Just In
Don't Miss!
- News
ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಶಿಕ್ಷೆ ಇಂದಿಗೆ ಅಂತ್ಯ, ಆಸ್ಪತ್ರೆಯಿಂದಲೇ ಬಿಡುಗಡೆ ಸಾಧ್ಯತೆ
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬೆಟ್ಟದ ಹುಲಿ' ಖ್ಯಾತಿಯ ಕೆ ಜಾನಕಿರಾಮ್ ವಿಧಿವಶ
ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಬದಲಾಗಿದ್ದ ಹಿರಿಯ ಛಾಯಾಗ್ರಾಹಕ ಕೆ.ಜಾನಕಿರಾಮ್ ಅವರು ಹೈದರಾಬಾದಿನಲ್ಲಿ ಬುಧವಾರ (ಡಿಸೆಂಬರ್ 10) ನಿಧನಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಳೆದ ಕೆಲದಿನಗಳಿಂದ ಅವರು ಕೋಮಾ ಸ್ಥಿತಿಗೆ ತಲುಪಿದ್ದರು.
'ಒಲವೇ ಮಂದಾರ' ಖ್ಯಾತಿಯ ಶ್ರೀಕಿ ಮುಖ್ಯಭೂಮಿಕೆಯಲ್ಲಿದ್ದ 'ಸೆಂಟ್ರಲ್ ಜೈಲ್' ಚಿತ್ರ ಜಾನಕಿರಾಮ್ ನಿರ್ಮಾಣದ ಕೊನೆಯ ಕನ್ನಡ ಚಿತ್ರ. ಎಂಬತ್ತರ ದಶಕದಲ್ಲಿ ಜಾನಕಿರಾಮ್ ಅವರು ಜನಪ್ರಿಯ ಛಾಯಾಗ್ರಾಹಕರಾಗಿ ಗುರುತಿಸಿಕೊಂಡವರು.
ಭಕ್ತ ವಿಜಯ, ಶುಕ್ರದೆಸೆ, ಮಹಾತ್ಮ ಕಬೀರ್, ಕಲಿತರು ಹೆಣ್ಣೆ, ಸರ್ವಜ್ಞ ಮೂರ್ತಿ, ಬೆಟ್ಟದ ಹುಲಿ, ನಾಗಪೂಜ, ಬೆರೆತರೆ ಜೀವ, ಲಗ್ನಪತ್ರಿಕೆ, ಮಂಕುದಿಣ್ಣೆ, ಗಾಂಧಿನಗರ, ಭಾಗ್ಯದ ಬಾಗಿಲು, ಎರಡು ಮುಖ, ಸುವರ್ಣ ಭೂಮಿ, ಪುಣ್ಯ ಪುರುಷ, ಠಕ್ಕ ಬಿಟ್ರೆ ಸಿಕ್ಕ, ಸಂಶಯ ಫಲ, ಕಾಸಿದ್ರೆ ಕೈಲಾಸ, ಒಂದೇ ರೂಪ ಎರಡು ಗುಣ ಚಿತ್ರಗಳು ಜಾನಕಿರಾಮ್ ಅವರು ಕ್ಯಾಮೆರಾ ಹಿಡಿದಂತಹವು.
ಜಾನಕಿರಾಮ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. 2012ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಂಡು ಬರುತ್ತಿರುವ 'ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಿ ಜಾನಕಿರಾಮ್ ಅವರು ಭಾಗಿಯಾದ್ದರು.
ಅಂದಿನ ದಿನಗಳನ್ನು ಮೆಲುಕು ಹಾಕಿದ್ದ ಅವರು, "ನಮ್ಮ ಕಾಲದಲ್ಲಿ ಕ್ಯಾಮೆರಾಮೆನ್ ಗೆ ಕೇವಲ ಒಬ್ಬರೇ ಒಬ್ಬ ಸಹಾಯಕರಿರುತ್ತಿದ್ದರು. ಈಗ ಛಾಯಾಗ್ರಾಹಕರಿಗೆ ಏನಿಲ್ಲ ಎಂದರೂ ಆರು ಮಂದಿ ಸಹಾಯಕರಿರುತ್ತಾರೆ. ಈಗ ಪ್ರತಿಯೊಬ್ಬರೂ ಹಣಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ" ಎಂದು ತಮ್ಮ ಆವೇದನೆ ವ್ಯಕ್ತಪಡಿಸಿದ್ದರು.
ವರನಟ ಡಾ.ರಾಜ್ ಕುಮಾರ್ ನಾಯಕ ನಟರಾಗಿದ್ದ ಲಗ್ನಪತ್ರಿಕೆ ಚಿತ್ರವನ್ನು ನಿರ್ದೇಶಿಸಿದ್ದರು ಜಾನಕಿರಾಮ್. ಇದೇ ಕಥೆಯನ್ನು ಇಂದಿನ ಕಾಲಮಾನಕ್ಕೆ ಕೊಂಚ ಬದಲಾಯಿಸಿಕೊಂಡು ಮಾಡರ್ನ್ ಲಗ್ನಪತ್ರಿಕೆ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿದ್ದರು. ಆದರೆ ಅವರ ಕನಸು ನನಸಾಗಿಯೇ ಉಳಿಯಿತು.
ಜಾನಕಿರಾಮ್ ಅವರು ಮದುವೆಯಾಗದೆ ಏಕಾಂಗಿಯಾಗಿಯೇ ತಮ್ಮ ಜೀವನವನ್ನು ಕಳೆದರು. ತಮ್ಮ ಮದುವೆ ಬಗ್ಗೆ ಅವರು ಒಮ್ಮೆ ಹೀಗೆ ಹೇಳಿದ್ದರು, ತಾನು ಮದುವೆಯಾಗಬೇಕೆಂದಿದ್ದ ಹುಡುಗಿಯ ತಂದೆ ರು.10 ಸಾವಿರ ಠೇವಣಿ ಇಡುವಂತೆ ಹೇಳಿದ್ದರು. ಆದರೆ ತಮ್ಮ ಬಳಿ ಅಷ್ಟು ಹಣವಿರಲಿಲ್ಲ. ಹಾಗಾಗಿ ತಮ್ಮ ಮದುವೆ ಅಲ್ಲಿಗೆ ನಿಂತುಹೋಯಿತು ಎಂದಿದ್ದರು. (ಫಿಲ್ಮಿಬೀಟ್ ಕನ್ನಡ)