Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಟಿಲ್ ಫೋಟೋಗ್ರಾಫರ್ ಬಸವರಾಜ್ ಕ್ಯಾನ್ಸರ್ ಗೆ ಬಲಿ
ಈ ಕ್ಯಾನ್ಸರ್ ಮಹಾಮಾರಿ ಸಾಕಷ್ಟು ಕಲಾವಿದರನ್ನು ನುಂಗಿ ನೀರು ಕುಡಿದಿದೆ. ಕೆಲವು ಕಲಾವಿದರು ಕ್ಯಾನ್ಸರ್ ಗೆದ್ದರೆ ಇನ್ನೂ ಕೆಲವರು ಅದಕ್ಕೆ ಬಲಿಯಾಗಿದ್ದಾರೆ. ಕೆಲವರು ಈ ಮಹಾಮಾರಿ ಜೊತೆ ಹೋರಾಡುತ್ತಲೇ ಇದ್ದಾರೆ. ಇತ್ತೀಚೆಗೆ ಕೆಂಗೇರಿ ಬಸವರಾಜ್ (45) ಕ್ಯಾನ್ಸರ್ ಮಹಾಮಾರಿಗೆ ಬಲಿಯಾಗಿದ್ದಾರೆ.
ಸುದೀರ್ಘ ಸಮಯದಿಂದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇದಕ್ಕೆ ಅವರ ಕೆಟ್ಟ ಅಭ್ಯಾಸವೇ ಕಾರಣ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. ಸದಾ ಪಾನ್ ಪರಾಗ್ ಹಾಗೂ ಜರ್ದಾ ಜಗಿದು ಜಗಿದು ಅವರಿಗೆ ಕ್ಯಾನ್ಸರ್ ಆಗಿತ್ತು. ಕಡೆಗೆ ಕ್ಯಾನ್ಸರ್ ಅವರನ್ನು ಜಗಿಯಲು ಶುರುಮಾಡಿತು.
ಸರಳ ಜೀವಿಯಾಗಿದ್ದ ಬಸವರಾಜ್ ಅವರು ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಹಾಗೂ ಸೂರಪ್ಪ ಬಾಬು ಬ್ಯಾನರ್ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ತರ್ಲೆ ನನ್ ಮಕ್ಕಳು, ದಶಮುಖ ಸೇರಿದಂತೆ ಹಲವು ಚಿತ್ರಗಳಿಗೆ ಅವರು ಸ್ಥಿರ ಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.
ಯಾಕೋ ಏನೋ 'ಅಂಬರ' ಚಿತ್ರತಂಡಕ್ಕೆ ಸಾಕಷ್ಟು ವಿಘ್ನಗಳೇ ಎದುರಾಗುತ್ತಿವೆ. ಈ ಹಿಂದೆ ಈ ಚಿತ್ರದ ಸಹಾಯಕ ಕಲಾ ನಿರ್ದೇಶಕ ಸದಾಶಿವಯ್ಯ (48) ಚಿತ್ರೀಕರಣ ವೇಳೆ ಗಂಗಾನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಈಗ ಅದೇ ಚಿತ್ರದ ತಾಂತ್ರಿಕ ಬಳಗಕ್ಕೆ ಸೇರಿರುವ ಬಸವರಾಜ್ ಅವರನ್ನು ಕ್ಯಾನ್ಸರ್ ಹೆಮ್ಮಾರಿ ಕಸಿದುಕೊಂಡಿದೆ. (ಏಜೆನ್ಸೀಸ್)