ರವಿ ಶ್ರೀವತ್ಸರಿಂದ 'ಡೆಡ್ಲಿ'ಯಲ್ಲದ ಸಿನಿಮಾ
ಹಾಗೆ ನೋಡಿದರೆ, ಆದಿತ್ಯ ಹಾಗೂ ರವಿ ಶ್ರೀವತ್ಸ ಜೋಡಿ ಸ್ಯಾಂಡಲ್ ವುಡ್ ನಲ್ಲಿ ಪ್ರಸಿದ್ಧವಾಗಿದ್ದೇ ಈ ಡೆಡ್ಲಿ ಸೋಮನ ಚಿತ್ರಗಳಿಂದ. ನಟ ಆದಿತ್ಯನ ಹೆಸರು ಕೇಳಿದರಂತೂ ಥಟ್ಟನೆ ನೆನಪಾಗುವುದು ಡೆಡ್ಲಿ ಸೋಮ ಎಂಬ ಚಿತ್ರಗಳೇ ಆಗಿವೆ. ಆ ಮಟ್ಟಿಗೆ ಇಬ್ಬರೂ ಡೆಡ್ಲಿ ಖ್ಯಾತಿಯನ್ನೇ ಹೊಂದಿದವರು, ನಂಬಿದವರು.
ಆದರೆ ಮುಂದೆ ಮಾಡಲಿರುವ ಚಿತ್ರ ಮಾತ್ರ ಭೂಗತ ಲೋಕವನ್ನು ಪ್ರತಿನಿಧಿಸುತ್ತಿಲ್ಲವಂತೆ. ಈ ಕುರಿತು ಸ್ಪಷ್ಟ ಅಭಿಪ್ರಾಯ ನಿರ್ದೇಶಕ ರವಿ ಶ್ರೀವತ್ಸ ಅವರಿಂದ ಬಂದಿದೆ. "ನಾನು ಮಾಡಲಿರುವ ಚಿತ್ರ ಭೂಗತ ಲೋಕದ ಕಥೆ ಹೊಂದಿಲ್ಲ. ಬದಲಿಗೆ ರೊಮಾನ್ಸ್, ಕಾಮಿಡಿ ಅದರಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.
ಆದರೆ ಇದರಲ್ಲಿ ಸಾಹಸ ದೃಶ್ಯಗಳೇ ಇಲ್ಲವೆಂದಲ್ಲ. ಇದ್ದೇ ಇರುತ್ತವೆ. ಆದರೆ ಮಚ್ಚು-ಲಾಂಗುಗಳು ಇರುವುದಿಲ್ಲ, ಇದು ಹೊಡಿ-ಬಡಿ ಚಿತ್ರವಲ್ಲ" ಎಂದಿದ್ದಾರೆ ರವಿ ಶ್ರೀವತ್ಸ. ಇನ್ನೂ ಹೆಸರಿಡದ ಈ ಚಿತ್ರವನ್ನು ನಿರ್ಮಿಸಲು ರಾಜಶೇಖರ್ ಮುಂದಾಗಿದ್ದಾರೆ. ನಾಯಕಿ ಹಾಗೂ ಇತರ ತಾರಾಗಣದ ಆಯ್ಕೆ ಇನ್ನಷ್ಟೇ ಆಗಬೇಕಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕತ್ವದ 'ದಶಮುಖ' ಸೋತ ಮೇಲೆ ರವಿ ಶ್ರೀವತ್ಸರಿಂದ ಬರಲಿದೆ ಈ ಚಿತ್ರ. ಹಾಗೇ, 'ವಿಲನ್' ಸೋಲಿನಿಂದ ಇನ್ನೂ ಚೇತರಿಸಿಕೊಂಡಿರದ ಆದಿತ್ಯ ಸದ್ಯ 'ರಾಸ್ಕಲ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ಇಬ್ಬರೂ ಸೇರಿ ಮುಂದೆ ಹೊಸತನದ ಚಿತ್ರ ಮಾಡಲು ಮುಂದಾಗಿದ್ದಾರೆ. ಇಬ್ಬರೂ ಸೇರಿ ಅಕ್ಟೋಬರ್ ಹೊತ್ತಿಗೆ ಈ ಚಿತ್ರವನ್ನು ಪ್ರಾರಂಭಿಸಲಿದ್ದಾರೆ. (ಒನ್ ಇಂಡಿಯಾ ಕನ್ನಡ)