Don't Miss!
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಠಾರಿವೀರ' ಉಪೇಂದ್ರ ವಿಶೇಷ ಸಂದರ್ಶನ
ಪ್ರ.
ಉಪೇಂದ್ರ
ಸ್ಯಾಂಡಲ್
ವುಡ್
ನಲ್ಲಿ
ಟ್ರೆಂಡ್
ಸೆಟ್ಟರ್
ಎನ್ನುವ
ಮಾತಿದೆ,
3ಡಿ
ತಂತ್ರಜ್ಞಾನದ
ಈ
ಚಿತ್ರದ
ಮೂಲಕ
ಕನ್ನಡ
ಚಿತ್ರರಂಗದಲ್ಲಿ
ಹೊಸ
ಇತಿಹಾಸ
ಬರೆಯಲು
ಹೊರಟಿದ್ದೀರಿ.
ಈ
3ಡಿ
ಚಿತ್ರದ
ಕಾನ್ಸೆಪ್ಟ್
ಹೇಗೆ
ಬಂತು?
ಉಪ್ಪಿ:
ಮೊದಲು
3ಡಿ
ಕಾನ್ಸೆಪ್ಟ್
ಬಗ್ಗೆ
ಐಡಿಯಾ
ಇರಲಿಲ್ಲ.
ಹೈದರಾಬಾದ್
ನಲ್ಲಿರುವ
ರಾಮೋಜಿ
ಫಿಲಂ
ಸಿಟಿಯ
ಅದ್ದೂರಿ
ಸೆಟ್
ಈ
ಬಗ್ಗೆ
ಆಲೋಚಿಸುವಂತೆ
ಮಾಡಿತು.
3ಡಿ
ಬಗ್ಗೆ
ನಮಗೆ
ಮೊದಲು
ಐಡಿಯಾ
ಕೊಟ್ಟಿದ್ದು
ಕ್ಯಾಮಾರಮನ್
ವೇಣು.
ವೇಣು
ಅವರ
ಸಲಹೆಗೆ
ನಿರ್ಮಾಪಕ
ಮುನಿರತ್ನ
ಮತ್ತು
ನಿರ್ದೇಶಕ
ಸುರೇಶ
ಕೃಷ್ಣ
ಸಕಾರಾತ್ಮಕವಾಗಿ
ಸ್ಪಂದಿಸಿದರು.
ಪ್ರ:
3ಡಿ,
ಅತ್ಯಾಧುನಿಕ
ಗ್ರಾಫಿಕ್ಸ್
ಬಗ್ಗೆ
ದಕ್ಷಿಣ
ಭಾರತ
ಚಿತ್ರರಂಗ
ಇತ್ತೀಚಿನ
ದಿನಗಳಲ್ಲಿ
ಹೆಚ್ಚು
ಗಮನ
ಹರಿಸುತ್ತಿದೆ.
ಈ
ಬಗ್ಗೆ
ನಿಮ್ಮ
ಅಭಿಪ್ರಾಯ?
ಉಪ್ಪಿ:
ಜನ
ಚೇಂಜ್
ಕೇಳ್ತಾ
ಇದ್ದಾರೆ.
3ಡಿ
ತಂತ್ರಜ್ಞಾನದ
ಮೇಲೆ
ಕೆಲಸ
ಮಾಡುವುದು
ಬಹಳ
ಕಷ್ಟ.
ಥಿಯೇಟರ್
ಗಳಲ್ಲಿ
3ಡಿ
ಪ್ರದರ್ಶಿಸುವ
ಸೌಕರ್ಯ
ಇರಬೇಕು.
ಕೆಲ
ಸಿನಿಮಾ
ಮಂದಿರಗಳಿಗೆ
ಈ
ತಂತ್ರಜ್ಞಾನ
ಅಳವಡಿಸಿಕೊಳ್ಳಲು
ನಿರ್ಮಾಪಕ
ಮುನಿರತ್ನ
ತಮ್ಮ
ಜೇಬಿನಿಂದ
ಹಣ
ನೀಡಿ
ಸಹಾಯ
ಮಾಡಿದ್ದಾರೆ.
ಪ್ರ:
ಕಠಾರಿವೀರ
ಚಿತ್ರದ
ಪ್ರೋಮೋ
ನೋಡಿದರೆ
ಇದು
ಮತ್ತೊಂದು
ಹಾಸ್ಯ
ಪ್ರಧಾನ
ಚಿತ್ರ
ಎಂದೆನಿಸುತ್ತದೆ.
ಇದನ್ನು
ರಕ್ತ
ಕಣ್ಣೀರು
ಚಿತ್ರದ
ಮುಂದುವರಿದ
ಭಾಗ
ಎನ್ನಬಹುದೇ?
ಉಪ್ಪಿ:
ರಕ್ತ
ಕಣ್ಣೀರು
ಚಿತ್ರದಷ್ಟು
ಈ
ಚಿತ್ರ
ಗಂಭೀರವಾಗಿಲ್ಲ.
ಇದೊಂದು
ಕಾಮಿಡಿ
ಚಿತ್ರ
ಅನ್ನೋಕೆ
ಅಡ್ಡಿಯಿಲ್ಲ.
ಕ್ಲೈಮ್ಯಾಕ್ಸ್
ನಲ್ಲಿ
ಒಂದು
ಸಂದೇಶ
ನೀಡಿದ್ದೇವೆ.
ಪ್ರ:
ಕಠಾರಿವೀರ
ಚಿತ್ರದಲ್ಲಿ
ನಿಮ್ಮ
ಪಾತ್ರದ
ಬಗ್ಗೆ?
ಉಪ್ಪಿ:
ದ್ವಿಪಾತ್ರದಲ್ಲಿ
ಕಾಣಿಸುತ್ತಿದ್ದೇನೆ.
ರಕ್ತ
ಕಣ್ಣೀರು
ಚಿತ್ರದಲ್ಲಿ
ದುರಂತ
ಪಾತ್ರದಲ್ಲಿ
ಸಾಯುವ
ಮೋಹನ್
ಮತ್ತು
ಅವನ
ಮಗನ
ಪಾತ್ರದಲ್ಲಿ.
ನರಕದಲ್ಲಿ
ಇಬ್ಬರೂ
ಮುಖಾಮುಖಿಯಾಗುತ್ತಾರೆ.
ಪ್ರ:
ಉಪೇಂದ್ರ
ಅವರ
ಚಿತ್ರವೆಂದರೆ
ಹೆಚ್ಚಾಗಿ
ಡೈಲಾಗ್
ಪ್ರಧಾನ
ಚಿತ್ರ.
ನಿಮ್ಮ
ಇಮೇಜ್
ಗೆ
ತಕ್ಕಂತೆ
ಚಿತ್ರಕಥೆ
ರೂಪಿಸಲಾಗಿದೆಯೇ?
ಉಪ್ಪಿ:
ಎಸ್.
ಚಿತ್ರದಲ್ಲಿ
ಡೈಲಾಗ್
ಜೀವಾಳ.
ಅಭಿಮಾನಿಗಳು
ಇದನ್ನು
ಇಷ್ಟ
ಪಡುತ್ತಾರೆ
ಎನ್ನುವ
ನಂಬಿಕೆಯಲ್ಲಿದ್ದೇನೆ.
ಪ್ರ:
ಗೌರಮ್ಮ
ಚಿತ್ರದ
ನಂತರ
ರಮ್ಯಾ
ಜೊತೆ
ಇದು
ನಿಮ್ಮ
ಎರಡನೇ
ಚಿತ್ರ.
ರಮ್ಯಾ
ಬಗ್ಗೆ
ಸ್ವಲ್ಪ
ಹೇಳಿ.
ಉಪ್ಪಿ:
ಈ
ಚಿತ್ರದಲ್ಲಿ
ರಮ್ಯಾ
ಬಹಳ
ಸುಂದರವಾಗಿ
ಕಾಣಿಸಿದ್ದಾರೆ.
ಅವರೊಬ್ಬರು
ಪ್ರತಿಭಾನ್ವಿತ
ನಟಿ.
ಪ್ರ:
ಅಂಬರೀಷ್
ಮತ್ತು
ದೊಡ್ಡಣ್ಣ
ಬಗ್ಗೆ?
ಉಪ್ಪಿ:
ಅವರ
ಬಗ್ಗೆ
ಮಾತನಾಡುವಷ್ಟು
ದೊಡ್ಡವನಲ್ಲ.
ಯಮಧರ್ಮ
ಮತ್ತು
ಚಿತ್ರಗುಪ್ತನ
ಪಾತ್ರದಲ್ಲಿ
ನಟಿಸಿದ್ದಾರೆ.
ಎರಡೂ
ಪಾತ್ರ
ಇಬ್ಬರಿಗೂ
ಚೆನ್ನಾಗಿ
ಒಗ್ಗುತ್ತೆ.
ಪ್ರ:
ಮುತ್ತಪ್ಪ
ರೈ
ರೋಲ್
ಬಗ್ಗೆ?
ಉಪ್ಪಿ:
ಅತಿಥಿ
ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ.
ಈ
ಬಗ್ಗೆ
ಹೆಚ್ಚಿಗೆ
ತಿಳಿಯಬೇಕಿದ್ದರೆ
ಚಿತ್ರ
ನೋಡಿ.
ಪ್ರ:
ನಿರ್ದೇಶಕರ
ಬಗ್ಗೆ
ಮತ್ತು
ನಿರ್ದೇಶನದಲ್ಲಿ
ಕೈಯಾಡಿಸಿದ್ದೀರಾ?
ಉಪ್ಪಿ:
ಸುರೇಶ್
ಕೃಷ್ಣ
ಗ್ರೇಟ್
ಡೈರೆಕ್ಟರ್.
ಅವರು,
ಜನಾರ್ಧನ
ಮಹರ್ಷಿ
ಮತ್ತು
ಮುನಿರತ್ನ
ಡೈಲಾಗ್,
ಚಿತ್ರಕಥೆ
ಹಣೆದಿದ್ದಾರೆ.
ನಾನು
ಕೆಲವೊಂದು
ಸಲಹೆ
ನೀಡಿದ್ದೇನೆ.
ಪ್ರ:
ಕೊನೆಯದಾಗಿ
ಕನ್ನಡಿಗರಿಗೆ
ಮತ್ತು
ನಿಮ್ಮ
ಅಭಿಮಾನಿಗಳಿಗೆ
ಏನು
ಹೇಳಲು
ಬಯಸುತ್ತೀರಿ?
ಉಪ್ಪಿ:
ಕನ್ನಡದಲ್ಲಿ
ಇದೊಂದು
ವಿನೂತನ
ಪ್ರಯೋಗ.
ನಿಮಗೆ
ಚಿತ್ರ
ಎಲ್ಲೂ
ಬೋರ್
ಹೊಡೆಯೋಲ್ಲಾ.
ಚಿತ್ರಮಂದಿರಕ್ಕೆ
ಕುಟುಂಬ
ಸಮೇತ
ಬಂದು
ಸಿನಿಮಾ
ನೋಡಿ.
ನಿಮ್ಮ
ಪ್ರೀತಿ,
ಅಭಿಮಾನವೇ
ನಮಗೆ
ಶ್ರೀರಕ್ಷೆ.
ಕನ್ನಡ
ಚಿತ್ರವನ್ನು
ಮತ್ತು
ಚಿತ್ರರಂಗವನ್ನು
ಬೆಳೆಸಿ..
ಪ್ರ:
ಕಠಾರಿವೀರ
ಚಿತ್ರಕ್ಕೆ
ಒಳ್ಳೆದಾಗಲಿ.
ಆಲ್
ದಿ
ಬೆಸ್ಟ್..
ಉಪ್ಪಿ:
ಥ್ಯಾಂಕ್ಸ್