Don't Miss!
- News
ಡಿಕೆಶಿ ಯಾರ ಯಾರ ಸಿಡಿ ಮಾಡ್ತಿದ್ದಾರೋ .? ಇನ್ನು ಯಾವ ಸಿಡಿ,ಸಿನಿಮಾ,ಟ್ರೈಲರ್ ಇದೆ ಅವರನೇ ಕೇಳ್ಬೇಕು: ಅಶ್ವತ್ಥ ನಾರಾಯಣ್
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹುಬ್ಬಳ್ಳಿಯಲ್ಲಿ 'ಕಾಂತಾರ' ಮರುಸೃಷ್ಟಿ, ಶಾಲಾ ವಿದ್ಯಾರ್ಥಿಗಳಿಂದ ಪ್ರಯೋಗ
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ 'ಕಾಂತಾರ' ಭಾರಿ ದೊಡ್ಡ ಹಿಟ್ ಆಗಿದ್ದು, ದೈವದ ಆಚರಣೆ, ಕೋಲ, ಕಂಬಳದ ವಿಷಯಗಳನ್ನು ಒಳಗೊಂಡಿರುವ ಈ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿದೆ.
'ಕಾಂತಾರ' ಸಿನಿಮಾ ಹಿಟ್ ಆದ ಬಳಿಕ ಹಲವರು 'ಕಾಂತಾರ'ದಲ್ಲಿ ಬರುವ ಪಂಜುರ್ಲಿ ದೈವದಂತೆ ವೇಷತೊಟ್ಟು ಅನುಕರಣೆ ಮಾಡುವ ಯತ್ನ ಮಾಡುತ್ತಲೇ ಬಂದಿದ್ದಾರೆ. ಪಂಜುರ್ಲಿಯ ಅನುಕರಣೆ ಮಾಡುವುದು ಬೇಡವೆಂದು ಚಿತ್ರತಂಡ ಮನವಿ ಮಾಡಿದ್ದರೂ ಸಹ ಅದು ನಿಂತಿಲ್ಲ. ಕೆಲವರು ಕ್ಷುಲ್ಲಕವಾಗಿ ರೀಲ್ಸ್ಗಳಿಗೆಲ್ಲ ಹೀಗೆ ಅನುಕರಣೆ ಮಾಡಿ ವಿವಾದ ಎಬ್ಬಿಸಿದ್ದೂ ಇದೆ.
ಹೌದು, ನಗರದ ಬೈರಿದೇವರಕೊಪ್ಪದಲ್ಲಿರುವ ಶ್ರೀ ಗುರು ಮಹಾವಿದ್ಯಾಪೀಠ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ವಾರ್ಷಿಕೋತ್ಸವದಲ್ಲಿ, ಸಾಯಿಕಿಶನ ಸುನಿಲ ರೇವಣಕರ ಎಂಬ ಬಾಲಕ 'ಕಾಂತಾರ' ಚಿತ್ರದ ಪಂಜುರ್ಲಿ ದೈವದ ಪಾತ್ರವನ್ನು ಮರು ಸೃಷ್ಟಿ ಮಾಡಿದ್ದಾನೆ.
ವಾರ್ಷಿಕೋತ್ಸವದಲ್ಲಿ 'ಪಂರ್ಜುಲಿ'ಯ ವೇಷ ಧರಿಸಿ, 'ಕಾಂತಾರ'ದ ಕೆಲ ದೃಶ್ಯಗಳನ್ನು ವೇದಿಕೆ ಮೇಲೆ ಮರುಸೃಷ್ಟಿ ಮಾಡಿದ್ದಾನೆ ಈ ಬಾಲಕ. ಪಂಜುರ್ಲಿಯ ಪಾತ್ರ ಮಾಡುವ ಮುನ್ನ ಅದಕ್ಕೆ ಬೇಕಾದ ನಿಯಮ ಪಾಲಿಸಿದ್ದಾನೆ. ಈ ಪಾತ್ರ ಮಾಡಲು ಸಾಯಿ ಕಿಶನ್ 9 ದಿನಗಳ ವೃತ ಮಾಡಿ, ಈ ಪಾತ್ರವನ್ನು ಅಭ್ಯಾಸ ಮಾಡಿ ಬಹಳ ಸುಂದರ ಮತ್ತು ಅಚ್ಚುಕಟ್ಟಾಗಿ ನಿಭಾಯಿಸಿದ್ದಾನೆ.
ಬಾಲಕ ಸಾಯಿಕಿಶನ್, 'ಕಾಂತಾರ' ದೃಶ್ಯದ ಅನುಕರಣೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಸಿನಿಮಾದಲ್ಲಿ ಊರ ಜನರು, ಅರಣ್ಯಾಧಿಕಾರಿಯ ಕೈ ಹಿಡಿದುಕೊಳ್ಳುವ ದೈವ, ಎಲ್ಲರನ್ನೂ ಕಾಪಾಡುವಂತೆ ಹೇಳಿದಂತೆ, ಸಾಯಿಕಿಶನ್, ತಮ್ಮ ಶಾಲಾ ಮುಖ್ಯೋಪಾಧ್ಯಾಯರ ಕೈಹಿಡಿದು ಮಕ್ಕಳನ್ನು ಕಾಪಾಡುವಂತೆ ಹೇಳುತ್ತಾನೆ.
'ಕಾಂತಾರ' ಸಿನಿಮಾದಲ್ಲಿ ಬರುವ ದೈವದ ಅನುಕರಣೆ ಮಾಡಬೇಡಿ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಮನವಿ ಮಾಡಿದ್ದರು. ತಾವು ಬಹಳ ನೇಮ ನಿಷ್ಠೆ ಪಾಲಿಸಿ ಅನುಕರಣೆ ಮಾಡಿದ್ದೇವೆ, ಎಲ್ಲರೂ ಹಾಗೆ ಮಾಡಲಾಗುವುದಿಲ್ಲ. ಸಾಮಾಜಿಕ ಜಾಲತಾಣಕ್ಕಾಗಿ ದೈವದ ಅನುಕರಣೆ ಮಾಡಿದರೆ ಅಪಮಾನ ಮಾಡಿದಂತಾಗುತ್ತದೆ ಎಂದು ಮನವಿ ಮಾಡಿದ್ದರು.