Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಥಗ್ಸ್ ಆಫ್ ಮಾಲ್ಗುಡಿ' ಗೊಂದಲಕ್ಕೆ ಬ್ರೇಕ್ ಹಾಕಿದ ಸುದೀಪ್
ರಕ್ಷಿತ್ ಶೆಟ್ಟಿ ಹಾಗೂ ಕಿಚ್ಚ ಸುದೀಪ್ ಜೋಡಿಯಲ್ಲಿ ಮೂಡಿ ಬರಬೇಕಿದ್ದ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಬಗ್ಗೆ ಕಳೆದ ಎರಡ್ಮೂರು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆ. ಸಿನಿಮಾ ನಿಂತೋಯ್ತಂತೆ, ಸುದೀಪ್ ಮಾಡಲ್ವಂತೆ, ರಕ್ಷಿತ್ ಶೆಟ್ಟಿ ಮಾಡ್ತಾರಂತೆ......ಹೀಗೆ ವಿಭಿನ್ನ ವಿಭಿನ್ನವಾದ ಸುದ್ದಿಗಳು ಹರಿದಾಡುತ್ತಿದೆ.
ಈ ಸಿನಿಮಾಗೆ ಸಂಬಂಧಪಟ್ಟಂತೆ ರಕ್ಷಿತ್ ಶೆಟ್ಟಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಿನಿಮಾ ತಡವಾಗಲಿದೆ ಎಂಬ ಸೂಚನೆ ಕೊಟ್ಟಿದ್ದರು. ಆದ್ರೆ, ಕಿಚ್ಚ ಸುದೀಪ್ ಅವರ ಕಡೆಯಿಂದ ಈ ಗೊಂದಲಕ್ಕೆ ಬ್ರೇಕ್ ಬಿದ್ದಿದೆ. ಹಿರಿಯ ಪತ್ರಕರ್ತ ಜೋಗಿ ಅವರ ನಡೆಸಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್ ಎಲ್ಲ ಊಹಾಪೂಹಾಗಳಿಗೆ ತೆರೆ ಎಳೆದರು.
'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಬಗ್ಗೆ ಸುದೀಪ್ ಏನಂದ್ರು? ಮುಂದೆ ಓದಿ....
'ಥಗ್ಸ್ ಆಫ್ ಮಾಲ್ಗುಡಿ' ನಿಂತಿರುವುದು ನಿಜ
'ಥಗ್ಸ್ ಆಫ್ ಮಾಲ್ಗುಡಿ' ಚಿತ್ರ ನಿಂತು ಹೋಗಿರುವುದು ನಿಜ ಎಂದು ಸ್ವತಃ ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದಾರೆ.
ಸುದೀಪ್ ಕೊಟ್ಟ ಸ್ಪಷ್ಟನೆ
''ಥಗ್ಸ್ ಆಫ್ ಮಾಲ್ಗುಡಿ ಮಾಡ್ತಿನಿ ಎಂದು ಅವರು ಘೋಷಣೆ ಮಾಡಿ ಬಹುಶಃ ಮೂರು ವರ್ಷ ಆಯಿತು. ಮಾಡೋಣ ಅಂತ ಅಂದುಕೊಂಡಿದ್ವಿ. ಆದ್ರೆ, ಹೋಗ್ತಾ ಹೋಗ್ತಾ......ಅವರು ಬಿಜಿ ಇದ್ದಾರೆ. ಇನ್ನು ಮುಂದೆ ಕಷ್ಟವಾಗಬಹುದೇನೋ'' - ಸುದೀಪ್, ನಟ
ನನಗೆ ಆಗುತ್ತೆ ಎನ್ನುವ ಭರವಸೆ ಇಲ್ಲ
''ಒಂದು ಕಡೆ ಬಿಜಿ ಇರಬೇಕಾದ್ರೆ ಕರೆದು, ಆವಾಗ ಡೇಟ್ ಕೇಳಿದ್ರಿ ಎಂದು ನೆನಪಿಸಿ ಈಗ ಸಿನಿಮಾ ಮಾಡಿ ಎನ್ನುವುದು ತಪ್ಪಾಗಬಹುದೇನೋ. ಬೆಳೆಯವವರಿಗೆ ಬೆಳೆಯಲು ಬಿಟ್ಟು ಬಿಡಬೇಕು. ನಾವು ಮುಂದೆ ಹೋಗ್ತಾ ಇರ್ಬೇಕು. ಸದ್ಯದ ಮಟ್ಟಿಗೆ ಥಗ್ಸ್ ಆಫ್ ಮಾಲ್ಗುಡಿ ಆಗುತ್ತೆ ಎನ್ನುವ ಭರವಸೆ ಇಲ್ಲ'' ಸುದೀಪ್, ನಟ
ರಕ್ಷಿತ್ ಶೆಟ್ಟಿ ಹೇಳುವುದೇನು?
ಸಿನಿಮಾ ಮಾಡುವುದು ತಡವಾಯಿತು. ನಾನು ಬೇರೆ ಚಿತ್ರಗಳಲ್ಲಿ ಬಿಜಿ ಇದ್ದ ಕಾರಣ ಥಗ್ಸ್ ಆಫ್ ಮಾಲ್ಗುಡಿ ಶುರು ಮಾಡಲು ಸಾಧ್ಯವಾಗಲಿಲ್ಲ. ಅಂದುಕೊಂಡಂತೆ ಆಗಿದ್ದರೇ, ಜೂನ್ ಗೆ ಆರಂಭವಾಗಬೇಕಿತ್ತು. ಈಗ ಸುದೀಪ್ ಅವರೇ ಬೇಡವೆಂದಿದ್ದಾರೆ. ಹಾಗಂತ ನಾನು ಪ್ರಾಜೆಕ್ಟ್ ಡ್ರಾಪ್ ಮಾಡಲ್ಲ''
ಸುದೀಪ್ ಬಿಟ್ಟರೇ ಬೇರೆ ಯಾರಿಗೂ ಮಾಡಲ್ಲ
''ಅವನೇ ಶ್ರೀಮನ್ನಾರಾಯಣ ಚಿತ್ರದ ನಂತರ ಥಗ್ಸ್ ಆಫ್ ಮಾಲ್ಗುಡಿ ಸ್ಕ್ರಿಪ್ಟ್ ಶುರು ಮಾಡುತ್ತೇನೆ. ಎಲ್ಲ ಮುಗಿದ ಮೇಲೆ ಮತ್ತೆ ಸುದೀಪ್ ಅವರ ಬಳಿ ಹೋಗುತ್ತೇನೆ. ಅವರಿಗೆ ಆಸಕ್ತಿ ಇದ್ದರೆ ಖಂಡಿತಾ ಮಾಡುತ್ತೇನೆ. ಇಲ್ಲವಾದಲ್ಲಿ, ಬೇರೆ ಯಾರಿಗೂ ಈ ಸ್ರಿಪ್ಟ್ ಮಾಡಲ್ಲ'' ಎಂದಿದ್ದಾರೆ.