Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾಜ್ ಕುಮಾರ್ ಹೊಸ ಚಿತ್ರ 'ಬಂಗಾರದ ವಂಶ'
ವರನಟ ಡಾ.ರಾಜ್ ಕುಮಾರ್ ಅವರ 'ಬಂಗಾರದ ಮನುಷ್ಯ' (1972) ಚಿತ್ರ ಹಲವು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗಿತ್ತು. ಆ ಚಿತ್ರವನ್ನು ನೋಡಿದ ಅದೆಷ್ಟೋ ಅಭಿಮಾನಿಗಳು ನೇಗಿಲು ಹಿಡಿದರು. ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಸಂಪ್ರದಾಯದ ಚಿತ್ರಗಳಿಗೆ ನಾಂದಿ ಹಾಡಿದ ಖ್ಯಾತಿ ಆ ಚಿತ್ರಕ್ಕೆ ಸಲ್ಲುತ್ತದೆ.
ಇದೀಗ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಒಂದು ಸಾರಿ ಕೇಳಿದ ಕೂಡಲೇ ಬಂಗಾರದ ಮನುಷ್ಯ ನೆನಪಾಗೋ ಸಿನಿಮಾ ಟೈಟಲ್ ಕೈಗೆತ್ತಿಕೊಂಡಿದ್ದಾರೆ. ಇದು ಶಿವಣ್ಣ ಹಾಗೂ ರಾಧಿಕಾ ಕುಮಾರಸ್ವಾಮಿ ಅಣ್ಣ ತಂಗಿಯಾಗಿ ಜೋಡಿಯಾಗ್ತಿರೋ ಸಿನಿಮಾ. ಚಿತ್ರದ ಟೈಟಲ್ 'ಬಂಗಾರದ ವಂಶ'. [ಶಿವಣ್ಣನಿಗೆ ತಂಗಿ ರಾಧಿಕಾ ಕುಮಾರಸ್ವಾಮಿ ಭರ್ಜರಿ ಗಿಫ್ಟ್]
ಅಣ್ಣ ತಂಗಿ ಸೆಂಟಿಮೆಂಟ್ ಸಿನಿಮಾಗಳ ಸರದಾರ ಸಾಯಿಪ್ರಕಾಶ್ ಒಂದು ಅದ್ಭುತ ಕಥೆ ಹೆಣೆದಿದ್ದಾರೆ. ಹಿಂದಿನ ಕಥೆಗಳಿಗಿಂತ ಇದು ಸ್ವಲ್ಪ ಮಾಡರ್ನ್ ಕಥೆಯಾಗಿದ್ದು ಇಲ್ಲಿ ಶಿವಣ್ಣನನ್ನೂ ಒಬ್ಬ ಶ್ರೀಮಂತ ವ್ಯಕ್ತಿಯನ್ನಾಗಿ ತೋರಿಸ್ತಾರಂತೆ ಅನ್ನೋ ಗುಸು ಗುಸು ಗಾಂಧಿನಗರದಲ್ಲಿದೆ.
ಇನ್ನು ಶಿವಣ್ಣ-ರಾಧಿಕಾ ಜೋಡಿಯ ಅಣ್ಣ ತಂಗಿ ಸಿನಿಮಾ ಆಗಿರೋದ್ರಿಂದ ಅದನ್ನ ನೋಡೋದಕ್ಕೇನೇ ದೊಡ್ಡ ಫ್ಯಾಮಿಲಿ ಪ್ರೇಕ್ಷಕ ವರ್ಗವಿದೆ. ಆದರೆ ಸದ್ಯದ ಸುದ್ದಿ ಅಂದ್ರೆ ಫೆಬ್ರವರಿಯಲ್ಲಿ ಸೆಟ್ಟೇರಬೇಕಿದ್ದ ಸಿನಿಮಾ ಚುನಾವಣೆಯ ಕಾರಣದಿಂದ ಮೂರು ತಿಂಗಳು ಮುಂದೆ ಹೋಗಿದೆ. (ಒನ್ಇಂಡಿಯಾ ಕನ್ನಡ)