ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಹಬ್ಬಿದ ಗಾಸಿಪ್ ಸುಳ್ಳು!

By Harshitha

ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಇತ್ತೀಚೆಗೆ ಗಾಂಧಿನಗರದಲ್ಲಿ ಅಂತೆ-ಕಂತೆ ಪುರಾಣಗಳು ಜಾಸ್ತಿ ಆಗಿವೆ. ಒಮ್ಮೆ ಅವರು ಬ್ರೇಕ್ ಅಪ್ ಆಗಿದ್ದಾರೆ ಅಂತ ಗುಲ್ಲೆದ್ದರೆ, ಇನ್ನೊಮ್ಮೆ ಸಿನಿಮಾ ರಂಗದಿಂದ ರಾಧಿಕಾ ಬ್ರೇಕ್ ಪಡೆದಿದ್ದಾರೆ ಅಂತ ಸುದ್ದಿ ಹಬ್ಬಿತ್ತು.

ಯಾವುದಕ್ಕೂ ನಟಿ ರಾಧಿಕಾ ಕುಮಾರಸ್ವಾಮಿ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಈಗ ಅವರು ಎಲ್ಲಿದ್ದಾರೆ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ! [ರಾಧಿಕಾ ಕುಮಾರಸ್ವಾಮಿ ಬಗ್ಗೆ ಸ್ಫೋಟಗೊಂಡಿರುವ ಸುದ್ದಿ ನಿಜವೇ?]

ಹೀಗಿರುವಾಗಲೇ, ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ 'ನಮಗಾಗಿ' ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಸದ್ದಿಲ್ಲದೇ 'ನಮಗಾಗಿ' ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಅಂತ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಮಾತುಗಳು ಕೇಳಿಬಂದಿದ್ದವು. ಈಗ ಅದೂ ಸುಳ್ಳು ಅಂತ ಗೊತ್ತಾಗಿದೆ. ಮುಂದೆ ಓದಿ....

ರಾಧಿಕಾ ಕುಮಾರಸ್ವಾಮಿ ಬಣ್ಣ ಹಚ್ಚಿಲ್ಲ!

ರಾಧಿಕಾ ಕುಮಾರಸ್ವಾಮಿ ಬಣ್ಣ ಹಚ್ಚಿಲ್ಲ!

'ರುದ್ರತಾಂಡವ' ಸಿನಿಮಾ ಬಿಡುಗಡೆ ಆದ್ಮೇಲೆ, ನಟಿ ರಾಧಿಕಾ ಕುಮಾರಸ್ವಾಮಿ 'ನಮಗಾಗಿ' ಚಿತ್ರದ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿದರು. ಒಂದಷ್ಟು ದಿನ ಶೂಟಿಂಗ್ ನಲ್ಲಿ ಭಾಗವಹಿಸಿದರು. ಆಮೇಲೆ ಇದ್ದಕ್ಕಿದ್ದಂತೆ ರಾಧಿಕಾ ಕುಮಾರಸ್ವಾಮಿ ನಾಪತ್ತೆ ಆದರು. [ರೀಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ 'ರಿಯಲ್' ಲೈಫ್ ಸ್ಟೋರಿ.?]

ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ!

ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ!

ಒಂದು ವರ್ಷದಿಂದ ನಟಿ ರಾಧಿಕಾ ಕುಮಾರಸ್ವಾಮಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. [ನಟಿ ರಾಧಿಕಾ ಕೆಣಕಿದ್ದಕ್ಕೆ ವಿಜಯ್ ರಾಘವೇಂದ್ರ ಗರಂ]

ಶೂಟಿಂಗ್ ಶುರು ಆಗಿಲ್ಲ ಅಂತಾರೆ ನಿರ್ದೇಶಕ

ಶೂಟಿಂಗ್ ಶುರು ಆಗಿಲ್ಲ ಅಂತಾರೆ ನಿರ್ದೇಶಕ

'ನಮಗಾಗಿ' ಚಿತ್ರದ ಶೂಟಿಂಗ್ ಗೆ ಮರು ಚಾಲನೆ ನೀಡಿಲ್ಲ ಅಂತ 'ಉದಯವಾಣಿ' ದಿನಪತ್ರಿಕೆಗೆ ಚಿತ್ರದ ನಿರ್ದೇಶಕ ರಘುರಾಮ್ ಸ್ಪಷ್ಟ ಪಡಿಸಿದ್ದಾರೆ. [ನಟಿ ರಾಧಿಕಾ ಕುಮಾರಸ್ವಾಮಿ ಸಿಕ್ಕೋದೇ 'ಡೌ'ಟು]

ಏನಂತಾರೆ ನಿರ್ದೇಶಕ ರಘುರಾಮ್?

ಏನಂತಾರೆ ನಿರ್ದೇಶಕ ರಘುರಾಮ್?

''ನನಗೆ ಗೊತ್ತಿಲ್ಲದೆ ಚಿತ್ರೀಕರಣ ಶುರು ಆಗಲು ಸಾಧ್ಯವಿಲ್ಲ. ಸದ್ಯಕ್ಕೆ ಸಿನಿಮಾ ನಿಂತು ಒಂದು ವರ್ಷ ಆಗುತ್ತಾ ಬಂತು. ನಾನು ಕೂಡ ಚಿತ್ರದ ಚಿತ್ರೀಕರಣಕ್ಕೆ ಕಾಯುತ್ತಿದ್ದೇನೆ'' ಅಂತ 'ಉದಯವಾಣಿ' ಪ್ರತಿಕೆಗೆ 'ನಮಗಾಗಿ' ನಿರ್ದೇಶಕ ರಘುರಾಮ್ ತಿಳಿಸಿದ್ದಾರೆ.

ರಾಧಿಕಾ ಎಲ್ಲಿ?

ರಾಧಿಕಾ ಎಲ್ಲಿ?

''ರಾಧಿಕಾ ಅವರೂ ಕೂಡ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಕೆಲ ದಿನಗಳ ಹಿಂದೆ ಅವರ ಸಹೋದರನ ಜೊತೆ ಮಾತನಾಡಿದೆ ಅಷ್ಟೆ. ಸಿನಿಮಾ ಮತ್ತೆ ಯಾವಾಗ ಆರಂಭವಾಗುತ್ತೋ, ಗೊತ್ತಿಲ್ಲ'' ಎಂದಿದ್ದಾರೆ ನಿರ್ದೇಶಕ ರಘುರಾಮ್.

ಮಂಗಳೂರಿನಲ್ಲಿ ರಾಧಿಕಾ?

ಮಂಗಳೂರಿನಲ್ಲಿ ರಾಧಿಕಾ?

ಕೆಲ ವರದಿಗಳ ಪ್ರಕಾರ, ನಟಿ ರಾಧಿಕಾ ಕುಮಾರಸ್ವಾಮಿ ಮಂಗಳೂರಿನಲ್ಲಿದ್ದಾರಂತೆ.

ಚಿತ್ರರಂಗದಿಂದ ದೂರ ಉಳಿಯಲು ಕಾರಣ?

ಚಿತ್ರರಂಗದಿಂದ ದೂರ ಉಳಿಯಲು ಕಾರಣ?

ನಟನೆ ಅಂದ್ರೆ ಪಂಚಪ್ರಾಣ ಅಂತ ಹೇಳುವ ನಟಿ ರಾಧಿಕಾ ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿಯಲು ಕಾರಣವೇನೆಂಬುದು ಮಾತ್ರ ತಿಳಿದು ಬಂದಿಲ್ಲ.

ವಿಡಿಯೋ ನೋಡಿ...

ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ 'ನಮಗಾಗಿ' ಚಿತ್ರದ ಬಗೆಗಿನ ಲೇಟೆಸ್ಟ್ ಅಪ್ ಡೇಟ್ ಇಲ್ಲಿದೆ. ವಿಡಿಯೋ ನೋಡಿ...

More from Filmibeat

English summary
According to the latest report published by Kannada Daily Udayavani, Kannada Actress cum Producer Radhika Kumaraswamy is still unavailable and 'Namagagi' shooting has been shelved.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X